ಮೈಸೂರು: ಚಾಮುಂಡಿಬೆಟ್ಟದಲ್ಲಿ ದೇವಿ ದರ್ಶನಕ್ಕೆ ಆಗಮಿಸಿದ್ದ ಪ್ರವಾಸಿಗರ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಶುಕ್ರವಾರ ಬೆಳ್ಳಂಬೆಳಗ್ಗೆ ಘಟನೆ ನಡೆದಿದ್ದು , ಬಸ್ ನಲ್ಲಿ ಧಿಡೀರ್ ಬೆಂಕಿ ಕಾಣಿಸಿಕೊಂಡಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಚಾಮುಂಡಿಬೆಟ್ಟಕ್ಕೆ ಬಸ್ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಘಟನೆ ನಡೆದಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಸಾಕಷ್ಟು ಭಯಗೊಂಡಿದ್ದರು. ತಕ್ಷಣವೇ ಎಲ್ಲರನ್ನು ಬಸ್ ನಿಂದ ಕೆಳಗೆ ಇಳಿಸಲಾಯ್ತು. ಇದ್ರಿಂದಾಗಿ ಕೆಲಕಾಲ ಸಂಚಾರಕ್ಕೆ ಅಡ್ಡಿ ಉಂಟಾಯ್ತು.
ಡೀಸೆಲ್ ಲೀಕ್..?
ಡೀಸೆಲ್ ಲೀಕೇಜ್ ನಿಂದಾಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದಂತೆ ಹೊಗೆ ಹೊರಬರಲಾರಂಭಿಸಿತ್ತು.ಬಳಿಕ ಹೊಗೆ ಬರುತ್ತಿದ್ದ ಸೈಲೆನ್ಸರ್ ಪೈಪ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡ್ತಿದ್ದಂತೆ ಹೆಚ್ಚಾಯ್ತು.ಕೂಡಲೇ ಬೆಂಕಿಯ ಸಂಪರ್ಕದ ವೈರ್ ಗಳನ್ನು ಚಾಲಕ ಕಟ್ ಮಾಡಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
15 ನಿಮಿಷ ಆತಂಕ
ಬೆಂಕಿ ಹರಡುತ್ತಿದ್ದ ಸಂಪರ್ಕದ ವೈರ್ ಕಟ್ ಮಾಡಿದ ಬಳಿಕ ಬೆಂಕಿ ಆರಿದೆ. ಬಸ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ರು ಅಂತ ಹೇಳಲಾಗಿದೆ.ಚಾಮುಂಡಿ ದರ್ಶನಕ್ಕಾಗಿ ಬೆಳಗ್ಗೆ ಬೆಟ್ಟಕ್ಕೆ ತೆರಳುತ್ತಿದ್ದ ಪ್ರವಾಸಿಗರಿಗೆ ಮಾರ್ಗ ಮಧ್ಯೆ ಶಾಕ್ ಎದುರಾಗಿದೆ.ಚಾಲಕನ ಸಮಯ ಪ್ರಜ್ಞೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ಪ್ರಯಾಣಿಕರಿಗೆ ಗಾಬರಿ
ಬಸ್ ನಲ್ಲಿದ್ದ ಅಷ್ಟೂ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಯಾವಾಗಲೂ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವಿಚಾರ ಗೊತ್ತಾಯ್ತೋ, ಎಲ್ರೂ ಕಿರುಚಾಡಿದ್ದು ತಕ್ಷಣವೇ ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಮಕ್ಕಳು ವಯಸ್ಸಾದ ವೃದ್ಧರು ಸೇರಿ 50 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ರು ಅನ್ನೋ ಮಾಹಿತಿ ಗೊತ್ತಾಗಿದೆ.
ಟ್ರಿಪ್ ಬಂದವರಿಗೆ ಶಾಕ್
ಶುಕ್ರವಾರ ಚಾಮುಂಡಿ ದರ್ಶನ ಪಡೆಯೋಣ ಅಂತ ಪ್ರವಾಸಕ್ಕೆ ಬಂದಿದ್ದ ಪ್ರಯಾಣಿಕರಿಗೆ ಸಿಕ್ಕಾಪಟ್ಟೆ ಶಾಕ್ ಎದುರಾಗಿದೆ. ಯಾವಾಗ ಅರ್ಧಕ್ಕೆ ಬಸ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿತೋ , ಎಲ್ರೂ ವಾಪಸ್ ಮೈಸೂರು ನಗರಕ್ಕೆ ಹಿಂದಿರುಗಿದ್ದಾರೆ. ಅದೃಷ್ಟವಷಾತ್ ಎಲ್ಲರೂ ಬಚಾವ್ ಆಗಿದ್ದಾರೆ.
ಯಾವಾಗ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತೋ ದಾರಿಯಲ್ಲಿ ಸಾಗ್ತಿದ್ದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯ್ತು. ಅರ್ಧ ಗಂಟೆ ಬಳಿಕ ಎಲ್ಲ ಗೊಂದಲಗಳು ಬಗೆಹರಿಯಿತು.
ಡೀಸೆಲ್ ಲೀಕ್..?
ಡೀಸೆಲ್ ಲೀಕೇಜ್ ನಿಂದಾಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದಂತೆ ಹೊಗೆ ಹೊರಬರಲಾರಂಭಿಸಿತ್ತು.ಬಳಿಕ ಹೊಗೆ ಬರುತ್ತಿದ್ದ ಸೈಲೆನ್ಸರ್ ಪೈಪ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡ್ತಿದ್ದಂತೆ ಹೆಚ್ಚಾಯ್ತು.ಕೂಡಲೇ ಬೆಂಕಿಯ ಸಂಪರ್ಕದ ವೈರ್ ಗಳನ್ನು ಚಾಲಕ ಕಟ್ ಮಾಡಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
15 ನಿಮಿಷ ಆತಂಕ
ಬೆಂಕಿ ಹರಡುತ್ತಿದ್ದ ಸಂಪರ್ಕದ ವೈರ್ ಕಟ್ ಮಾಡಿದ ಬಳಿಕ ಬೆಂಕಿ ಆರಿದೆ. ಬಸ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ರು ಅಂತ ಹೇಳಲಾಗಿದೆ.ಚಾಮುಂಡಿ ದರ್ಶನಕ್ಕಾಗಿ ಬೆಳಗ್ಗೆ ಬೆಟ್ಟಕ್ಕೆ ತೆರಳುತ್ತಿದ್ದ ಪ್ರವಾಸಿಗರಿಗೆ ಮಾರ್ಗ ಮಧ್ಯೆ ಶಾಕ್ ಎದುರಾಗಿದೆ.ಚಾಲಕನ ಸಮಯ ಪ್ರಜ್ಞೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ಪ್ರಯಾಣಿಕರಿಗೆ ಗಾಬರಿ
ಬಸ್ ನಲ್ಲಿದ್ದ ಅಷ್ಟೂ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಯಾವಾಗಲೂ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವಿಚಾರ ಗೊತ್ತಾಯ್ತೋ, ಎಲ್ರೂ ಕಿರುಚಾಡಿದ್ದು ತಕ್ಷಣವೇ ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಮಕ್ಕಳು ವಯಸ್ಸಾದ ವೃದ್ಧರು ಸೇರಿ 50 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ರು ಅನ್ನೋ ಮಾಹಿತಿ ಗೊತ್ತಾಗಿದೆ.
ಟ್ರಿಪ್ ಬಂದವರಿಗೆ ಶಾಕ್
ಶುಕ್ರವಾರ ಚಾಮುಂಡಿ ದರ್ಶನ ಪಡೆಯೋಣ ಅಂತ ಪ್ರವಾಸಕ್ಕೆ ಬಂದಿದ್ದ ಪ್ರಯಾಣಿಕರಿಗೆ ಸಿಕ್ಕಾಪಟ್ಟೆ ಶಾಕ್ ಎದುರಾಗಿದೆ. ಯಾವಾಗ ಅರ್ಧಕ್ಕೆ ಬಸ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿತೋ , ಎಲ್ರೂ ವಾಪಸ್ ಮೈಸೂರು ನಗರಕ್ಕೆ ಹಿಂದಿರುಗಿದ್ದಾರೆ. ಅದೃಷ್ಟವಷಾತ್ ಎಲ್ಲರೂ ಬಚಾವ್ ಆಗಿದ್ದಾರೆ.
ಯಾವಾಗ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತೋ ದಾರಿಯಲ್ಲಿ ಸಾಗ್ತಿದ್ದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯ್ತು. ಅರ್ಧ ಗಂಟೆ ಬಳಿಕ ಎಲ್ಲ ಗೊಂದಲಗಳು ಬಗೆಹರಿಯಿತು.