ಕೃಷ್ಣರಾಜನಗರ: ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಮುಖ್ಯಮಂತ್ರಿಯಾದರೂ ನನ್ನ ಪಾಲಿಗೆ ಏನೂ ಅಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಪಟ್ಟಣದ ಹಳೆ ಎಡತೊರೆಯ ಶ್ರೀಅರ್ಕೆಶ್ವರ ದೇವಾಲಯದಲ್ಲಿ ವೈದ್ಯ ಡಾ.ದೇವೇಂದ್ರಕುಮಾರ್ ಕುಟುಂಬದವರು ನಡೆಸಿದ ಚಂಡಿಕಾಯಾಗದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ನಂತರ ಮಾತನಾಡಿದರು.
''ಸಿದ್ದರಾಮಯ್ಯ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿರಬಹುದು. ಆದರೆ, ನನಗೆ ಅವರು ಏನು ಅಲ್ಲ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಜೆಡಿಎಸ್ಗೆ ಮತ ಚಲಾಯಿಸಬೇಕು ಎಂದು ನಿರ್ಧರಿಸಿದ್ದಾರೆ. ಏನೂ ಅಲ್ಲದ ಜಿ.ಟಿ.ದೇವೇಗೌಡನನ್ನು ರಾಜ್ಯ ಜನತೆ ಒಮ್ಮೆ ತಿರುಗಿ ನೋಡುವ ಹಾಗೇ ಮಾಡಿದ್ದು, ನನ್ನ ಗೆಲುವು ನಿಶ್ಚಿತ,''ಎಂದರು.
''2004ರವರೆಗೆ ಕಾಂಗ್ರೆಸ್ ಸೀಮೆಎಣ್ಣೆ ಪಾರ್ಟಿ, ಬಿಜೆಪಿ ಬೆಂಕಿಕಡ್ಡಿ ಪಾರ್ಟಿ, ಕಾಂಗ್ರೆಸ್ ಯಾವಾಗಲೂ ಸೀಮೆಎಣ್ಣೆ ಸುರಿಯುತ್ತದೆ, ಬಿಜೆಪಿಯವರು ಬೆಂಕಿ ಹಾಕುತ್ತಾರೆ ಎಂದು ಟೀಕಿಸುತ್ತಿದ್ದ ಸಿದ್ದರಾಮಯ್ಯ ಸೋನಿಯಾ ಗಾಂಧಿ ಇಟಲಿ ಮಹಿಳೆ, ಅವರಿಗೆ ಪೌರತ್ವ ನೀಡಬೇಡಿ ಎಂದು ರಾಜ್ಯದಲ್ಲಿ ಪ್ರಥಮವಾಗಿ ಯಾರಾದರೂ ಹೇಳಿದ್ದರೆ ಅದು ಸಿದ್ದರಾಮಯ್ಯ,'' ಎಂದು ಹೇಳಿದರು.
''ನನಗೆ ಕುರಿ ಕಾಯಲು ಬರುವುದಿಲ್ಲ. ನನ್ನಂತಹವನನ್ನು ಎಚ್.ಡಿ.ದೇವೇಗೌಡರು ಹಣಕಾಸು ಖಾತೆ ನೀಡಿದ್ದಾರೆ. ಏನು ಮಾಡುವುದು ಎನ್ನುತ್ತಿದ್ದ ಸಿದ್ದರಾಮಯ್ಯ ಅಂದಿನಿಂದಲೂ ಹಣಕಾಸು ಯಾರಿಗೂ ನೀಡದೇ ನಿಭಾಯಿಸುತ್ತಿದ್ದಾರೆ, 2004ರಲ್ಲಿ ಉಪ ಮುಖ್ಯಮಂತ್ರಿ ಮಾಡಲು ಅತ್ತು ಕರೆದು ಮಾಡಲಾಯಿತು. ಅಂದು ಹಣಕಾಸಿಗೆ ಪಿಜಿಆರ್ ಸಿಂಧ್ಯಾ ಮತ್ತು ಉಪ ಮುಖ್ಯಮಂತ್ರಿಗೆ ಎಂ.ಪಿ.ಪ್ರಕಾಶ್ ರೆಡಿ ಇದ್ದರೂ ಇಬ್ಬರಿಗೂ ನೀಡದೇ ಎರಡನ್ನು ಸಿದ್ದರಾಮಯ್ಯನವರಿಗೆ ನೀಡಿದರು. ಸಾಲದೆ ಮತ್ತೆ ಅಬಕಾರಿ ಖಾತೆಯನ್ನು ಅತ್ತು ಕರೆದು ಕೇಳಿದರು. ಇದಕ್ಕೆ ನಾನೇ ಸಾಕ್ಷಿ. ಈಗಾಗಲೇ ರಾಜ್ಯದ ಜನತೆ ಒಂದು ಬಾರಿ ಸಿದ್ದರಾಮಯ್ಯನವರ ಕಥೆಯನ್ನು ಕೇಳಿದ್ದಾರೆ. ಆದರೆ ಇಂದು ಮುಖ್ಯಮಂತ್ರಿಯಾಗಿ ತಾವು ಭಾಷಣ ಮಾಡುವುದಲ್ಲದೆ ರಾಹುಲ್ಗೆ ಚೀಟಿಯಲ್ಲಿ ಬರೆದುಕೊಟ್ಟು ಭಾಷಣ ಮಾಡಿಸಿದಾಕ್ಷಣ ಸಾರ್ವಜನಿಕರು ಎಲ್ಲವನ್ನು ನಂಬುವುದಿಲ್ಲ,'' ಎಂದು ವ್ಯಂಗ್ಯವಾಡಿದರು.
''ಜೆಡಿಎಸ್ ರಾಜ್ಯದಲ್ಲಿ ಯಾವುದೇ ಪಕ್ಷ ದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿರಲಿಲ್ಲ. ಹಾಗಾಗಿ ಜೆಡಿಎಸ್ ಸ್ವತಂತ್ರವಾಗಿ ಏಕಾಂಗಿಯಾಗಿ ಹೋರಾಟ ಮಾಡಲಿದೆ. ಅಧಿಕಾರಕ್ಕೆ ಬೇಕಾದ ಅಂಕಿಯನ್ನು ಪಕ್ಷ ಪಡೆಯಲಿದೆ,''ಎಂದರು.
''ನಾನೆಂದು ನನ್ನ ರಾಜಕೀಯ ಜೀವನದಲ್ಲಿ ಒಂದು ಕೇಸ್ ಹಾಕಿಸಿಕೊಂಡವನಲ್ಲ. ಆದರೂ ನನ್ನನ್ನು ತುಳಿಯಲು ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ನಾನು ಹನುಮಂತನಿದ್ದ ಹಾಗೆ. ನನಗೆ ಅವರು ಎಷ್ಟೇ ಬಾಣಗಳನ್ನು ಬಿಟ್ಟರೂ ಅದು ನನಗೆ ಏನೂ ಮಾಡಲು ಸಾಧ್ಯವಿಲ್ಲ,'' ಎಂದು ಹೇಳಿದರು.
ನವನಗರ ಅರ್ಬನ್ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಡಾ.ಕೆ.ಎನ್.ದೇವೇಂದ್ರಕುಮಾರ್,ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮಾಜಿ ಸಂಸದ ಎಚ್.ವಿಶ್ವನಾಥ್ ಪತ್ನಿ ಶಾಂತಮ್ಮ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ವೈ.ಎಸ್.ಕುಮಾರ್, ದೇವಾಲಯ ಪಾರುಪತ್ತೆದಾರ್ ಆರತಿ, ಕಾಂಗ್ರೆಸ್ ಮುಖಂಡ ಹಂಪಾಪುರ ರಾಜೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಬ್ಬಾಳು ಮಂಜುನಾಥ್, ಮಧುವನಹಳ್ಳಿ ಕೇಶವ್ ಮತ್ತಿತರರು ಹಾಜರಿದ್ದರು.
ಪಟ್ಟಣದ ಹಳೆ ಎಡತೊರೆಯ ಶ್ರೀಅರ್ಕೆಶ್ವರ ದೇವಾಲಯದಲ್ಲಿ ವೈದ್ಯ ಡಾ.ದೇವೇಂದ್ರಕುಮಾರ್ ಕುಟುಂಬದವರು ನಡೆಸಿದ ಚಂಡಿಕಾಯಾಗದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ನಂತರ ಮಾತನಾಡಿದರು.
''ಸಿದ್ದರಾಮಯ್ಯ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿರಬಹುದು. ಆದರೆ, ನನಗೆ ಅವರು ಏನು ಅಲ್ಲ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಜೆಡಿಎಸ್ಗೆ ಮತ ಚಲಾಯಿಸಬೇಕು ಎಂದು ನಿರ್ಧರಿಸಿದ್ದಾರೆ. ಏನೂ ಅಲ್ಲದ ಜಿ.ಟಿ.ದೇವೇಗೌಡನನ್ನು ರಾಜ್ಯ ಜನತೆ ಒಮ್ಮೆ ತಿರುಗಿ ನೋಡುವ ಹಾಗೇ ಮಾಡಿದ್ದು, ನನ್ನ ಗೆಲುವು ನಿಶ್ಚಿತ,''ಎಂದರು.
''2004ರವರೆಗೆ ಕಾಂಗ್ರೆಸ್ ಸೀಮೆಎಣ್ಣೆ ಪಾರ್ಟಿ, ಬಿಜೆಪಿ ಬೆಂಕಿಕಡ್ಡಿ ಪಾರ್ಟಿ, ಕಾಂಗ್ರೆಸ್ ಯಾವಾಗಲೂ ಸೀಮೆಎಣ್ಣೆ ಸುರಿಯುತ್ತದೆ, ಬಿಜೆಪಿಯವರು ಬೆಂಕಿ ಹಾಕುತ್ತಾರೆ ಎಂದು ಟೀಕಿಸುತ್ತಿದ್ದ ಸಿದ್ದರಾಮಯ್ಯ ಸೋನಿಯಾ ಗಾಂಧಿ ಇಟಲಿ ಮಹಿಳೆ, ಅವರಿಗೆ ಪೌರತ್ವ ನೀಡಬೇಡಿ ಎಂದು ರಾಜ್ಯದಲ್ಲಿ ಪ್ರಥಮವಾಗಿ ಯಾರಾದರೂ ಹೇಳಿದ್ದರೆ ಅದು ಸಿದ್ದರಾಮಯ್ಯ,'' ಎಂದು ಹೇಳಿದರು.
''ನನಗೆ ಕುರಿ ಕಾಯಲು ಬರುವುದಿಲ್ಲ. ನನ್ನಂತಹವನನ್ನು ಎಚ್.ಡಿ.ದೇವೇಗೌಡರು ಹಣಕಾಸು ಖಾತೆ ನೀಡಿದ್ದಾರೆ. ಏನು ಮಾಡುವುದು ಎನ್ನುತ್ತಿದ್ದ ಸಿದ್ದರಾಮಯ್ಯ ಅಂದಿನಿಂದಲೂ ಹಣಕಾಸು ಯಾರಿಗೂ ನೀಡದೇ ನಿಭಾಯಿಸುತ್ತಿದ್ದಾರೆ, 2004ರಲ್ಲಿ ಉಪ ಮುಖ್ಯಮಂತ್ರಿ ಮಾಡಲು ಅತ್ತು ಕರೆದು ಮಾಡಲಾಯಿತು. ಅಂದು ಹಣಕಾಸಿಗೆ ಪಿಜಿಆರ್ ಸಿಂಧ್ಯಾ ಮತ್ತು ಉಪ ಮುಖ್ಯಮಂತ್ರಿಗೆ ಎಂ.ಪಿ.ಪ್ರಕಾಶ್ ರೆಡಿ ಇದ್ದರೂ ಇಬ್ಬರಿಗೂ ನೀಡದೇ ಎರಡನ್ನು ಸಿದ್ದರಾಮಯ್ಯನವರಿಗೆ ನೀಡಿದರು. ಸಾಲದೆ ಮತ್ತೆ ಅಬಕಾರಿ ಖಾತೆಯನ್ನು ಅತ್ತು ಕರೆದು ಕೇಳಿದರು. ಇದಕ್ಕೆ ನಾನೇ ಸಾಕ್ಷಿ. ಈಗಾಗಲೇ ರಾಜ್ಯದ ಜನತೆ ಒಂದು ಬಾರಿ ಸಿದ್ದರಾಮಯ್ಯನವರ ಕಥೆಯನ್ನು ಕೇಳಿದ್ದಾರೆ. ಆದರೆ ಇಂದು ಮುಖ್ಯಮಂತ್ರಿಯಾಗಿ ತಾವು ಭಾಷಣ ಮಾಡುವುದಲ್ಲದೆ ರಾಹುಲ್ಗೆ ಚೀಟಿಯಲ್ಲಿ ಬರೆದುಕೊಟ್ಟು ಭಾಷಣ ಮಾಡಿಸಿದಾಕ್ಷಣ ಸಾರ್ವಜನಿಕರು ಎಲ್ಲವನ್ನು ನಂಬುವುದಿಲ್ಲ,'' ಎಂದು ವ್ಯಂಗ್ಯವಾಡಿದರು.
''ಜೆಡಿಎಸ್ ರಾಜ್ಯದಲ್ಲಿ ಯಾವುದೇ ಪಕ್ಷ ದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿರಲಿಲ್ಲ. ಹಾಗಾಗಿ ಜೆಡಿಎಸ್ ಸ್ವತಂತ್ರವಾಗಿ ಏಕಾಂಗಿಯಾಗಿ ಹೋರಾಟ ಮಾಡಲಿದೆ. ಅಧಿಕಾರಕ್ಕೆ ಬೇಕಾದ ಅಂಕಿಯನ್ನು ಪಕ್ಷ ಪಡೆಯಲಿದೆ,''ಎಂದರು.
''ನಾನೆಂದು ನನ್ನ ರಾಜಕೀಯ ಜೀವನದಲ್ಲಿ ಒಂದು ಕೇಸ್ ಹಾಕಿಸಿಕೊಂಡವನಲ್ಲ. ಆದರೂ ನನ್ನನ್ನು ತುಳಿಯಲು ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ನಾನು ಹನುಮಂತನಿದ್ದ ಹಾಗೆ. ನನಗೆ ಅವರು ಎಷ್ಟೇ ಬಾಣಗಳನ್ನು ಬಿಟ್ಟರೂ ಅದು ನನಗೆ ಏನೂ ಮಾಡಲು ಸಾಧ್ಯವಿಲ್ಲ,'' ಎಂದು ಹೇಳಿದರು.
ನವನಗರ ಅರ್ಬನ್ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಡಾ.ಕೆ.ಎನ್.ದೇವೇಂದ್ರಕುಮಾರ್,ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮಾಜಿ ಸಂಸದ ಎಚ್.ವಿಶ್ವನಾಥ್ ಪತ್ನಿ ಶಾಂತಮ್ಮ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ವೈ.ಎಸ್.ಕುಮಾರ್, ದೇವಾಲಯ ಪಾರುಪತ್ತೆದಾರ್ ಆರತಿ, ಕಾಂಗ್ರೆಸ್ ಮುಖಂಡ ಹಂಪಾಪುರ ರಾಜೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಬ್ಬಾಳು ಮಂಜುನಾಥ್, ಮಧುವನಹಳ್ಳಿ ಕೇಶವ್ ಮತ್ತಿತರರು ಹಾಜರಿದ್ದರು.