ಆ್ಯಪ್ನಗರ

ಬಾಲ್ಯ ವಿವಾಹ ತಡೆಗೆ ದಾಳಿ: ಕಲ್ಯಾಣ ಮಂಟಪದಿಂದ ವಧುವರರು ಎಸ್ಕೇಪ್

ಬಾಲ್ಯ ವಿವಾಹ ತಡೆಯಲು ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಧುವರರು ಪರಾರಿಯಾದ ಘಟನೆ ಜಿಲ್ಲೆಯ ರಾಘವೇಂದ್ರನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ನಡೆದಿದೆ.

Vijaya Karnataka Web 28 Jun 2018, 1:53 pm
ಮೈಸೂರು: ಬಾಲ್ಯ ವಿವಾಹ ತಡೆಯಲು ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಧುವರರು ಪರಾರಿಯಾದ ಘಟನೆ ಜಿಲ್ಲೆಯ ರಾಘವೇಂದ್ರನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ನಡೆದಿದೆ.
Vijaya Karnataka Web child


ರಮ್ಮನಹಳ್ಳಿ ಮೂಲದ ಅಪ್ರಾಪ್ತ ವಧು ಹಾಗೂ ಕುಮಾರ್ (26) ಪರಾರಿಯಾಗಿದ್ದಾರೆ. ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಎನ್‌.ಆರ್.ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ನಡೆದ ವೇಳೆ ಅಧಿಕಾರಿಗಳ ಗಮನ ಬೇರೆಡೆ ಸೆಳೆದ ಪೋಷಕರು, ವಧುವರರನ್ನು ಎಸ್ಕೇಪ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ವಧುವಿನ ವಯಸ್ಸು 17 ವರ್ಷ 4 ತಿಂಗಳು. ಆದರೆ, ಆಧಾರ್ ದಾಖಲೆಯಲ್ಲಿ 18 ವರ್ಷ 4 ತಿಂಗಳು ಎಂದು ನಮೂದಿಸಲಾಗಿದೆ. ಘಟನೆ ಸಂಬಂಧ ಕಲ್ಯಾಣ ಮಂಟಪದ ವ್ಯವಸ್ಥಾಪಕ, ಪುರೋಹಿತರು ಹಾಗೂ ವಧುವರರ ಪೋಷಕರನ್ನು ಎನ್‌.ಆರ್.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ