ಕಾವೇರಿ ಕಣಿವೆ: 80 ಅಭ್ಯರ್ಥಿಗಳು, 123 ನಾಮಪತ್ರ ಸಲ್ಲಿಕೆ
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮಂಗಳವಾರ ಮುಕ್ತಾಯಗೊಂಡಿದ್ದು, ಕೊನೆ ದಿನ ಬಹಳಷ್ಟು ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
Vijaya Karnataka 27 Mar 2019, 5:00 am
ಮೈಸೂರು: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮಂಗಳವಾರ ಮುಕ್ತಾಯಗೊಂಡಿದ್ದು, ಕೊನೆ ದಿನ ಬಹಳಷ್ಟು ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಾವೇರಿ ಕಣಿವೆಯ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರದಲ್ಲಿ ರಾಷ್ಟ್ರೀಯ ಪಕ್ಷಗಳ ಹುರಿಯಾಳುಗಳು ಸೇರಿದಂತೆ ಪಕ್ಷೇತರ 80 ಅಭ್ಯರ್ಥಿಗಳು 123 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ 30 ಮಂದಿ 50 ನಾಮಪತ್ರ ಸಲ್ಲಿಸಿದರೆ, ಮಂಡ್ಯದಲ್ಲಿ 27 ಮಂದಿ 37 ನಾಮಪತ್ರ ಸಲ್ಲಿಸಿದ್ದಾರೆ. ಹಾಸನದಲ್ಲಿ 10 ಅಭ್ಯರ್ಥಿಗಳು 18 ನಾಮಪತ್ರ ಸಲ್ಲಿಸಿದರೆ, ಚಾಮರಾಜ ನಗರದಲ್ಲಿ 13 ಮಂದಿ 18 ನಾಮಪತ್ರ ಸಲ್ಲಿಸಿದ್ದಾರೆ. ಮಾ. 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಮಾ. 29ರವರೆಗೆ ಅವಕಾಶವಿದೆ.
ಕಾವೇರಿ ಕಣಿವೆಯ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರದಲ್ಲಿ ರಾಷ್ಟ್ರೀಯ ಪಕ್ಷಗಳ ಹುರಿಯಾಳುಗಳು ಸೇರಿದಂತೆ ಪಕ್ಷೇತರ 80 ಅಭ್ಯರ್ಥಿಗಳು 123 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ 30 ಮಂದಿ 50 ನಾಮಪತ್ರ ಸಲ್ಲಿಸಿದರೆ, ಮಂಡ್ಯದಲ್ಲಿ 27 ಮಂದಿ 37 ನಾಮಪತ್ರ ಸಲ್ಲಿಸಿದ್ದಾರೆ. ಹಾಸನದಲ್ಲಿ 10 ಅಭ್ಯರ್ಥಿಗಳು 18 ನಾಮಪತ್ರ ಸಲ್ಲಿಸಿದರೆ, ಚಾಮರಾಜ ನಗರದಲ್ಲಿ 13 ಮಂದಿ 18 ನಾಮಪತ್ರ ಸಲ್ಲಿಸಿದ್ದಾರೆ. ಮಾ. 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಮಾ. 29ರವರೆಗೆ ಅವಕಾಶವಿದೆ.