ಆ್ಯಪ್ನಗರ

ಮೈಸೂರಿನಲ್ಲಿ ಈ ಕೊರೊನಾ ಕಾಯಿ ಮನೆ ಬಾಗಿಲಿಗೆ ಕಟ್ಟಿದ್ರೆ ವೈರಸ್ ಬರಲ್ವಂತೆ!

ಮಾರಕ ಕೊರೊನಾ ವೈರಸ್ ಅನ್ನು ಶಮನಗೊಳಿಸುವ ಸಲುವಾಗಿ ಜಗತ್ತಿನ ಹಲವು ದೇಶಗಳಲ್ಲಿ ವೈದ್ಯರು ಔಷಧಿ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮೈಸೂರಿನಲ್ಲಿ ಹೊಸದಾಗಿ ಕೊರೊನಾ ಕಾಯಿಯನ್ನು ಮನೆ ಬಾಗಿಲಿಗೆ ಕಟ್ಟುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.

Vijaya Karnataka Web 4 Apr 2020, 3:00 pm
ಮೈಸೂರು: ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕು ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದನ್ನು ತಡೆಯಲು ವೈದ್ಯರು ಹಲವು ವಿಧಾನದಲ್ಲಿ ಔಷಧಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದಕ್ಕೆ ಮತ್ತೊಂದು ಮೌಢ್ಯ ಸಹ ಎದುರಾಗಿದೆ.
Vijaya Karnataka Web corona nut


ತಮಗೆ ಮನಬಂದಂತೆ ಆಚರಣೆ ಮಾಡುವ ಮೂಲಕ ಕೊರೊನಾ ವೈರಸ್‌ ಅನ್ನು ದೂರ ಇಡಬಹುದು ಎಂದು ಭಾವಿಸಿ ಕಾಯಿಯೊಂದನ್ನು ಕಟ್ಟುತ್ತಿದ್ದಾರೆ. ನಗರದ ರಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಬೇಲಿ ಮುಳ್ಳು ಕಾಯಿ ಅಥವಾ ಮುಳ್ಳು ಮುತ್ತುಗ ಕಾಯಿಯನ್ನು ಬೇವಿನ ಸೊಪ್ಪಿನೊಂದಿಗೆ ತಮ್ಮ - ತಮ್ಮ ಮನೆ ಬಾಗಿಲಿಗೆ ಕಟ್ಟಲಾಗಿದೆ.

ಈ ಆಚರಣೆ ಮಾಡುವುದರಿಂದ ಕೊರೊನಾ ವೈರಸ್ ಬರುವುದಿಲ್ಲ ಎಂದು ಅನುಕರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ರೀತಿಯ ಕಾಯಿಗಳಿಗೆ ಹೆಚ್ಚುಬೇಡಿಕೆ ಬಂದಿದೆ. ಬೇಲಿ ಮುಳ್ಳಿನ ಕಾಯಿ ಎಂದು ಕರೆಸಿಕೊಳ್ಳುವ ಈ ಕಾಯಿಯ ತುಂಬಾ ಮುಳ್ಳುಗಳಿದ್ದು, ದುಂಡಾಗಿದೆ. ಇದು ಕೊರೊನಾ ವೈರಸ್‌ ರೀತಿ ಕಾಣುತ್ತಿದೆ. ಹಾಗಾಗಿ, ಜನರು ಇದರ ಮೊರೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಇದಕ್ಕೆ ಕೊರೊನಾ ಕಾಯಿ ಎಂದು ಹೊಸದಾಗಿ ಕರೆಯಲಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ