ಆ್ಯಪ್ನಗರ

ಗುಂಪುಗಳ ನಡುವೆ ಘರ್ಷಣೆ: ಐವರಿಗೆ ಗಾಯ

ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಆಚರಣೆ ವೇಳೆ ಈಡುಗಾಯಿ ಒಡೆಯುವ ಸಂಬಂಧ ಉಂಟಾದ ವಾಗ್ವಾದ ತಾರಕಕ್ಕೇರಿ ಎರಡು ಸಮುದಾಯದ ಜನರ ನಡುವೆ ಗುಂಪು ಘರ್ಷಣೆಯಾಗಿದ್ದು , ಘಟನೆಯಲ್ಲಿ ಒಟ್ಟು ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Vijaya Karnataka 27 Feb 2019, 5:00 am
ನಂಜನಗೂಡು : ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಆಚರಣೆ ವೇಳೆ ಈಡುಗಾಯಿ ಒಡೆಯುವ ಸಂಬಂಧ ಉಂಟಾದ ವಾಗ್ವಾದ ತಾರಕಕ್ಕೇರಿ ಎರಡು ಸಮುದಾಯದ ಜನರ ನಡುವೆ ಗುಂಪು ಘರ್ಷಣೆಯಾಗಿದ್ದು , ಘಟನೆಯಲ್ಲಿ ಒಟ್ಟು ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web clash between groups five people injured
ಗುಂಪುಗಳ ನಡುವೆ ಘರ್ಷಣೆ: ಐವರಿಗೆ ಗಾಯ


ಮಂಗಳವಾರ ಗ್ರಾಮದೇವತೆ ಮಾರಿಹಬ್ಬದ ಆಚರಣೆ ಸಂದರ್ಭ ಮಧ್ಯಾಹ್ನ ಮೂರರ ಸಮಯದಲ್ಲಿ ಮಾರಮ್ಮನ ದೇವಾಲಯದ ಮುಂಭಾಗ ಈಡುಗಾಯಿ ಒಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯದ ಜನರ ನಡುವೆ ವಾಗ್ವಾದ ಉಂಟಾಗಿದೆ. ನಂತರ ತಳ್ಳಾಟ ನೂಕಾಟ ಆರಂಭಗೊಂಡು ಗುಂಪು ಘರ್ಷಣೆ ಉಂಟಾಗಿದೆ. ಈ ಸಂದರ್ಭ ಕೆಲವರು ತೆಂಗಿನಕಾಯಿಯಲ್ಲಿಯೇ ಹೊಡೆದಾಡಿದ್ದರಿಂದ ದಲಿತ ಸಮುದಾಯಕ್ಕೆ ಸೇರಿದ ಶಂಭೂ, ಮಂಜು, ಸೋಮಶೇಖರ ಹಾಗೂ ಶಿವಣ್ಣ ಮತ್ತು ಮೇಲ್ವರ್ಗದ ಕುಮಾರ್‌ ಎಂಬಾತ ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಜನರನ್ನು ಚದುರಿಸಿದರು.ನಂತರ ಗಾಯಾಳುಗಳನ್ನು ನಂಜನಗೂಡಿನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳದಲ್ಲಿ ವೃತ್ತ ನಿರೀಕ್ಷ ಕ ಶೇಖರ್‌ ನೇತೃತ್ವದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ