ಆ್ಯಪ್ನಗರ

ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥರ ಉಪಸ್ಥಿತಿಯಲ್ಲಿ ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ

ಪ್ರತಿ ವರ್ಷ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವವು ಆಷಾಢ ಮಾಸದ ಕೃಷ್ಣಪಕ್ಷದ ಸಪ್ತಮಿಯಂದು ನಡೆಯಲಿದೆ. ಹಾಗಾಗಿ ಸೋಮವಾರ ಬೆಳಗಿನ ಜಾವ 4 ಗಂಟೆಯಿಂದಲೇ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು.

Vijaya Karnataka Web 13 Jul 2020, 5:34 pm

ಹೈಲೈಟ್ಸ್‌:

  • ಸರಳವಾಗಿ ನಡೆದ ಚಾಮುಂಡಿ ವರ್ಧಂತ್ಯೋತ್ಸವ
  • ರಾಜವಂಶಸ್ಥರಾದ ಯದುವೀರ್ ದಂಪತಿ ಭಾಗಿ
  • ಸರ್ಕಾರದ ಕ್ರಮವನ್ನು ಪಾಲಿಸುವಂತೆ ಯದುವೀರ್ ಮನವಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮೈಸೂರು: ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ರಾಜವಂಶಸ್ಥರ ಉಪಸ್ಥಿತಿಯಲ್ಲಿ ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳು ಸಂಪನ್ನಗೊಂಡವು. ದೇಗುಲದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ ನೇತೃತ್ವದಲ್ಲಿ ಪೂಜೆ ನೆರವೇರಿತು.
ಕೊರೊನಾ ಹರಡಬಹುದಾದ ಭೀತಿಯಿಂದಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಪ್ರತಿ ವರ್ಷ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವವು ಆಷಾಢ ಮಾಸದ ಕೃಷ್ಣಪಕ್ಷದ ಸಪ್ತಮಿಯಂದು ನಡೆಯಲಿದೆ. ಹಾಗಾಗಿ ಸೋಮವಾರ ಬೆಳಗಿನ ಜಾವ 4 ಗಂಟೆಯಿಂದಲೇ ತಾಯಿ ಚಾಮುಂಡೇಶ್ವರಿ ಅಮ್ಮನವರಿಗೆ ಅಭ್ಯಂಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನಡೆಸಲಾಯಿತು.

3 ತಲೆಮಾರು ಕೊರೊನಾ ಗೆದ್ದ ಕಥೆ..! ಅಜ್ಜಿ, ತಾಯಿ, ಮಗನಿಗೆ ಪ್ರೀತಿಯೇ ಮದ್ದು..!

ವರ್ಧಂತಿ ಹಿನ್ನೆಲೆ ದೇಗುಲದ ಪ್ರಾಂಗಣದಲ್ಲಿ ದರ್ಬಾರ್ ಉತ್ಸವದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಧರ್ಮಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡರು.

ಕೊರೊನಾ ಕಾಲದಲ್ಲಿ ನಿರುದ್ಯೋಗಿಗಳ ಕೈ ಹಿಡಿದ 'ಮಾಸ್ಕ್‌'..! ಕೆಲಸ ಹೋದ್ರೂ ಮಾಸ್ಕ್‌ ಕೈಬಿಡಲಿಲ್ಲ..!

ಈ ಸಂದರ್ಭ ಮಾತನಾಡಿದ ರಾಜವಂಶ್ಥರಾದ ಯದುವೀರ್ ಒಡೆಯರ್‌, ಪ್ರತಿ ವರ್ಷದಂತೆ ಈ ವರ್ಷ ವರ್ಧಂತ್ಯೋತ್ಸವ ಆಚರಣೆ ಮಾಡಿದ್ದೇವೆ. ಕೊರೊನಾ ಹಿನ್ನಲೆಯಲ್ಲಿ ತಾಯಿಯ ಆಶೀರ್ವಾದ ಎಲ್ಲರ ಮೇಲಿರಲಿ. ಕೊರೊನಾ ಸುರಕ್ಷಾ ದೃಷ್ಟಿಯಿಂದ ಈ ಬಾರಿ ಮುನ್ನೆಚ್ಚರಿಕಾ ಕ್ರಮದೊಂದಿಗೆ ವರ್ಧಂತಿ ಆಚರಣೆ ಮಾಡಿದ್ದೇವೆ. ನಮ್ಮೆರಡು ಪೀಳಿಗೆ ಈ ರೀತಿಯ ಕಷ್ಟಗಳನ್ನು ಅನುಭವಿಸಿರಲಿಲ್ಲ. ಈಗ ಕಷ್ಟ ಬಂದಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕಿದೆ. ಸರ್ಕಾರದ ಕ್ರಮಗಳನ್ನು ಎಲ್ಲರೂ ಪಾಲಿಸುವ ಮೂಲಕ ಸೋಂಕನ್ನು ದೂರ ಮಾಡೋಣ ಎಂದು ಕರೆ ನೀಡಿದರು.

ಮೈಸೂರಿನ ಎನ್‌. ಆರ್‌. ಕ್ಷೇತ್ರದಲ್ಲಿ ಮುಂಬೈನ ಧಾರಾವಿ ಮಾದರಿ ಮಿನಿ ಲಾಕ್‌ಡೌನ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ