ಆ್ಯಪ್ನಗರ

ಸಿಎಫ್‌ಟಿಆರ್‌ಐ ಮಾರ್ಗದರ್ಶನ ಕೇಂದ್ರ 50ಕ್ಕೆ ಏರಿಕೆ

ಜಯಲಕ್ಷ್ಮಿಪುರಂ ಬಳಿ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣ: ನಿರ್ದೇಶಕ ಡಾ.ರಾಘವರಾವ್‌

Vijaya Karnataka 26 Oct 2018, 5:00 am
ಮೈಸೂರು: ಯುವ ಸಮೂಹದ ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ಹಾಗೂ ಸ್ಟಾರ್ಟ್‌ ಅಪ್‌ ಅನ್ನು ಉತ್ತೇಜಿಸಲು ಈಗಾಗಲೇ ತೆರೆಯಲಾಗಿರುವ 7 ಇನ್ಕ್ಯುಬೇಷನ್‌ ಸೆಂಟರ್‌ (ಗೈಡ್‌ ಸೆಂಟರ್‌) ಅನ್ನು ಇನ್ನೆರಡು ವರ್ಷದಲ್ಲಿ 50ಕ್ಕೆ ಏರಿಸಲಾಗುವುದು ಎಂದು ಸಿಎಸ್‌ಐಆರ್‌ ಮತ್ತು ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ರಾಘವರಾವ್‌ ತಿಳಿಸಿದರು.
Vijaya Karnataka Web cftri guidance center rises to 50
ಸಿಎಫ್‌ಟಿಆರ್‌ಐ ಮಾರ್ಗದರ್ಶನ ಕೇಂದ್ರ 50ಕ್ಕೆ ಏರಿಕೆ


ನಗರದ ಸಿಎಸ್‌ಐಆರ್‌ ಮತ್ತು ಸಿಎಫ್‌ಟಿಆರ್‌ಐನ ಯುಎನ್‌ಯು ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

''ಹೊಸ ಉದ್ಯಮಶೀಲತೆ ಉತ್ತೇಜಿಸಲು ಇನ್ಕ್ಯುಬೇಷನ್‌ ಕೇಂದ್ರವನ್ನು 2011ರಲ್ಲಿ ತೆರೆಯಲಾಯಿತು. ಯುವ ಉದ್ಯಮಿದಾರರಿಗೆ ಪ್ರೋತ್ಸಾಹ ಕೊಡುವುದು ಇದರ ಮುಖ್ಯ ಉದ್ದೇಶ. ಈಗಾಗಲೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ವತಿಯಿಂದ 5 ಕೋಟಿ ಅನುದಾನ ಲಭಿಸಿದ್ದು, ಇನ್ನೆರಡು ವರ್ಷದಲ್ಲಿ 50 ಇನ್ಕ್ಯುಬೇಷನ್‌ ಸೆಂಟರ್‌ ತೆರೆಯಲಾಗುವುದು. ಸದ್ಯ ಗೈಡ್‌ ಸೆಂಟರ್‌ ಚಿಕ್ಕದಾಗಿದ್ದು, ಸ್ಥಳಾವಕಾಶದ ಸಮಸ್ಯೆ ಇದೆ. ಅದಕ್ಕಾಗಿ ಈಗಾಗಲೇ ನಗರದ ಜಯಲಕ್ಷ್ಮಿಪುರಂ ಬಳಿ ಚಂದ್ರಕಲಾ ಆಸ್ಪತ್ರೆ ಬಳಿ ಸಂಸ್ಥೆಗೆ ಸೇರಿದ 140 ಎಕರೆ ಜಾಗವಿದ್ದು, ಅದನ್ನು ಇಂಡಸ್ಟ್ರಿಯಲ್‌ ಪಾರ್ಕ್‌ ಮಾಡಲಾಗುವುದು. ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಒಪ್ಪಿಗೆ ಸಿಕ್ಕಿದ ಕೂಡಲೇ ಕೆಲಸ ಆರಂಭಿಸಲಾಗುವುದು,'' ಎಂದರು.

ವಿಜ್ಞಾನಿಗಳ ನೇಮಕ: ''ಸಿಎಸ್‌ಐಆರ್‌ ಮತ್ತು ಸಿಎಫ್‌ಟಿಆರ್‌ಐನ ಶೇ.50 ರಷ್ಟು ವಿಜ್ಞಾನಿಗಳು ನಿವೃತ್ತರಾಗಿದ್ದಾರೆ. ನಾನು ಸಿಎಫ್‌ಟಿಆರ್‌ಐಗೆ ಬಂದಾಗ ಸಾವಿರ ವಿಜ್ಞಾನಿಗಳು ಇದ್ದರು. ಇದೀಗ ನಿವೃತ್ತರ ಸಂಖ್ಯೆ ಹೆಚ್ಚಾದಂತೆ ಆ ಸಂಖ್ಯೆ 500ಕ್ಕೆ ಇಳಿದಿದೆ. ಕೇಂದ್ರದಿಂದ ವಿಜ್ಞಾನಿಗಳ ನೇಮಕಕ್ಕೆ ಅನುಮೋದನೆ ಪಡೆಯಬೇಕಿದೆ. ಸದ್ಯ 24 ತಾಂತ್ರಿಕ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಂತರ ವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸದ್ಯ ನಮ್ಮ ಸಂಸ್ಥೆಯಲ್ಲಿ 200 ಸಂಶೋಧನಾ ವಿದ್ಯಾರ್ಥಿಗಳು ಇದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕು. ಯುವ ವಿಜ್ಞಾನಿಗಳು ಮತ್ತು ಸಂಶೋಧಕರು ಬರಬೇಕು,'' ಎಂದು ಹೇಳಿದರು.

29, 30ರಂದು ಮುಕ್ತ ಪ್ರವೇಶ : ಪ್ರತಿವರ್ಷದಂತೆ ಈ ವರ್ಷವೂ ಅ.29, 30ರಂದು ಸಿಎಸ್‌ಐಆರ್‌ ಮತ್ತು ಸಿಎಫ್‌ಟಿಆರ್‌ಐ ಸ್ಥಾಪನಾ ದಿನಾಚರಣೆಯೊಂದಿಗೆ ಮುಕ್ತ ದಿನಗಳನ್ನು ಆಚರಿಸಲಾಗುತ್ತಿದೆ.

ಇಲ್ಲಿ ನಡೆದಿರುವ ಸಂಶೋಧನೆಗಳು ಹಾಗೂ ಅವುಗಳ ಪ್ರತಿಫಲಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ವಿನೂತನ ಕಾರ‍್ಯಕ್ರಮ ಅ.29, 30 ರಂದು ನಡೆಯಲಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ