ಮೈಸೂರು : ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡಕ್ಕೆ ಮಣಿದು ತಾವು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಧಿಕೃತವಾಗಿ ಘೋಷಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ನ ಹಾಲಿ ಸಂಸದ ಧ್ರುವನಾರಾಯಣ್ ವಿರುದ್ಧ ನೇರ ಹಣಾಹಣಿಗೆ ಮುಂದಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ್ ಪ್ರಸಾದ್ ''ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ 5 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದೇನೆ. ಎರಡು ಬಾರಿ ಶಾಸಕನಾಗಿ ಚುನಾಯಿತನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದೆ. ಆದರೆ, ಪರಿಸ್ಥಿತಿ ಬದಲಾಗಿದ್ದು, ನನ್ನ ಸ್ಪರ್ಧೆ ಅನಿವಾರ್ಯ ಎಂದು ಕಾರ್ಯಕರ್ತರು ತೀವ್ರ ಒತ್ತಡ ಹೇರಿದ್ದಾರೆ. ಪಕ್ಷದ ನಾಯಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಮತ್ತೆ ಚುನಾವಣಾ ರಾಜಕೀಯಕ್ಕೆ ಹಿಂದಿರುಗುತ್ತಿದ್ದೇನೆ. ಚಾಮರಾಜನಗರದಿಂದ ಈ ಬಾರಿ ಸ್ಪರ್ಧಿಸಿ ಬಹುಮತದಿಂದ ಗೆದ್ದುಬರುತ್ತೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
''ಲೋಕಸಭಾ ಚುನಾವಣೆಗೆ ನಿಲ್ಲದೆ 20 ವರ್ಷಗಳು ಕಳೆದಿವೆ. 2009ರಲ್ಲಿಯೂ ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಬಂದಿತ್ತು. ಆದರೆ, 13 ಬಾರಿ ಚುನಾವಣೆ ಎದುರಿಸಿ ಸಾಕಾಗಿತ್ತು. ಈ ಬಾರಿ ಕೂಡ ಸ್ಪರ್ಧೆಯ ಯಾವ ಯೋಚನೆಯೂ ಇರಲಿಲ್ಲ. ಇದೀಗ ಒತ್ತಡದಿಂದಾಗಿ ನಿರ್ಧಾರ ಬದಲಾಯಿಸಬೇಕಾಯಿತು. ಈ ಹಿಂದೆ ತ್ರಿಕೋನ ಪೈಪೋಟಿ ಕಂಡು ಬರುತ್ತಿತ್ತು. ಇದೀಗ ನೇರ ಸ್ಪರ್ಧೆ ಇದೆ. ನನಗೆ ಕಾಂಗ್ರೆಸ್ ಮುಖಂಡರು ಮಾಡಿರುವ ಅನ್ಯಾಯವನ್ನು ಮತದಾರರಿಗೆ ಹೇಳುತ್ತೇನೆ,''ಎಂದರು.
''ಸರ್ಜಿಕಲ್ ಸ್ಟ್ರೈಕ್ ಎಂದೂ ವಿಫಲವಾಗಿಲ್ಲ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸೇನೆ ಮಾಡುವ ಸರ್ಜಿಕಲ್ ಸ್ಟ್ರೈಕ್ ಬೇರೆ. ರಾಜಕೀಯದಲ್ಲಿ ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರೂ ಜನರ ಬಲ ಮುಖ್ಯ. ಅವರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇ ಬೇಕಾಗುತ್ತದೆ. ನನ್ನ ವಿರುದ್ಧ ವಿರೋಧಿಗಳೆಲ್ಲ ಒಂದಾಗಿರಬಹುದು. ಆದರೆ, ನನಗೆ ಯಾವುದೇ ಚಿಂತೆ ಇಲ್ಲ. ಎಲ್ಲಿಗೂ ಹೆದರಿ ಓಡಿ ಹೋಗಲ್ಲ. ಜನರ ವಿಶ್ವಾಸ ಗಳಿಸಿ ಮತ್ತೆ ಗೆದ್ದು ಬರುತ್ತೇನೆ ಎನ್ನುವ ವಿಶ್ವಾಸವಿದೆ. ಬಿಜೆಪಿ ಪಕ್ಷ ರಾಷ್ಟ್ರಮಟ್ಟದಲ್ಲಿ ಬಲಿಷ್ಠವಾಗಿದೆ. ದೇಶದಲ್ಲಿರುವಂತೆ ರಾಜ್ಯದಲ್ಲಿ ಕೂಡ ಮೋದಿ ಅಲೆ ಇದೆ. ಆದರೆ, ಕಾಂಗ್ರೆಸ್ ದುರ್ಬಲವಾಗುತ್ತಿರುವುದಕ್ಕೆ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇ ಸಾಕ್ಷಿ. ಕಳೆದ ಬಾರಿ ಗೆದ್ದ ಕ್ಷೇತ್ರಗಳನ್ನು ಕೂಡ ಕಾಂಗ್ರೆಸ್ ಈ ಬಾರಿ ಕಳೆದುಕೊಳ್ಳಲಿದೆ,''ಎಂದು ಹೇಳಿದರು.
''ಮಾ.26ರ ಒಳಗೆ ನಾಮಪತ್ರ ಸಲ್ಲಿಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಮಾತನಾಡಿ ಒಳ್ಳೆಯ ದಿನ ನಾಮಪತ್ರ ಸಲ್ಲಿಸುತ್ತೇನೆæ,''ಎಂದರು.
ಕುಮಾರ ಪರ್ವ ಸಿದ್ದು ವಿರುದ್ಧ
ರಾಜ್ಯದಲ್ಲಿ ಕುಮಾರ ಪರ್ವ ಆರಂಭವಾಗಿರುವುದು ಸಿದ್ದರಾಮಯ್ಯರ ಮೇಲೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
''ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡವರಿಗೆ ಇಲ್ಲಿನ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ. ನನಗೆ ಆಗಿರುವ ನೋವನ್ನು ಉಪ ಚುನಾವಣೆಯಲ್ಲಿ ತೀರಿಸಿಕೊಂಡಿದ್ದೇನೆ. ಅಂದು ನನ್ನನ್ನು ಮಂತ್ರಿಮಂಡಲದಿಂದ ಕೈಬಿಟ್ಟವರ ಸ್ಥಿತಿ ಇಂದು ಹೇಗಿದೆ ಎನ್ನುವುದನ್ನು ಗಮನಿಸಿ,'' ಎಂದು ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಕುಟುಕಿದರು.
ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ್ ಪ್ರಸಾದ್ ''ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ 5 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದೇನೆ. ಎರಡು ಬಾರಿ ಶಾಸಕನಾಗಿ ಚುನಾಯಿತನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದೆ. ಆದರೆ, ಪರಿಸ್ಥಿತಿ ಬದಲಾಗಿದ್ದು, ನನ್ನ ಸ್ಪರ್ಧೆ ಅನಿವಾರ್ಯ ಎಂದು ಕಾರ್ಯಕರ್ತರು ತೀವ್ರ ಒತ್ತಡ ಹೇರಿದ್ದಾರೆ. ಪಕ್ಷದ ನಾಯಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಮತ್ತೆ ಚುನಾವಣಾ ರಾಜಕೀಯಕ್ಕೆ ಹಿಂದಿರುಗುತ್ತಿದ್ದೇನೆ. ಚಾಮರಾಜನಗರದಿಂದ ಈ ಬಾರಿ ಸ್ಪರ್ಧಿಸಿ ಬಹುಮತದಿಂದ ಗೆದ್ದುಬರುತ್ತೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
''ಲೋಕಸಭಾ ಚುನಾವಣೆಗೆ ನಿಲ್ಲದೆ 20 ವರ್ಷಗಳು ಕಳೆದಿವೆ. 2009ರಲ್ಲಿಯೂ ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಬಂದಿತ್ತು. ಆದರೆ, 13 ಬಾರಿ ಚುನಾವಣೆ ಎದುರಿಸಿ ಸಾಕಾಗಿತ್ತು. ಈ ಬಾರಿ ಕೂಡ ಸ್ಪರ್ಧೆಯ ಯಾವ ಯೋಚನೆಯೂ ಇರಲಿಲ್ಲ. ಇದೀಗ ಒತ್ತಡದಿಂದಾಗಿ ನಿರ್ಧಾರ ಬದಲಾಯಿಸಬೇಕಾಯಿತು. ಈ ಹಿಂದೆ ತ್ರಿಕೋನ ಪೈಪೋಟಿ ಕಂಡು ಬರುತ್ತಿತ್ತು. ಇದೀಗ ನೇರ ಸ್ಪರ್ಧೆ ಇದೆ. ನನಗೆ ಕಾಂಗ್ರೆಸ್ ಮುಖಂಡರು ಮಾಡಿರುವ ಅನ್ಯಾಯವನ್ನು ಮತದಾರರಿಗೆ ಹೇಳುತ್ತೇನೆ,''ಎಂದರು.
''ಸರ್ಜಿಕಲ್ ಸ್ಟ್ರೈಕ್ ಎಂದೂ ವಿಫಲವಾಗಿಲ್ಲ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸೇನೆ ಮಾಡುವ ಸರ್ಜಿಕಲ್ ಸ್ಟ್ರೈಕ್ ಬೇರೆ. ರಾಜಕೀಯದಲ್ಲಿ ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರೂ ಜನರ ಬಲ ಮುಖ್ಯ. ಅವರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇ ಬೇಕಾಗುತ್ತದೆ. ನನ್ನ ವಿರುದ್ಧ ವಿರೋಧಿಗಳೆಲ್ಲ ಒಂದಾಗಿರಬಹುದು. ಆದರೆ, ನನಗೆ ಯಾವುದೇ ಚಿಂತೆ ಇಲ್ಲ. ಎಲ್ಲಿಗೂ ಹೆದರಿ ಓಡಿ ಹೋಗಲ್ಲ. ಜನರ ವಿಶ್ವಾಸ ಗಳಿಸಿ ಮತ್ತೆ ಗೆದ್ದು ಬರುತ್ತೇನೆ ಎನ್ನುವ ವಿಶ್ವಾಸವಿದೆ. ಬಿಜೆಪಿ ಪಕ್ಷ ರಾಷ್ಟ್ರಮಟ್ಟದಲ್ಲಿ ಬಲಿಷ್ಠವಾಗಿದೆ. ದೇಶದಲ್ಲಿರುವಂತೆ ರಾಜ್ಯದಲ್ಲಿ ಕೂಡ ಮೋದಿ ಅಲೆ ಇದೆ. ಆದರೆ, ಕಾಂಗ್ರೆಸ್ ದುರ್ಬಲವಾಗುತ್ತಿರುವುದಕ್ಕೆ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇ ಸಾಕ್ಷಿ. ಕಳೆದ ಬಾರಿ ಗೆದ್ದ ಕ್ಷೇತ್ರಗಳನ್ನು ಕೂಡ ಕಾಂಗ್ರೆಸ್ ಈ ಬಾರಿ ಕಳೆದುಕೊಳ್ಳಲಿದೆ,''ಎಂದು ಹೇಳಿದರು.
''ಮಾ.26ರ ಒಳಗೆ ನಾಮಪತ್ರ ಸಲ್ಲಿಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಮಾತನಾಡಿ ಒಳ್ಳೆಯ ದಿನ ನಾಮಪತ್ರ ಸಲ್ಲಿಸುತ್ತೇನೆæ,''ಎಂದರು.
ಕುಮಾರ ಪರ್ವ ಸಿದ್ದು ವಿರುದ್ಧ
ರಾಜ್ಯದಲ್ಲಿ ಕುಮಾರ ಪರ್ವ ಆರಂಭವಾಗಿರುವುದು ಸಿದ್ದರಾಮಯ್ಯರ ಮೇಲೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
''ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡವರಿಗೆ ಇಲ್ಲಿನ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ. ನನಗೆ ಆಗಿರುವ ನೋವನ್ನು ಉಪ ಚುನಾವಣೆಯಲ್ಲಿ ತೀರಿಸಿಕೊಂಡಿದ್ದೇನೆ. ಅಂದು ನನ್ನನ್ನು ಮಂತ್ರಿಮಂಡಲದಿಂದ ಕೈಬಿಟ್ಟವರ ಸ್ಥಿತಿ ಇಂದು ಹೇಗಿದೆ ಎನ್ನುವುದನ್ನು ಗಮನಿಸಿ,'' ಎಂದು ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಕುಟುಕಿದರು.