ಆ್ಯಪ್ನಗರ

ಬ್ರಿಟಿಷರ ಬಳಿ ದಮ್ಮಯ್ಯ ಬಿಟ್ಟುಬಿಡಿ ಎಂದಿದ್ದ ಸಾರ್ವಕರ್‌ಗೆ ಈಗ ಬಿಜೆಪಿಯವರು 'ವೀರ್' ಅಂತಾರೆ..! ಸಿದ್ದು ಲೇವಡಿ

ಸಾವರ್ಕರ್ ಅಂತ ಒಬ್ಬರು ಇದ್ದರು. ಅವರನ್ನ ಬ್ರಿಟಿಷರು ಜೈಲಿಗೆ ಹಾಕಿದ್ದರು. ಆ ವೇಳೆ ಸಾವರ್ಕರ್ ಅವರು ಮುಚ್ಚಳಿಕೆ ಬರೆದು ಕೊಟ್ಟಿದ್ರು. ನಿಮ್ಮ ದಮ್ಮಯ್ಯ ಅಂತೀನಿ ಬಿಟ್ಟು ಬಿಡಿ ಎಂದು ಪತ್ರ ಬರೆದಿದ್ದರು. ಅವರನ್ನ ಈಗ ಬಿಜೆಪಿಯವರು ವೀರ್ ಸಾವರ್ಕರ್ ಅಂತಾರೆ. ಈಗ ಹರ್ ಘರ್ ತಿರಂಗ ಎಂದು ನಾಟಕ ಮಾಡ್ತಾರೆ. ಆದರೆ ಅಂದು ಆರ್‌ ಎಸ್‌ ಎಸ್ ತ್ರಿವರ್ಣ ಧ್ವಜವನ್ನ ಗೌರವಿಸಬೇಡಿ ಎಂದಿದ್ದರು. ಅದರಲ್ಲಿರುವ ಮೂರು ಬಣ್ಣಗಳ ಬಗ್ಗೆ ಕೆಟ್ಟದಾಗಿ ಬರೆದಿದ್ದರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Edited byದಿಲೀಪ್ ಡಿ. ಆರ್. | Lipi 8 Aug 2022, 8:52 pm

ಹೈಲೈಟ್ಸ್‌:

  • ಬ್ರಿಟಿಷರನ್ನ ತೊಲಗಿಸಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ್ದು ಕಾಂಗ್ರೆಸ್
  • ಬಿಜೆಪಿ, ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟವನ್ನೇ ನಡೆಸಿಲ್ಲ
  • ದೇಶದ ಒಳಿತಿಗಾಗಿ ಕಾಂಗ್ರೆಸ್ ಕೆಲಸ ಮಾಡಿದೆ:ಸಿದ್ದರಾಮಯ್ಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web siddu
ಬ್ರಿಟಿಷರ ಬಳಿ ದಮ್ಮಯ್ಯ ಬಿಟ್ಟುಬಿಡಿ ಎಂದಿದ್ದ ಸಾರ್ವಕರ್‌ಗೆ ಈಗ ಬಿಜೆಪಿಯವರು 'ವೀರ್' ಅಂತಾರೆ..! ಸಿದ್ದು ಲೇವಡಿ
ಮೈಸೂರು: ಸಿದ್ದರಾಮೋತ್ಸವದ ಬಳಿಕ ಸಿದ್ದರಾಮಯ್ಯ ಸಕತ್ ಆಕ್ಟೀವ್ ಆಗಿದ್ದಾರೆ. ಬಿಜೆಪಿಗೆ ಸರಿಯಾಗಿಯೇ ಟಾಂಗ್ ನೀಡ್ತಿದ್ದಾರೆ. ಸದ್ಯ ಮೈಸೂರು ಪ್ರವಾಸದಲ್ಲಿರೋ ಸಿದ್ದು ಟೀಕೆಗಳ ಸುರಿಮಳೆಗೈದಿದ್ದಾರೆ. 75ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಆರ್ ಎಸ್ ಎಸ್ ಕಚೇರಿಯ ಮೇಲೆ 52 ವರ್ಷ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ಭಾಗವಾಧ್ವಜ ಹಾರಿಸಿದ್ದರು. ಹೀಗಾಗಿ, ಜನರೇ ಕೈ ಮುಗಿದು ನಿಮಗೆ ಪ್ರಾರ್ಥನೆ ಮಾಡ್ತೀನಿ. ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಎಂದೂ ನಿಮ್ಮ ಪರ ಇರಲ್ಲ, ದಯಮಾಡಿ ಎಚ್ಚರವಾಗಿರಿ ನಾಗರೀಕರೇ ಎಂದು ಮನವಿ ಮಾಡಿದರು.

ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿ ನಾಯಕರ ಕೊಡುಗೆ ಶೂನ್ಯ: ಮೈಸೂರಿನಲ್ಲಿ ಸಿದ್ದರಾಮಯ್ಯ ವಾಗ್ದಾಳಿ
76 ನೇ ಸ್ವಾತಂತ್ರ್ಯೋತ್ಸವ ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಕಡೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬ್ರಿಟಿಷರನ್ನ ತೊಲಗಿಸಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ್ದು ಕಾಂಗ್ರೆಸ್. ಬಿಜೆಪಿ, ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟವನ್ನೇ ನಡೆಸಿಲ್ಲ. 1885ರಲ್ಲಿ ಕಾಂಗ್ರೆಸ್ ಸ್ಥಾಪನೆ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ದೇಶದ ಒಳಿತಿಗಾಗಿ ಕಾಂಗ್ರೆಸ್ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷ ಬ್ರಿಟಿಷರನ್ನ ದೇಶದಿಂದ ಓಡಿಸಲು ಹೋರಾಟ ನಡೆಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ಸಿದ್ದರಾಮೋತ್ಸವದಿಂದ ಬಿಜೆಪಿಯವ್ರಿಗೆ ಉರಿ ಶುರುವಾಗಿದೆ- ಮಾಜಿ ಸಚಿವ ಮಹದೇವಪ್ಪ ವ್ಯಂಗ್ಯ
ಸಾವರ್ಕರ್ ಅಂತ ಒಬ್ಬರು ಇದ್ದರು. ಅವರನ್ನ ಬ್ರಿಟಿಷರು ಜೈಲಿಗೆ ಹಾಕಿದ್ದರು. ಆ ವೇಳೆ ಸಾವರ್ಕರ್ ಅವರು ಮುಚ್ಚಳಿಕೆ ಬರೆದು ಕೊಟ್ಟಿದ್ರು. ನಿಮ್ಮ ದಮ್ಮಯ್ಯ ಅಂತೀನಿ ಬಿಟ್ಟು ಬಿಡಿ ಎಂದು ಪತ್ರ ಬರೆದಿದ್ದರು. ಅವರನ್ನ ಈಗ ಬಿಜೆಪಿಯವರು ವೀರ್ ಸಾವರ್ಕರ್ ಅಂತಾರೆ. ಈಗ ಹರ್ ಘರ್ ತಿರಂಗ ಎಂದು ನಾಟಕ ಮಾಡ್ತಾರೆ. ಆದರೆ ಅಂದು ಆರ್‌ ಎಸ್‌ ಎಸ್ ತ್ರಿವರ್ಣ ಧ್ವಜವನ್ನ ಗೌರವಿಸಬೇಡಿ ಎಂದಿದ್ದರು. ಅದರಲ್ಲಿರುವ ಮೂರು ಬಣ್ಣಗಳ ಬಗ್ಗೆ ಕೆಟ್ಟದಾಗಿ ಬರೆದಿದ್ದರು. ಈಗ ಹೇಳಿ ನಿಮಗೆ ನಾಚಿಕೆ ಆಗಲ್ವಾ ಮೋದಿ ಅವರೇ ಎಂದು ಸಿದ್ಧರಾಮಯ್ಯ ಸವಾಲೆಸೆದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ