ಆ್ಯಪ್ನಗರ

ನವೆಂಬರ್‌ನಲ್ಲಿ ಸಿಎನ್‌ಸಿ ‘ದಿಲ್ಲಿ ಚಲೋ’

ಜಮ್ಮು ಮತ್ತು ಕಾಶ್ಮೀರ, ಲಡಾಕ್‌ ಹಾಗೂ ಲೇಹ್‌ ಪ್ರದೇಶಕ್ಕೆ ನೀಡಿರುವ ಪ್ರತ್ಯೇಕ ಸ್ವಾಯತ್ತ ಮಾದರಿಯಲ್ಲೇ ವಿಶಿಷ್ಟ ಸಂಸ್ಕೃತಿ, ಭೌಗೋಳಿಕೆ ರಚನೆ ಹೊಂದಿರುವ ಕೊಡವರು ವಾಸಿಸುತ್ತಿರುವ ಪ್ರದೇಶವನ್ನು ಸ್ವಾಯತ್ತ ಎಂದು ಕೇಂದ್ರ ಸರಕಾರ ಘೋಷಿಸಬೇಕೆಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು. ನಾಚಪ್ಪ ಆಗ್ರಹಿಸಿದರು.

Vijaya Karnataka 24 Jul 2019, 5:00 am
ಮೈಸೂರು : ಜಮ್ಮು ಮತ್ತು ಕಾಶ್ಮೀರ, ಲಡಾಕ್‌ ಹಾಗೂ ಲೇಹ್‌ ಪ್ರದೇಶಕ್ಕೆ ನೀಡಿರುವ ಪ್ರತ್ಯೇಕ ಸ್ವಾಯತ್ತ ಮಾದರಿಯಲ್ಲೇ ವಿಶಿಷ್ಟ ಸಂಸ್ಕೃತಿ, ಭೌಗೋಳಿಕೆ ರಚನೆ ಹೊಂದಿರುವ ಕೊಡವರು ವಾಸಿಸುತ್ತಿರುವ ಪ್ರದೇಶವನ್ನು ಸ್ವಾಯತ್ತ ಎಂದು ಕೇಂದ್ರ ಸರಕಾರ ಘೋಷಿಸಬೇಕೆಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು. ನಾಚಪ್ಪ ಆಗ್ರಹಿಸಿದರು.
Vijaya Karnataka Web cnc in delhi chalo in november
ನವೆಂಬರ್‌ನಲ್ಲಿ ಸಿಎನ್‌ಸಿ ‘ದಿಲ್ಲಿ ಚಲೋ’


''ಪ್ರಪಂಚದ ಹಲವು ಪ್ರದೇಶದಲ್ಲಿ ಹಾಗೂ ಭಾರತದಲ್ಲೂ ಸ್ವಾಯತ್ತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅದೇ ರೀತಿ ಕೇಂದ್ರ ಸರಕಾರ ಕೊಡಗನ್ನು ಘೋಷಣೆ ಮಾಡಬೇಕು. ಇದರ ಜತೆ ಕೊಡವರನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಬೇಕು. ಕೊಡವ ಬುಡಕಟ್ಟು ಕುಲದ ಪ್ರಧಾನ ಹಕ್ಕೊತ್ತಾಯ ಹಾಗೂ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್‌ ಕೌನ್ಸಿಲ್‌ನಿಂದ ನವೆಂಬರ್‌ ಒಂದರಂದು ದಿಲ್ಲಿಯ ಸಂಸತ್‌ ಮಾರ್ಗದಲ್ಲಿ ದಿಲ್ಲಿ ಚಲೋ ಧರಣಿ- ಶಾಂತಿಯುತ ಸತ್ಯಾಗ್ರಹ ನಡೆಸಲಾಗುವುದು,'' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ನ.2ರಂದು ಹೊಸದಿಲ್ಲಿಯಲ್ಲಿನ ಚಾಣ್ಯಕಪುರಿಯ ಫ್ರೆಂಚ್‌ ರಾಯಭಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಿ ಈ ಹಿಂದೆ ಟಿಪ್ಪುವಿನೊಂದಿಗೆ ಸೇರಿ ಕೊಡವರ ಮಾರಣಹೋಮಕ್ಕೆ ಅಂದಿನ ಫ್ರೆಂಚರು ಕಾರಣರಾದ ಹಿನ್ನೆಲೆಯಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಲಾಗುವುದು. ಈಗ 50ರಿಂದ 60 ಲಕ್ಷ ಜನಸಂಖ್ಯೆ ಹೊಂದಿರುವವರೆಲ್ಲ ಪ್ರಭಾವದ ಕಾರಣ ಬುಡಕಟ್ಟು ಪಟ್ಟಿಯಲ್ಲಿದ್ದಾರೆ. ಕೇವಲ ಲಕ್ಷದಷ್ಟಿರುವ ಹಾಗೂ ತಮ್ಮದೇ ಆದ ಊಟ, ತಿಂಡಿ, ಉಡುಗೆ- ತೊಡುಗೆ, ಭೂಮಿ, ಭಾಷೆ ಹಾಗೂ ವಿಶಿಷ್ಟ ಸಂಸ್ಕೃತಿ ಹೊಂದಿರುವ, ಅಪಾಯದ ಅಂಚಿನಲ್ಲಿರುವ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಬೇಕೆಂದು,'' ಮನವಿ ಮಾಡಲಾಗುವುದು ಎಂದರು.

ಕಲಿಯಂಡ ಪ್ರಕಾಶ್‌, ಚಂಬಂಡ ಜನತ್‌, ಕಾಟುಮಣಿಯಂಡ ಉಮೇಶ್‌, ಅಪ್ಪಾರಂಡ ಪೂವಣ್ಣ, ಕಿರಿಯಮಾಡ ಶರಿನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ