ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸೋಮವಾರ ಕೊರೊನಾ ವೈರಸ್ ಸೋಂಕು ತನ್ನ ಪ್ರಮಾಣವನ್ನು ಹೆಚ್ಚಿಸಿದ್ದು, ಒಂದೇ ದಿನ ಸೋಂಕು ತಗಲಿರುವವರ ಸಂಖ್ಯೆ ಅರ್ಧ ಶತಕ ದಾಟಲಿದೆ ಎನ್ನಲಾಗಿದೆ. ಈ ನಡುವೆ ಶಾಸಕ ಸಾ.ರಾ ಮಹೇಶ್ ಸಹಿತ ಅವರ 50 ಕ್ಕೂ ಹೆಚ್ಚು ಮಂದಿ ಬೆಂಬಲಿಗರು ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಒಂದೇ ದಿನಕ್ಕೆ ದಿನ 59ಕ್ಕೂ ಹೆಚ್ಚು ಪಾಸಿಟಿವ್ ಬರುವ ಶಂಕೆಯಿದೆ. ಇದರಲ್ಲಿ 9ಕ್ಕೂ ಹೆಚ್ಚು ಮಂದಿ ಮಂಡ್ಯದಿಂದ ಆಗಮಿಸಿದವರಿಗೆ ಸೋಂಕು ತಗುಲಿದ ಅನುಮಾನವಿದೆ. ಇದರೊಟ್ಟಿಗೆ ಮತ್ತೊಂದು ಶಾಕಿಂಗ್ ವಿಚಾರವೆಂದರೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರಲ್ಲಿ 72 ವರ್ಷ ಒಬ್ಬರು, 46 ವರ್ಷದ ಮತ್ತೊಬ್ಬರು ಸಾವನ್ನಪ್ಪಿದ್ದು, ನಿಯಮದ ಪ್ರಕಾರ ಜಿಲ್ಲಾಡಳಿತ ಅಂತ್ಯಕ್ರಿಯೆ ಮುಗಿಸಿದೆಯಂತೆ. ಈ ಕುರಿತು ಅಧಿಕೃತ ಘೋಷಣೆ ನೀಡುವುದೊಂದೇ ಬಾಕಿ ಇದೆ.
ಈ ನಡುವೆ ಕೆ.ಆರ್ ನಗರದ ತಹಶೀಲ್ದಾರ್ ರಿಗೂ ಸೋಂಕು ದೃಢವಾಗಿದ್ದು, ಮಾಜಿ ಸಚಿವ ಸಾ.ರಾ ಮಹೇಶ್ಗೆ ಆತಂಕ ಹೆಚ್ಚಾಗಿದೆ. ಕಳೆದ ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಸಾ.ರಾ.ಮಹೇಶ್ ಕಂಟೈನ್ಮೆಂಟ್ ಜೋನ್ಗೆ ಭೇಟಿ ನೀಡಿದ್ದರು. ಈ ವೇಳೆ ತಹಶೀಲ್ದಾರ್ ಸಹ ಇದ್ದರು. ಇದೀಗ ತಹಶೀಲ್ದಾರ್ಗೆ ಸೋಂಕು ಹಿನ್ನೆಲೆ ಸಾ.ರಾ.ಮಹೇಶ್ ಕ್ವಾರಂಟೈನ್ ಗೊಳಪಟ್ಟಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇಂದು ಒಂದೇ ದಿನಕ್ಕೆ ದಿನ 59ಕ್ಕೂ ಹೆಚ್ಚು ಪಾಸಿಟಿವ್ ಬರುವ ಶಂಕೆಯಿದೆ. ಇದರಲ್ಲಿ 9ಕ್ಕೂ ಹೆಚ್ಚು ಮಂದಿ ಮಂಡ್ಯದಿಂದ ಆಗಮಿಸಿದವರಿಗೆ ಸೋಂಕು ತಗುಲಿದ ಅನುಮಾನವಿದೆ. ಇದರೊಟ್ಟಿಗೆ ಮತ್ತೊಂದು ಶಾಕಿಂಗ್ ವಿಚಾರವೆಂದರೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರಲ್ಲಿ 72 ವರ್ಷ ಒಬ್ಬರು, 46 ವರ್ಷದ ಮತ್ತೊಬ್ಬರು ಸಾವನ್ನಪ್ಪಿದ್ದು, ನಿಯಮದ ಪ್ರಕಾರ ಜಿಲ್ಲಾಡಳಿತ ಅಂತ್ಯಕ್ರಿಯೆ ಮುಗಿಸಿದೆಯಂತೆ. ಈ ಕುರಿತು ಅಧಿಕೃತ ಘೋಷಣೆ ನೀಡುವುದೊಂದೇ ಬಾಕಿ ಇದೆ.
ಈ ನಡುವೆ ಕೆ.ಆರ್ ನಗರದ ತಹಶೀಲ್ದಾರ್ ರಿಗೂ ಸೋಂಕು ದೃಢವಾಗಿದ್ದು, ಮಾಜಿ ಸಚಿವ ಸಾ.ರಾ ಮಹೇಶ್ಗೆ ಆತಂಕ ಹೆಚ್ಚಾಗಿದೆ. ಕಳೆದ ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಸಾ.ರಾ.ಮಹೇಶ್ ಕಂಟೈನ್ಮೆಂಟ್ ಜೋನ್ಗೆ ಭೇಟಿ ನೀಡಿದ್ದರು. ಈ ವೇಳೆ ತಹಶೀಲ್ದಾರ್ ಸಹ ಇದ್ದರು. ಇದೀಗ ತಹಶೀಲ್ದಾರ್ಗೆ ಸೋಂಕು ಹಿನ್ನೆಲೆ ಸಾ.ರಾ.ಮಹೇಶ್ ಕ್ವಾರಂಟೈನ್ ಗೊಳಪಟ್ಟಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.