ಆ್ಯಪ್ನಗರ

ಯದುವೀರ್‌ ಪುತ್ರನ ಹುಟ್ಟು ಹಬ್ಬ ಆಚರಣೆ

ಅಂಬಾ ವಿಲಾಸ ಅರಮನೆಯಲ್ಲಿಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರ ಪುತ್ರ ಆಧ್ಯವೀರ ನರಸಿಂಹರಾಜ ಒಡೆಯರ್‌ 2ನೇ ವರ್ಷದ ಹುಟ್ಟು ಹಬ್ಬ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು.

Vijaya Karnataka 16 Dec 2019, 5:00 am
ಮೈಸೂರು: ಅಂಬಾ ವಿಲಾಸ ಅರಮನೆಯಲ್ಲಿಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರ ಪುತ್ರ ಆಧ್ಯವೀರ ನರಸಿಂಹರಾಜ ಒಡೆಯರ್‌ 2ನೇ ವರ್ಷದ ಹುಟ್ಟು ಹಬ್ಬ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು.
Vijaya Karnataka Web ADHYAVEER3085419
ಅಂಬಾ ವಿಲಾಸ ಅರಮನೆಯಲ್ಲಿ ಮೈಸೂರಿನ ರಾಜ ವಂಶಸ್ಥರಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರ ಪುತ್ರ ಆಧ್ಯವೀರ ನರಸಿಂಹರಾಜ ಒಡೆಯರ್ ಅವರ ಹುಟ್ಟು ಹಬ್ಬ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು.


ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ತ್ರಿಷಿಕಾ ಒಡೆಯರ್‌ ತಮ್ಮ ಪುತ್ರ ಆಧ್ಯವೀರನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಈ ವೇಳೆ ನಾನಾ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಪ್ರಮೋದಾ ದೇವಿ ಒಡೆಯರ್‌ ಸೇರಿದಂತೆ ಹಲವು ಬಂಧು ಮಿತ್ರರು ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿಪಾಲ್ಗೊಂಡು, ಆಧ್ಯವೀರನಿಗೆ ಶುಭಕೋರಿದರು.

ಹುಟ್ಟು ಹಬ್ಬದ ವೇಳೆ ತೆಗೆದ ಫೋಟೋಗಳನ್ನು ಯದುವೀರ್‌ ತಮ್ಮ ಪೇಸ್‌ಬುಕ್‌ನಲ್ಲಿಅಪ್‌ಲೋಡ್‌ ಮಾಡಿದ್ದು, ತಾಯಿ ಚಾಮುಂಡೇಶ್ವರಿ ತನ್ನ ಪುತ್ರನಿಗೆ ಸಮಸ್ತ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಕೋರಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ