ಆ್ಯಪ್ನಗರ

ಚುಂಚನಕಟ್ಟೆ: ಪರ್ಜನ್ಯ ಯಾಗ ಬದಲು ಪೂಜೆ

ರಾಜ್ಯದಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ಯಾಗ ನಡೆಸುವಂತೆ ರಾಜ್ಯ ...

Vijaya Karnataka 7 Jun 2019, 5:00 am
ಚುಂಚನಕಟ್ಟೆ : ರಾಜ್ಯದಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ಯಾಗ ನಡೆಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು, ಆದರೆ, ಈ ಯಾಗ ಬಗ್ಗೆ ತಿಳಿದ ಅರ್ಚಕರ ಕೊರತೆ ಕಾರಣದಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ಕೋದಂಡರಾಮನ ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆ ಮಾತ್ರ ನೆರವೇರಿಸಲಾಯಿತು.
Vijaya Karnataka Web news/mysuru/chunchanakatte
ಚುಂಚನಕಟ್ಟೆ: ಪರ್ಜನ್ಯ ಯಾಗ ಬದಲು ಪೂಜೆ


ಕೆ.ಆರ್‌.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ 'ಬಿ'+ ಶ್ರೇಣಿಯ ಕೋದಂಡರಾಮನ ದೇಗುಲದಲ್ಲಿ ಪರ್ಜನ್ಯ ಜಪ, ಯಾಗ ಬಗ್ಗೆ ನಿರ್ದಿಷ್ಟವಾಗಿ ತಿಳಿದ ಆಗಮಿಕ ಅರ್ಚಕರಿಲ್ಲ. ಹಾಗಾಗಿ ಈ ಯಾಗದ ಬದಲಾಗಿ ಮುಂಜಾನೆಯಿಂದಲೆ ಅರ್ಚಕರು ಪವಿತ್ರ ಕಾವೇರಿ ನೀರಿನಿಂದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾ ದೇವರ ಮೂರ್ತಿಗಳಿಗೆ ನೀರಿನ ಮಜ್ಜನ ಮಾಡಿಸಿದರು. ನಂತರ ಪಂಚಾಮೃತಾಭಿಷೇಕ ನೆರವೇರಿಸಿದರು. ವಿಶೇಷ ಪೂಜೆಯೊಂದಿಗೆ ಮಳೆಗಾಗಿ ಸಂಕಲ್ಪ ಮಾಡಿದ ಅರ್ಚಕರು, ಬ್ರಾಹ್ಮೀ ಮುಹೂರ್ತದಲ್ಲಿ ಮಹಾ ಮಂಗಳಾರತಿ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ