ಮೈಸೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ರಾತ್ರಿ ಮೈಸೂರು ನಗರದಲ್ಲಿ ಓಪನ್ ಟಾಪ್ ಬಸ್ಸಿನಲ್ಲಿ ಸಂಚರಿಸಿ ವಿದ್ಯುತ್ ದೀಪಾಲಂಕೃತ ಮೈಸೂರನ್ನು ನೋಡಿ ಸಂತಸ ಪಟ್ಟರು.
ಕುಮಾರಸ್ವಾಮಿ ಅವರು ಯುವ ದಸರಾ ಉದ್ಘಾಟಿಸಲು ನಗರಕ್ಕೆ ಆಗಮಿಸಿ ಇಲ್ಲಿನ ಸರಕಾರಿ ಅತಿಥಿಗೃಹದಿಂದ ಯುವ ದಸರಾ ನಡೆಯುತ್ತಿರುವ ಮಹಾರಾಜ ಕಾಲೇಜಿನ ಮೈದಾನಕ್ಕೆ ಓಪನ್ ಟಾಪ್ ಬಸ್ಸಿನಲ್ಲಿ ಸಂಚರಿಸಿದರು. ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ಸರ್ಕಲ್, ಜಯಚಾಮರಾಜ ಒಡೆಯರ್ ವೃತ್ತ, ನೂರಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜಿನ ಮೈದಾನಕ್ಕೆ ಆಗಮಿಸಿದರು.
ಸಯ್ಯಾಜಿರಾವ್ ರಸ್ತೆ ಸೇರಿದಂತೆ ದಾರಿಯುದ್ದಕ್ಕೂ ದೀಪಾಲಂಕಾರದ ಸೊಬಗು, ಝಗಮಗಿಸುವ ಅರಮನೆಯ ಬೆಳಕನ್ನು ನೋಡಿ ಪುಳಕಿತರಾದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಿವಶಂಕರರೆಡ್ಡಿ ಅವರೂ ಮುಖ್ಯಮಂತ್ರಿಗಳ ಜತೆಗಿದ್ದರು.
ಕುಮಾರಸ್ವಾಮಿ ಅವರು ಯುವ ದಸರಾ ಉದ್ಘಾಟಿಸಲು ನಗರಕ್ಕೆ ಆಗಮಿಸಿ ಇಲ್ಲಿನ ಸರಕಾರಿ ಅತಿಥಿಗೃಹದಿಂದ ಯುವ ದಸರಾ ನಡೆಯುತ್ತಿರುವ ಮಹಾರಾಜ ಕಾಲೇಜಿನ ಮೈದಾನಕ್ಕೆ ಓಪನ್ ಟಾಪ್ ಬಸ್ಸಿನಲ್ಲಿ ಸಂಚರಿಸಿದರು. ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ಸರ್ಕಲ್, ಜಯಚಾಮರಾಜ ಒಡೆಯರ್ ವೃತ್ತ, ನೂರಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜಿನ ಮೈದಾನಕ್ಕೆ ಆಗಮಿಸಿದರು.
ಸಯ್ಯಾಜಿರಾವ್ ರಸ್ತೆ ಸೇರಿದಂತೆ ದಾರಿಯುದ್ದಕ್ಕೂ ದೀಪಾಲಂಕಾರದ ಸೊಬಗು, ಝಗಮಗಿಸುವ ಅರಮನೆಯ ಬೆಳಕನ್ನು ನೋಡಿ ಪುಳಕಿತರಾದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಿವಶಂಕರರೆಡ್ಡಿ ಅವರೂ ಮುಖ್ಯಮಂತ್ರಿಗಳ ಜತೆಗಿದ್ದರು.