ಆ್ಯಪ್ನಗರ

ಸಂಪುಟ ವಿಸ್ತರಣೆ ವೇಳೆ ಬಿಎಸ್‌ವೈ ನನಗೆ ಅನ್ಯಾಯ ಮಾಡಲ್ಲ: ಶಾಸಕ ರಾಮದಾಸ್‌ ವಿಶ್ವಾಸ

'ಈಗ ಹೊರಗಿನಿಂದ ಬಂದವರಿಗೆ ಅವಕಾಶ ನೀಡುತ್ತಾರೋ, ಒಳಗಿನವರಿಗೆ ಅವಕಾಶ ನೀಡುತ್ತಾರೋ ಎಂಬುದು ತಾಯಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು.' - ಶಾಸಕ ಎಸ್. ಎ. ರಾಮದಾಸ್ ಅಭಿಮತ

Vijaya Karnataka Web 18 Sep 2020, 7:01 pm
ಮೈಸೂರು: ಸಿಎಂ ಯಡಿಯೂರಪ್ಪ ನಮಗೆ ತಾಯಿ ಇದ್ದಂತೆ. ಅವರು ತಮ್ಮ ಮಕ್ಕಳಿಗೆ ಅನ್ಯಾಯ ಮಾಡಲ್ಲ. ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದನ್ನು ಅವರೇ ನಿರ್ಧಾರ ಮಾಡುತ್ತಾರೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web ramdas


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಎರಡು ಬಾರಿ ಕರ್ನಾಟಕ ಯುವ ಮೋರ್ಚಾದ ಅಧ್ಯಕ್ಷನಾಗಿದ್ದೆ. ಪಕ್ಷ ವಹಿಸಿದ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಮೈಸೂರು ನಗರದ ಬಿಜೆಪಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಸಾಮಾನ್ಯ ಕಾರ‍್ಯಕರ್ತ ನಾನು. ನಾನು ಯಾರೊಂದಿಗೂ ಸ್ಪರ್ಧೆ ಮಾಡುವುದಿಲ್ಲ. ಸಿಎಂ ಯಡಿಯೂರಪ್ಪ ನಮ್ಮ ನಾಯಕ. ಸಚಿವ ಸ್ಥಾನ ಕೊಟ್ಟರೆ ಕೆಲಸ ಮಾಡುವೆ. ಇಲ್ಲದಿದ್ದರೆ ಶಾಸಕನಾಗಿ ನಮ್ಮ ಕ್ಷೇತ್ರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಯಾವುದಕ್ಕೂ ಡಿಮ್ಯಾಂಡ್‌ ಮಾಡುವುದಿಲ್ಲ' ಎಂದು ರಾಮದಾಸ್ ಸ್ಪಷ್ಟಪಡಿಸಿದರು.

ವಾಚ್‍ಮ್ಯಾನ್ ಆಗಲಿಲ್ಲ ಆಸ್ತಿ ಬರೆದು ಕೊಡುತ್ತೀರಾ: ಜಮೀರ್ ಅಹಮದ್‌ಗೆ ಶಾಸಕ ರಾಮದಾಸ್ ಪ್ರಶ್ನೆ

'ನನಗೆ ಒಮ್ಮೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ನನ್ನ ಹೆಸರು ಕೈ ಬಿಟ್ಟಿದ್ದರು. ಅಧಿಕಾರ ಕೊಡುವ ಸಮಯದಲ್ಲಿ ಶ್ರೀರಾಮನನ್ನು ಕಾಡಿಗೆ ಕಳುಹಿಸಿದರು, ನಾನು ನಾಡಿನಲ್ಲಿದ್ದೇನೆ ಎಂದುಕೊಂಡು ಸುಮ್ಮನಾದೆ. ಈಗ ಹೊರಗಿನಿಂದ ಬಂದವರಿಗೆ ಅವಕಾಶ ನೀಡುತ್ತಾರೋ, ಒಳಗಿನವರಿಗೆ ಅವಕಾಶ ನೀಡುತ್ತಾರೋ ಎಂಬುದು ತಾಯಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ' ಎಂದು ಹೇಳಿದ ರಾಮದಾಸ್, ನಾಯಕತ್ವ ಬದಲಾವಣೆಯ ಚರ್ಚೆಯನ್ನು ತಳ್ಳಿಹಾಕಿದರು.

ಬೆಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಥರ್ಡ್‌ ಕ್ಲಾಸ್‌ ರಾಜಕೀಯ: ರಾಮದಾಸ್‌

ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, 'ಸಂಪುಟ ವಿಸ್ತರಣೆಯ ಪರಮಾಧಿಕಾರ ಮುಖ್ಯಮಂತ್ರಿಗಳದ್ದು. ಮುಖ್ಯಮಂತ್ರಿ ಬದಲಾವಣೆಯ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆಯೇ ಹೊರತು ಪಕ್ಷದಲ್ಲಲ್ಲ' ಎಂದು ಸ್ಪಷ್ಟಪಡಿಸಿದರು.

ಆಗಸ್ಟ್‌ ಐದರಂದು ಮೈಸೂರಿನ ಹತ್ತು ಸಾವಿರ ಮನೆಗಳಲ್ಲಿ ರಾಮ ಪೂಜೆ..! : ಶಾಸಕ ರಾಮದಾಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ