ಆ್ಯಪ್ನಗರ

ಕಾರು ವಂಚನೆ: ದೂರು ದಾಖಲು

ಕಳವು ಮಾಡಿದ್ದ ಕಾರನ್ನು ಖದೀಮನೊಬ್ಬ ತನ್ನ ಕಾರೆಂದು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ.

Vijaya Karnataka 20 Aug 2018, 5:00 am
ಮೈಸೂರು: ಕಳವು ಮಾಡಿದ್ದ ಕಾರನ್ನು ಖದೀಮನೊಬ್ಬ ತನ್ನ ಕಾರೆಂದು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ.
Vijaya Karnataka Web car fraud complaint filed
ಕಾರು ವಂಚನೆ: ದೂರು ದಾಖಲು


ಬನ್ನಿಮಂಟಪದ ನಿವಾಸಿ ಸೈಯದ್‌ ಆಸೀಫ್‌ ಪಾಷ ಎಂಬಾತನೇ ಮಾರಾಟ ಮಾಡಿದ ಖದೀಮ. ಕೆ.ಆರ್‌. ನಗರದ ಅಬ್ದುಲ್‌ ರೆಹಮಾನ್‌ ಎಂಬುವರೇ ಕಳವಾಗಿದ್ದ ಕಾರನ್ನು ಖರೀದಿ ಮಾಡಿ ಮೋಸ ಹೋದವರು.

ಆಗಿದಿಷ್ಟು: ಕೆಲ ತಿಂಗಳ ಹಿಂದೆ ಅಬ್ದುಲ್‌ ರೆಹಮಾನ್‌ ಅವರನ್ನು ಪರಿಚಯ ಮಾಡಿಕೊಂಡ ಆಸೀಫ್‌ ಪಾಷ, ನಿಮ್ಮ ಬಳಿ ಇರುವ 2006 ಮಾಡೆಲ್‌ನ ಟೊಯೊಟಾ ಇನ್ನೋವಾ ಕಾರು ನೀಡಿದರೆ ನನ್ನ ಬಳಿ ಇರುವ 2012 ಮಾಡೆಲ್‌ನ ಟೊಯೊಟಾ ಕಾರನ್ನು ನೀಡುವುದಾಗಿ ಹೇಳಿದ್ದಾನೆ. ತನ್ನ ಕಾರಿಗೆ ಉತ್ತಮ ಬೆಲೆಯೊಂದಿಗೆ ಕಡಿಮೆ ಬೆಲೆಗೆ ಹೊಸ ಮಾಡೆಲ್‌ ಕಾರು ಸಿಗಲಿದೆ ಎಂದು ಹರ್ಷಗೊಂಡ ಅಬ್ದುಲ್‌ ರೆಹಮಾನ್‌, ತನ್ನ 2006 ರ ಕಾರನ್ನು 6.5 ಲಕ್ಷ ರೂ. ಮಾರಾಟ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಆಸೀಫ್‌ ಪಾಷ, ತನ್ನ ಬಳಿ ಇದ್ದ 2012 ಮಾಡೆಲ್‌ನ ಕಾರನ್ನು 9.75 ಲಕ್ಷ ರೂ.ಗೆ ನೀಡುವುದಾಗಿ ಹೇಳಿ, ಹೆಚ್ಚುವರಿಯಾಗಿ 3.25 ಲಕ್ಷ ರೂ. ಹಣವನ್ನು ಪಡೆದು, ಖರೀದಿ ಮಾಡಿದ ಕಾರಿನ ದಾಖಲೆಯೊಂದಿಗೆ ಡೆಲಿವರಿ ನೋಟ್‌ಗೆ ಅಬ್ದುಲ್‌ ರೆಹಮಾನ್‌ ಅವರಿಂದ ಸಹಿ ಮಾಡಿಸಿಕೊಂಡಿದ್ದ. ಬಳಿಕ ಕಾರಿನ ಫಾರಂ ನಂಬರ್‌ 29 ಮತ್ತು 30 ಕ್ಕೆ ಅಬ್ದುಲ್‌ ರೆಹಮಾನ್‌ ಅವರ ಸಹಿಯನ್ನು ನಕಲು ಮಾಡಿ, ಕಾರನ್ನು ಸಿದ್ದಿಖಿ ಮೊಹಲ್ಲಾದ ಸಫಿ ಅಹಮ್ಮದ್‌ ಗೆ ಮಾರಾಟ ಮಾಡಿ ಹಣವನ್ನು ಪಡೆದಿದ್ದಾನೆ.

ಇತ್ತ ಅಬ್ದುಲ್‌ ರೆಹಮಾನ್‌ 2012 ಮಾಡೆಲ್‌ನ ಕಾರನ್ನು ತೆಗೆದುಕೊಂಡು ಹೋಗಿದ್ದಲ್ಲದೇ ಅಗತ್ಯ ದಾಖಲೆ ಬರುತ್ತದೆ ಎಂದು ಕಾಯುತ್ತಿರುವಾಗಲೇ ಬಂದ ಬೆಂಗಳೂರಿನ ಕೊಣನಕುಂಟೆ ಪೊಲೀಸರು, ಕಳವಾಗಿದ್ದ ಕಾರೆಂದು ಸೀಜ್‌ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರ ನಡೆಯಿಂದ ಕಂಗಲಾದ ಅಬ್ದುಲ್‌ ರೆಹಮಾನ್‌, ತನ್ನ ಹಳೆಯ ಕಾರು ಮತ್ತು ಹಣವನ್ನು ಪಡೆಯಲು ಹೋದಾಗ ಕಾರು ಮತ್ತೋಬ್ಬರಿಗೆ ಮಾರಾಟ ಮಾಡಿರುವುದು ಕಂಡು ಶಾಕ್‌ ಆಗಿದ್ದಾರೆ. ಕದ್ದ ಕಾರನ್ನು ಮಾರಾಟ ಮಾಡಿದಲ್ಲದೇ, ತನ್ನ ಸಹಿ ನಕಲು ಮಾಡುವ ಮೂಲಕ ಕಾರನ್ನು ಮಾರಾಟ ಮಾಡಿ ವಂಚಿಸಿದ ಆಸೀಫ್‌ ಪಾಷ ವಿರುದ್ದ ಅಬ್ದುಲ್‌ ರೆಹಮಾನ್‌ ದೂರು ನೀಡಿದ್ದು, ಎನ್‌. ಆರ್‌. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ