ಎಚ್.ಡಿ.ಕೋಟೆ: ತಾಲೂಕಿನ ಸೋಗಹಳ್ಳಿ ಬಳಿ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಚಾಲಕ ಮತ್ತು ಹಿಂಬದಿ ಸವಾರ ಮೃತಪಟ್ಟರು.
ಎಚ್.ಡಿ.ಕೋಟೆ ಪಟ್ಟಣದ ಕಾಳಿದಾಸ ರಸ್ತೆಯ ನಿವಾಸಿ ಸಾಹುಕಾರ್ ಸುಬ್ರಮಣಿ ಅವರ ಪುತ್ರ ದೊರೆಸ್ವಾಮಿ ಆಲಿಯಾಸ್ ಬಾಬು (53) ಮತ್ತು ಸವ್ವೆ ಗ್ರಾಮದ ರವಿಕುಮಾರ್ (26) ಮೃತರು.
ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆ, ಸೋಗಹಳ್ಳಿ ಬಳಿ ಶನಿವಾರ ಬೆಳಗ್ಗೆ ಸುಮಾರು 7ರ ಸಮಯದಲ್ಲಿ ಕೇರಳ ರಾಜ್ಯದ ಮಾನಂದವಾಡಿ ತಾಲೂಕಿನಿಂದ ಬಂದ ಕೇರಳ ರಾಜ್ಯದ ನೋಂದಣಿ ಇರುವ ಕಾರು ನೇರ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೊರೆಸ್ವಾಮಿ ಸ್ಥಳದಲ್ಲಿ ಮೃತ ಪಟ್ಟರೆ, ಹಿಂಬದಿ ಸವಾರ ರವಿಕುಮಾರ್ ಅವರನ್ನು ಚಿಕಿತ್ಸೆಗೆ ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತರುವ ಮಾರ್ಗಮಧÜ್ಯದಲ್ಲಿ ಮೃತಪಟ್ಟಿದ್ದಾರೆ. ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬೀಚನಹಳ್ಳಿ ಠಾಣಾ ಪಿಎಸ್ಐ ರಾಮಚಂದ್ರ ನಾಯಕ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.