ಆ್ಯಪ್ನಗರ

ಕೆಲವೇ ಗಂಟೆಗಳಲ್ಲಿ ವ್ಯಾಪಾರಿ ಅಪಹರಣಕಾರರ ಸೆರೆ

ಹುಣಸೂರು-ಕಣ್ಣಾನೂರು ಹೆದ್ದಾರಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಅಪಹರಣ-ದರೋಡೆ ಪ್ರಕರಣವನ್ನು ಹುಣಸೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 2 Oct 2018, 5:00 am
ಹುಣಸೂರು: ಹುಣಸೂರು-ಕಣ್ಣಾನೂರು ಹೆದ್ದಾರಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಅಪಹರಣ-ದರೋಡೆ ಪ್ರಕರಣವನ್ನು ಹುಣಸೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web capture of merchant hijackers in just a few hours
ಕೆಲವೇ ಗಂಟೆಗಳಲ್ಲಿ ವ್ಯಾಪಾರಿ ಅಪಹರಣಕಾರರ ಸೆರೆ


ವಾಹನ ಸಮೇತ ಅಪಹರಣಕ್ಕೊಳಗಾಗಿದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ಹಣ್ಣಿನ ವ್ಯಾಪಾರಿ ಸುಬೇರ್‌ ಸುರಕ್ಷಿತವಾಗಿ ಬಿಡುಗಡೆಯಾಗಿದ್ದು, ಮಂಗಳೂರು ಮೂಲದ ಏಳು ದರೋಡೆಕೋರರನ್ನು ವಾಹನ ಸಮೇತ ಬಂಧಿಸಲಾಗಿದೆ.

ಭಾನುವಾರ ರಾತ್ರಿ ಕಾಸರಗೋಡಿನಿಂದ ಇರಟ್ಟಿ ಮಾರ್ಗವಾಗಿ ಚಾಲಕ ರಹಿಂ, ಸಹಾಯಕ ಸಂದೀಪ್‌ನೊಂದಿಗೆ ತಮ್ಮ ಗೂಡ್ಸ್‌ ವಾಹನದಲ್ಲಿ ಸುಬೇರ್‌ ಬೆಂಗಳೂರಿಗೆ ತೆರಳುತ್ತಿದ್ದಾಗ ಗೋಣಿಕೊಪ್ಪದಿಂದ ಕಾರೊಂದು ಹಿಂಬಾಲಿಸಿಕೊಂಡು ಬಂದಿದೆ. ಹುಣಸೂರು ತಾಲೂಕಿನ ದೇವರಾಜ ಕಾಲೋನಿ ಬಳಿ ಕಾರಿನಲ್ಲಿದ್ದ ತಂಡ ಗೂಡ್ಸ್‌ ವಾಹನವನ್ನು ಅಡ್ಡಗಟ್ಟಿ, ಸುಬೇರ್‌, ರಹೀಂ ಹಾಗೂ ಸಂದೀಪ್‌ನನ್ನು ಚೆನ್ನಾಗಿ ಥಳಿಸಿ, ಸುಬೇರ್‌ನನ್ನು ಕಾರಿನಲ್ಲಿ ಅಪಹರಿಸಿದ್ದರು. ಸುಬೇರ್‌ರ ಗೂಡ್ಸ್‌ ವಾಹನವನ್ನೂ ತೆಗೆದುಕೊಂಡು ಹೋಗಿದ್ದರು. ಬಳಿಕ ರಹೀಂ ಹಾಗೂ ಸಂದೀಪ್‌ ಹುಣಸೂರಿಗೆ ಬಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಎಸ್‌ಪಿ ಅಮಿತ್‌ ಸಿಂಗ್‌, ಎಎಸ್‌ಪಿ ಸ್ನೇಹಾ ಹಾಗೂ ಡಿವೈಎಸ್‌ಪಿ ಭಾಸ್ಕರ ರೈ ಮಾರ್ಗದರ್ಶನದಲ್ಲಿ ರಾತ್ರಿಯಿಂದಲೇ ವೃತ್ತ ನಿರೀಕ್ಷ ಕ ಕೆ.ಸಿ.ಪೂವಯ್ಯ ಎಸ್‌ಐ ಶಿವಪ್ರಕಾಶ್‌ ನೇತೃತ್ವದ ತಂಡ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಮಂಗಳೂರಿನಲ್ಲಿ ವಾಹನ ಸಮೇತ ಬಂಧಿಸುವಲ್ಲಿ ಯಶಶ್ವಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ