ಆ್ಯಪ್ನಗರ

ಅಡುಗೆ ಸಿಬ್ಬಂದಿ ಬದಲಿಸಿ: ಪ್ರತಿಭಟನೆ

ಅಡುಗೆ ಸಿಬ್ಬಂದಿ ಮದ್ಯ ಸೇವಿಸಿ ಕೆಲಸ ನಿರ್ವಹಿಸುವುದಲ್ಲದೇ, ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿ ಹಾಗೂ ನಿಲಯದಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಯುವರಾಜ ಕಾಲೇಜಿನ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟಿಸಿದರು.

Vijaya Karnataka 14 Jul 2018, 5:00 am
ಮೈಸೂರು : ಅಡುಗೆ ಸಿಬ್ಬಂದಿ ಮದ್ಯ ಸೇವಿಸಿ ಕೆಲಸ ನಿರ್ವಹಿಸುವುದಲ್ಲದೇ, ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿ ಹಾಗೂ ನಿಲಯದಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಯುವರಾಜ ಕಾಲೇಜಿನ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟಿಸಿದರು.
Vijaya Karnataka Web change cooking staff protest
ಅಡುಗೆ ಸಿಬ್ಬಂದಿ ಬದಲಿಸಿ: ಪ್ರತಿಭಟನೆ


ಯುವರಾಜ ಕಾಲೇಜಿನ ವಿದ್ಯಾರ್ಥಿನಿಲಯದ ಎದುರಿನಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಸಮೂಹ ಅಡುಗೆ ತಯಾರಕರ ನಡೆಯನ್ನು ಖಂಡಿಸಿದರು. ಒಂದೇ ರೀತಿಯ ಅಡುಗೆ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದವರನ್ನು ಗುರಿಯಾಗಿಸಿಕೊಂಡು ರಾತ್ರಿ ಅವಾಚ್ಯ ಶಬ್ಧಗಳಿಂದ ಗುಂಪುಗೂಡಿ ನಿಂದಿಸುತ್ತಾರೆಂದು ಆರೋಪಿಸಿದರು. ಬೆಳಗ್ಗೆ 9 ರವರೆಗೂ ತಿಂಡಿ, 1 ಗಂಟೆಯಿಂದ 2.30ರವರೆಗೆ ಊಟ, ರಾತ್ರಿ 8 ರಿಂದ 9.30 ರವರೆಗೂ ಊಟ ವಿತರಣೆಯ ಅವಧಿ ಇದೆ. ಆದರೆ ಒಂದು ತಾಸೂ ಮುಂಚೆಯೇ ಎಲ್ಲವೂ ಮುಗಿಯಿತು ಎನ್ನುತ್ತಾರೆ. ಕೇಳಿದರೆ ನಮಗೆ ನೀಡುವುದೇ ಇಷ್ಟು ಎನ್ನುತ್ತಾರೆ. ಮೊಟ್ಟೆ, ಬಾಳೆ ಹಣ್ಣು ಸರಿಯಾಗಿ ಸಿಗುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದ ಹುಡುಗರನ್ನು ರಾತ್ರಿ ವೇಳೆ ಕುಡಿದು ಬಂದು ನಿಂದಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ 2.15 ಕ್ಕೆ ಅಡುಗೆ ಖಾಲಿ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ಹುಡುಗರನ್ನು ದಬಾಯಿಸಿ ಕಳುಹಿಸಿದ್ದಾರೆ. ರಾತ್ರಿಯೂ ಊಟ ಬೇಗ ಖಾಲಿಯಾಗಿತ್ತು. ಹಲವು ವಿದ್ಯಾರ್ಥಿಗಳು ಊಟ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಪ್ರಶ್ನಿಸಿದ ವಿದ್ಯಾರ್ಥಿಗಳನ್ನೇ ಅವಾಚ್ಯ ಶಬ್ಧಗಳಿಂದ ಊಟ ತಯಾರಕರು ನಿಂದಿಸಿದ್ದು, ಮಾತಿನ ಚಕಮಕಿ ನಡೆದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ದಿಢೀರ್‌ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ತಂಡ ಕೂಡಲೇ ಅಡುಗೆ ತಯಾರಕರನ್ನು ಬದಲಿಸಬೇಕು. ಕೆಲ ಅಡುಗೆ ತಯಾರಕರು ಕುಡಿದು ಅಡುಗೆ ತಯಾರಿಸುತ್ತಾರೆ. ಮಾತ್ರವಲ್ಲದೆ ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆಯೇ ಹರಿಹಾಯುತ್ತಾರೆ. ಉತ್ತಮ ರೀತಿಯ ಅಡುಗೆ ಮಾಡುವವರಿಗೆ ಆದ್ಯತೆ ನೀಡಿ ಎಂದು ಪಟ್ಟು ಹಿಡಿದರು.

ವಿದ್ಯಾರ್ಥಿನಿಲಯದಲ್ಲಿರುವ 8 ಕೊಠಡಿಗಳಲ್ಲಿ ಎರಡು ಮಾತ್ರ ಉತ್ತಮ ವ್ಯವಸ್ಥೆಯಿಂದ ಕೂಡಿವೆ. ಉಳಿದವುಗಳಲ್ಲಿ ವಿದ್ಯುತ್‌ ಸಂಪರ್ಕವೇ ಇಲ್ಲವಾಗಿದೆ. ಇನ್ನೂ ಬೆಳಗ್ಗೆ 8 ಗಂಟೆವರೆಗೂ ನೀರಿನ ಮೋಟಾರ್‌ ಆನ್‌ ಮಾಡುವುದಿಲ್ಲ. ಈ ಅವ್ಯವಸ್ಥೆ ಸರಿಪಡಿಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಯುವರಾಜ ಕಾಲೇಜಿನ ವಿದ್ಯಾರ್ಥಿ ನಿಲಯದ ದರ್ಶನ್‌, ಶಿವು, ಪರಶಿವಮೂರ್ತಿ, ಆಶ್ವಿನ್‌, ನಿಖಿಲ್‌, ಚಾಮರಾಜ, ವಿಜಯ್‌, ವಿಕಾಸ್‌, ಪ್ರಜ್ವಲ್‌, ರಾಹುಲ್‌ಶೇಖರ್‌, ಮಹೇಶ್‌, ಸಚಿನ್‌, ಡಿ.ವಿ. ನಿತಿನ್‌ಕುಮಾರ್‌, ಬಿ.ಎಸ್‌.ಅಭಿಲಾಶ್‌ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ