ಆ್ಯಪ್ನಗರ

ಯಡಿಯೂರಪ್ಪ ಅಧಿಕಾರಾವಧಿ ಇನ್ನು 6 ತಿಂಗಳು ಮಾತ್ರ: ಭವಿಷ್ಯ ನುಡಿದ ಕೆಪಿಸಿಸಿ ವಕ್ತಾರ!

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪರ ಸಿಎಂ ಕುರ್ಚಿ ಆಯಸ್ಸು ಮುಂದಿನ 6 ತಿಂಗಳು ಮಾತ್ರ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಹೇಳಿದ್ದಾರೆ. ಕೊರೊನಾ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತಿತ್ತು ಎಂದಿದ್ದಾರೆ.

Vijaya Karnataka Web 23 May 2020, 4:38 pm
ಮೈಸೂರು: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪರ ಸಿಎಂ ಕುರ್ಚಿ ಆಯಸ್ಸು ಮುಂದಿನ 6 ತಿಂಗಳು ಮಾತ್ರ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಹೇಳಿದ್ದಾರೆ.
Vijaya Karnataka Web yediyurappa bs


ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾರಕ ಕೊರೊನಾ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತಿತ್ತು. ನೋಡ್ತಾ ಇರಿ ಯಡಿಯೂರಪ್ಪರ ಸಿಎಂ ಕುರ್ಚಿ ಆಯಸ್ಸು 6 ತಿಂಗಳು ಮಾತ್ರ. ಕೊರೊನಾ ನಡುವೆ ಅವರ ಕೆಲಸ ಮಾಡುತ್ತಿರುವುದು ಸಹ ಗೊಂದಲದ ಗೂಡಾದಂತೆ ಕಾಣುತ್ತಿದೆ ಎಂದರು.

ಈ ನಡುವೆ ಪಿಎಂ ಕೇರ್‌ ಫಂಡ್ ನಲ್ಲಿ 1 ಲಕ್ಷ ಕೋಟಿ ರೂ‌. ಗೂ ಹೆಚ್ಚು ಹಣ ಸಂಗ್ರಹ ಆಗಿರುವ ಬಗ್ಗೆ ಮಾಹಿತಿ ಇದೆ. 60 ಲಕ್ಷ ಮಂದಿ ತಮ್ಮ ಒಂದು ದಿನದ ಸಂಬಳ ನೀಡಿದ್ದಾರೆ. ಈ ಹಣವನ್ನು ಯಾವ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ., ಎಷ್ಟು ಹಣ ಸಂಗ್ರಹ ಆಗಿದೆ ಎಂಬುದನ್ನು ಇಆಳೆಗಳು ಸ್ಪಷ್ಟವಾಗಿ ತಿಳಿಸಬೇಕು. ತಿಳಿಸುವವರೆಗೂ ನಾವು ಕೇಳುವುದನ್ನು ಬಿಡುವುದಿಲ್ಲ ಎಂದರು.

ಕೊರೊನಾ: ಮಹಾರಾಷ್ಟ್ರದಿಂದ ಬಂದವರೇ ಹೆಚ್ಚು! ಆದರೂ, ವಲಸೆ ತಡೆಗೆ ಕ್ರಮ ಇಲ್ಲವೇಕೆ?

ಇನ್ನು ಸೋನಿಯಾಗಾಂಧಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಚಾರವಾಗಿ ಟ್ವೀಟ್‌ ಮಾಡಿಲ್ಲ. ಅದು ಕಾಂಗ್ರೆಸ್‌ ಪಕ್ಷದ ಖಾತೆಯಿಂದ ಮಾಡಿದ ಟ್ವೀಟ್‌ ಆಗಿದೆ. ಅಲ್ಲದೆ ಟ್ವಿಟರ್ ನಲ್ಲಿ ಮೂರು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿ ಕೇರ್ ಫಂಡ್ ಹಣವನ್ನು ಇಲ್ಲಿನ ಕಾರ್ಮಿಕರಿಗಾಗಿ ಬಳಸುತ್ತಿದ್ದೀರಾ, ಎಂದು ಟ್ವಿಟ್ ಮಾಡಲಾಗಿದೆ. ಇಷ್ಟಕ್ಕೆ ಪ್ರಕರಣ ದಾಖಲಿಸಿ ಎಫ್ ಐಆರ್ ಹಂತಕ್ಕೆ ಹೋಗುವುದರ ಹಿಂದೆ ಅಮಿತ್ ಷಾ ಹಾಗೂ ಸಂತೋಷ್ ಕೈವಾಡವಿರುವುದು ಖಚಿತ. ಈ ಬಗ್ಗೆ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇವೆ ಎಂದರು.

ಒಂದೇ ದಿನ 196 ಸೋಂಕು: ದ್ವಿಶತಕದತ್ತ ಕೊರೊನಾ ಕೇಸ್‌! ಬಹುತೇಕವು 'ಮಹಾ' ಪ್ರಸಾದ!

ಮೈಸೂರಿನ ಕೊರೊನಾ ವಾರಿಯರ್ಸ್‌ ಹೆಸರಿನಲ್ಲಿ ಸಂಸದ ಪ್ರತಾಪ್ ಸಿಂಹ ಫೋಟೋ ಕಾಣುತ್ತಿದೆ. ಪ್ರತಾಪ್ ಸಿಂಹ ಯಾವ ರೀತಿಯ ಕರೊನಾ ವಾರಿಯರ್ಸ್? ಮೈಸೂರಿಗೆ ಪ್ರತಾಪ್ ಸಿಂಹನ ಕೊಡುಗೆ ಏನು..? ಮೈಸೂರಿಗೆ ರಾಮದಾಸ್ ಕೊಡುಗೆ ಏನು..? ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ