ಆ್ಯಪ್ನಗರ

ಚುಂಚನಕಟ್ಟೆ ಜಲಪಾತದಲ್ಲಿ ವಿಜ್ಞಾನಿ ಸೋಮಶೇಖರ್ ಸಾವು

ಕೆ. ಆರ್. ನಗರ ತಾಲೂಕಿನ ಚುಂಚನಕಟ್ಟೆ ಕಾವೇರಿ ಜಲಪಾತದಲ್ಲಿ ಸೋಮಶೇಖರ್ (40) ಎಂಬವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Vijaya Karnataka 4 Jun 2018, 8:43 am
ಚುಂಚನಕಟ್ಟೆ: ಕೆ. ಆರ್. ನಗರ ತಾಲೂಕಿನ ಚುಂಚನಕಟ್ಟೆ ಕಾವೇರಿ ಜಲಪಾತದಲ್ಲಿ ಸೋಮಶೇಖರ್ (40) ಎಂಬವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
Vijaya Karnataka Web chunchanakatte krnagara taluk cauvery falls cftr scientist dead
ಚುಂಚನಕಟ್ಟೆ ಜಲಪಾತದಲ್ಲಿ ವಿಜ್ಞಾನಿ ಸೋಮಶೇಖರ್ ಸಾವು


ಸೋಮಶೇಖರ್ ಮೂಲತಃ ಉತ್ತರ ಪ್ರದೇಶದವರಾಗಿದ್ದು ಮೈಸೂರಿನ CFTRನಲ್ಲಿ ವಿಜ್ಞಾನಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ರಜೆ ಇದ್ದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಕುಟುಂಬದೊಂದಿಗೆ ಚುಂಚನಕಟ್ಟೆ ಕಾವೇರಿ ಜಲಪಾತ ನೋಡಲು ಬಂದಿದ್ದು , ಜಲಪಾತದಲ್ಲಿ ಆಟವಾಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಕೆಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.

ಇತರೆ ಪ್ರವಾಸಿಗರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ . ಈ ಸಂಬಂಧ ಯಾವುದೇ ಪ್ರಕರಣ ಯಾವುದೇ ದಾಖಲಾಗಿಲ್ಲ, ಮೃತರಿಗೆ ಪತ್ನಿಘ ಹಾಗೂ 5 ವರ್ಷದ ಪುತ್ರಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ