ಆ್ಯಪ್ನಗರ

ಮದುವೆ ನಿರ್ಧಾರ ಪ್ರಕಟಿಸಿದ ಚಂದನ್‌ -ನಿವೇದಿತಾ ಜೋಡಿ

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದಲ್ಲಿ ಶುಕ್ರವಾರ ಯುವ ಸಮೂಹಕ್ಕೆ ಅಚ್ಚರಿಯೊಂದು ಕಾದಿತ್ತು. ಬಿಗ್‌ಬಾಸ್‌ ವಿನ್ನರ್‌ ಹಾಗೂ ramper ಚಂದನ್‌ ಶೆಟ್ಟಿ ಅವರು ತಮ್ಮ ಸ್ನೇಹಿತೆ ಮೈಸೂರಿನ ನಿವೇದಿತಾ ಗೌಡ ಅವರಿಗೆ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಿ ಮದುವೆ ಆಗುವುದಾಗಿ ಘೋಷಿಸಿಕೊಂಡಿದ್ದಾರೆ.

Vijaya Karnataka 5 Oct 2019, 5:00 am
ಯುವ ದಸರಾ ವೇದಿಕೆಯಲ್ಲಿ 'ಬೊಂಬೆ'ಗೆ ಉಂಗುರು ತೊಡಿಸಿದ ramper ಚಂದನ್‌ ಶೆಟ್ಟಿ
Vijaya Karnataka Web chandan nivedita couple announcing marriage decision
ಮದುವೆ ನಿರ್ಧಾರ ಪ್ರಕಟಿಸಿದ ಚಂದನ್‌ -ನಿವೇದಿತಾ ಜೋಡಿ


ಮೈಸೂರು:
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದಲ್ಲಿ ಶುಕ್ರವಾರ ಯುವ ಸಮೂಹಕ್ಕೆ ಅಚ್ಚರಿಯೊಂದು ಕಾದಿತ್ತು. ಬಿಗ್‌ಬಾಸ್‌ ವಿನ್ನರ್‌ ಹಾಗೂ ರಾರ‍ಯಪರ್‌ ಚಂದನ್‌ ಶೆಟ್ಟಿ ಅವರು ತಮ್ಮ ಸ್ನೇಹಿತೆ ಮೈಸೂರಿನ ನಿವೇದಿತಾ ಗೌಡ ಅವರಿಗೆ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಿ ಮದುವೆ ಆಗುವುದಾಗಿ ಘೋಷಿಸಿಕೊಂಡಿದ್ದಾರೆ.

ಯುವ ದಸರಾದಲ್ಲಿಕಾರ್ಯಕ್ರಮ ನೀಡಲು ಆಗಮಿಸಿದ್ದ ಚಂದನ್‌ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಶೀಘ್ರದಲ್ಲೇ ನಾವಿಬ್ಬರು ಮದುವೆ ಆಗುವುದಾಗಿ ಘೋಷಿಸಿದರು. ಆ ಮೂಲಕ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಮೇಲೆ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್‌ ನಿಜವಾಗಿದೆ. ಮೈಸೂರಿನ ನಿವೇದಿತಾ ಗೌಡ ಡಬ್‌ ಸ್ಯಾಶ್‌ ಮೂಲಕ ಗುರುತಿಸಿಕೊಂಡಿದ್ದರು. ಅಲ್ಲದೆ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲೂ ಪಾಲ್ಗೊಂಡಿದ್ದರು. ಹಾಸನದ ಮೂಲದ ಚಂದನ್‌ ಶೆಟ್ಟಿ ಆಲ್ಬಂ ಸಾಂಗ್‌ ಮೂಲಕ ಗುರುತಿಸಿಕೊಂಡಿದ್ದಾರೆ.

''ಬಿಗ್‌ಬಾಸ್‌ನಲ್ಲಿ 105 ದಿನ ಈಕೆ ಜೊತೆ ಕಾಲ ಕಳೆದೆ. ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದು, ಮದುವೆ ವಿಚಾರವನ್ನು ವಿದೇಶಕ್ಕೆ ತೆರಳಿ ಅಲ್ಲಿಂದ ತಿಳಿಸಬೇಕು ಎಂದುಕೊಂಡಿದ್ದೆ. ಆದರೆ ಇಂದು ಆ ನಿರ್ಧಾರ ಕೈಬಿಟ್ಟು, ಇಂಥಾ ಅದ್ಭುತ ದಿನದಂದು ಪ್ರಕಟಿಸುತ್ತಿದ್ದೇನೆ. ನನ್ನನ್ನು ಪ್ರೀತಿ ಮಾಡೋ ಎಷ್ಟೋ ಜನ ಇದ್ದಾರೆ ಇಲ್ಲಿ. ನನ್ನ ತಂದೆ-ತಾಯಿ, ನಿವೇದಿತಾರ ತಂದೆ -ತಾಯಿ ಎಲ್ಲರೂ ಇದ್ದು ಈ ಸುಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ,'' ಎಂದು ಚಂದನ್‌ ಖುಷಿ ಹಂಚಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ