ಆ್ಯಪ್ನಗರ

ಮುಸ್ಲಿಮರನ್ನು ಓಲೈಸಲು ಸಿದ್ದರಾಮಯ್ಯ, ಎಚ್‌ಡಿಕೆ ನಡುವೆ ಸ್ಪರ್ಧೆ ಶುರುವಾಗಿದೆ: ಅಶ್ವತ್ಥನಾರಾಯಣ ಲೇವಡಿ!

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಹೊಗಳಿ ಆಲ್ ಖೈದಾ ನಾಯಕ ನೀಡಿದ ಹೇಳಿಕೆಯನ್ನು ಅಲ್ಪ ಸಂಖ್ಯಾತರು ಖಂಡಿಸಬೇಕಿತ್ತು. ಆದರೆ ಹೇಳಿಕೆಯ ಬಗ್ಗೆ ಮೊದಲು ಸಿದ್ಧರಾಮಯ್ಯನವರೇ ಖಂಡಿಸಿಲ್ಲ. ಮುಸ್ಲಿಂ ಓಟಿಗಾಗಿ ಕಾಂಗ್ರೆಸ್ ಜೆಡಿಎಸ್ ಪೈಪೋಟಿ ನಡೆಸುತ್ತಿವೆ. ಆಲ್ ಖೈದಾ ಹೇಳಿಕೆಗೆ ಸೊಪ್ಪು ಹಾಕಬೇಡಿ. ಸಿದ್ಧರಾಮಯ್ಯನವರೇ ಆಲ್ ಖೈದಾ ಹೇಳಿಕೆ ಖಂಡಿಸಿಲ್ಲ ಎಂದರು.

Edited byಸಿನಾನ್\u200c ಇಂದಬೆಟ್ಟು | Vijaya Karnataka Web 7 Apr 2022, 6:23 pm
ಮೈಸೂರು: ಮುಸ್ಲಿಮರನ್ನು ಓಲೈಕೆ ಮಾಡಲು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಕಂಪಿಟೇಷನ್ ಶುರುವಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಲೇವಡಿ ಮಾಡಿದರು.
Vijaya Karnataka Web ashwath narayan


ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಮರನ್ನು ಓಲೈಕೆ ಮಾಡಲು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಕಂಪಿಟೇಷನ್ ಶುರುವಾಗಿದೆ. ಇಬ್ಬರು ಪೈಪೋಟಿ ನಡೆಸುತ್ತಲೇ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ದಿಲ್ಲಿ ಭೇಟಿ ಸಕ್ಸಸ್‌.. ಸಂಪುಟ ವಿಸ್ತರಣೆ ಪಕ್ಕಾ.. ಯಾರು ಇನ್‌ ಯಾರು ಔಟ್‌ ಅನ್ನೋದು ಸಸ್ಪೆನ್ಸ್‌: ಸಿಎಂ ಬೊಮ್ಮಾಯಿ!
ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನಿಯಾಗಿಲ್ಲ. ಉತ್ತಮ ವಾಗ್ಮಿಗಳು. ಅವರು ಸರಿಯಾಗಿ ಕೆಲಸ ಮಾಡ್ತಿದ್ದಾರೆ. ಯಾವ ವಿಚಾರಕ್ಕೆ ಏನು ಹೇಳಬೇಕು ಅದನ್ನ ಹೇಳ್ತಾರೆ. ಸಿಎಂ ಬೊಮ್ಮಾಯಿ ಪ್ರಬುದ್ಧತೆ ಯಿಂದ ಕಾರ್ಯ ನಿರ್ವಹಣೆ ಮಾಡ್ತಿದ್ದಾರೆ. ಕುಮಾರಸ್ವಾಮಿ ಅನಗತ್ಯ ಹೇಳಿಕೆ ನೀಡುವುದರ ಮೂಲಕ ಗೊಂದಲ ಸೃಷ್ಟಿ ಮಾಡ್ತಿದ್ದಾರೆ ಎಂದು ಹೇಳಿದರು.

ಅಲ್‌ಖೈದಾ ಹೇಳಿಕೆ ಅಲ್ಪಸಂಖ್ಯಾತರು ಖಂಡಿಸಬೇಕಿತ್ತು

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಹೊಗಳಿ ಆಲ್ ಖೈದಾ ನಾಯಕ ನೀಡಿದ ಹೇಳಿಕೆಯನ್ನು ಅಲ್ಪ ಸಂಖ್ಯಾತರು ಖಂಡಿಸಬೇಕಿತ್ತು. ಆದರೆ ಹೇಳಿಕೆಯ ಬಗ್ಗೆ ಮೊದಲು ಸಿದ್ಧರಾಮಯ್ಯನವರೇ ಖಂಡಿಸಿಲ್ಲ. ಮುಸ್ಲಿಂ ಓಟಿಗಾಗಿ ಕಾಂಗ್ರೆಸ್ ಜೆಡಿಎಸ್ ಪೈಪೋಟಿ ನಡೆಸುತ್ತಿವೆ. ಆಲ್ ಖೈದಾ ಹೇಳಿಕೆಗೆ ಸೊಪ್ಪು ಹಾಕಬೇಡಿ. ಸಿದ್ಧರಾಮಯ್ಯನವರೇ ಆಲ್ ಖೈದಾ ಹೇಳಿಕೆ ಖಂಡಿಸಿಲ್ಲ ಎಂದರು.

ಮೈಸೂರಿನ ಗುರುಕುಲದ ಹಾಸ್ಟೆಲ್‌ನಲ್ಲಿ ಹೆಣ್ಮಕ್ಕಳಿಗೆ ನಿರಂತರ ಲೈಂಗಿಕ ದೌರ್ಜನ್ಯ! ಕಾಮುಕ ಮ್ಯಾನೇಜರ್ ಬಂಧನ
ಮುಸ್ಲಿಮರು ಕೆತ್ತಿದ ವಿಗ್ರಹ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಯಾರ ಬಳಿ ಏನ್ ಖರೀದಿ ಮಾಡಬೇಕೆಂದು ಹೇಳಲಾಗದು. ಧರ್ಮಕ್ಕಿಂತ ಮಿಗಿಲಾಗಿ ನಾವು ಭಾರತೀಯರು. ನಮ್ಮನ್ನ ಅಸಹಾಯಕರು ಎಂದುಕೊಳ್ಳಬೇಡಿ. ನಮಗೆ ಯಾರ ಜೊತೆಯೂ ದ್ವೇಷ, ವೈಮನಸ್ಸು ಇಲ್ಲ ಪ್ರತಿಯೊಬ್ಬರು ಕಾನೂನು ಪಾಲಿಸಬೇಕು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

ಬೆಲೆ ಏರಿಕೆಗೆ ಸಚಿವರ ಉತ್ತರ ಹೀಗಿತ್ತು!

ಇನ್ನು ಬೆಲೆ ಏರಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಲು ಎಮೋಷನಲ್‌ ಕಾರ್ಡ್ ಪ್ಲೇ ಮಾಡಲಾಗುತ್ತಿದೆ ಎನ್ನುವ ವಿಚಾರ ಸತ್ಯಕ್ಕೆ ದೂರ. ಬಿಜೆಪಿಗೆ ಇನ್ನೂ ಅಂತಹ ಸ್ಥಿತಿ ಬಂದಿಲ್ಲ.ರಷ್ಯಾ ಉಕ್ರೇನ್ ಯುದ್ದದ ಪರಿಣಾಮ ತೈಲ ಆಮದಿನಲ್ಲಿ ವ್ಯತ್ಯಾಸವಾಗಿದೆ.ಹಣದುಬ್ಬರದಿಂದ ಅಗತ್ಯ ವಸ್ತುಗಳ ಬೆಲೆ‌ ಏರಿಕೆ ಆಗಿದೆ ಎಂದರು.

ಪ್ರಧಾನಿ ಮೋದಿ ವಿಶ್ವದಲ್ಲೇ ಗಮನ ಸೆಳೆಯುವ ಕೆಲಸ ಮಾಡ್ತಿದ್ದಾರೆ. ಬೆಲೆ ಏರಿಕೆಯನ್ನೂ ಹಂತಹಂತವಾಗಿ ಕಡಿಮೆ ಮಾಡುತ್ತೇವೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಚಾಮುಂಡಿಬೆಟ್ಟಕ್ಕೆ ರೋಪ್ ವೇ ಬೇಡ, ಪರಿಸರ ನಾಶ ಬೇಡ : ಪ್ರಮೋದಾದೇವಿ ಒಡೆಯರ್
ದೇಶ ವಿದೇಶಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಕಷ್ಟಪಡಲಾಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲೇ ಭಾರತ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ ಅಂತ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ