ಆ್ಯಪ್ನಗರ

ಕಾರಿಗೆ ಬಸ್‌ ಡಿಕ್ಕಿ: ಒಬ್ಬರ ಸಾವು

ಹುಣಸೂರು-ಗೋಣಿಕೊಪ್ಪ ಹೆದ್ದಾರಿಯ ತಾಲೂಕಿನ ಹರೀನಹಳ್ಳಿ ಬಳಿ ಕಾರಿಗೆ, ಸಾರಿಗೆ ಸಂಸ್ಥೆ ಬಸ್‌ ಡಿಕ್ಕಿ ಹೊಡೆದು ಮೆಡಿಕಲ್‌ ರೆಪ್‌ ಒಬ್ಬರು ಸ್ಥಳದಲ್ಲೇ ಮೃತಪಟ್ಟರು.

Vijaya Karnataka 8 Jun 2019, 5:00 am
ಹುಣಸೂರು: ಹುಣಸೂರು-ಗೋಣಿಕೊಪ್ಪ ಹೆದ್ದಾರಿಯ ತಾಲೂಕಿನ ಹರೀನಹಳ್ಳಿ ಬಳಿ ಕಾರಿಗೆ, ಸಾರಿಗೆ ಸಂಸ್ಥೆ ಬಸ್‌ ಡಿಕ್ಕಿ ಹೊಡೆದು ಮೆಡಿಕಲ್‌ ರೆಪ್‌ ಒಬ್ಬರು ಸ್ಥಳದಲ್ಲೇ ಮೃತಪಟ್ಟರು.
Vijaya Karnataka Web bus collision person death
ಕಾರಿಗೆ ಬಸ್‌ ಡಿಕ್ಕಿ: ಒಬ್ಬರ ಸಾವು


ಮಂಡ್ಯದ ನಿವಾಸಿ ವೇಣುಗೋಪಾಲರ ಪುತ್ರ ವಿಷ್ಣುಪ್ರಸಾದ್‌(43) ಮೃತರು. ಇವರಿಗೆ ಪತ್ನಿ, ಮಕ್ಕಳಿದ್ದಾರೆ. ಇವರ ಸ್ನೇಹಿತರಾದ ಶಿವು ಹಾಗೂ ಮತ್ತೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಕಾರ್ಯ ನಿಮಿತ್ತ ವೀರಾಜಪೇಟೆಗೆ ಹೋಗಿದ್ದು, ವಾಪಸ್‌ ಬರುವ ವೇಳೆ ತಾಲೂಕಿನ ಹರೀನಹಳ್ಳಿ-ಮುತ್ತುರಾಯನ ಹೊಸಹಳ್ಳಿ ನಡುವೆ ಅಪಘಾತ ನಡೆದಿದ್ದು, ತೀವ್ರಗಾಯಗೊಂಡಿದ್ದ ವಿಷ್ಣುಪ್ರಸಾದ್‌ ಸ್ಥಳದಲ್ಲೇ ಮೃತಪಟ್ಟರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಐ ಶಿವಪ್ರಕಾಶ್‌ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ