ಮೈಸೂರು: ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕು ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದನ್ನು ತಡೆಯಲು ವೈದ್ಯರು ಹಲವು ವಿಧಾನದಲ್ಲಿ ಔಷಧಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದಕ್ಕೆ ಮತ್ತೊಂದು ಮೌಢ್ಯ ಸಹ ಎದುರಾಗಿದೆ.
ತಮಗೆ ಮನಬಂದಂತೆ ಆಚರಣೆ ಮಾಡುವ ಮೂಲಕ ಕೊರೊನಾ ವೈರಸ್ ಅನ್ನು ದೂರ ಇಡಬಹುದು ಎಂದು ಭಾವಿಸಿ ಕಾಯಿಯೊಂದನ್ನು ಕಟ್ಟುತ್ತಿದ್ದಾರೆ. ನಗರದ ರಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಬೇಲಿ ಮುಳ್ಳು ಕಾಯಿ ಅಥವಾ ಮುಳ್ಳು ಮುತ್ತುಗ ಕಾಯಿಯನ್ನು ಬೇವಿನ ಸೊಪ್ಪಿನೊಂದಿಗೆ ತಮ್ಮ - ತಮ್ಮ ಮನೆ ಬಾಗಿಲಿಗೆ ಕಟ್ಟಲಾಗಿದೆ.
ಈ ಆಚರಣೆ ಮಾಡುವುದರಿಂದ ಕೊರೊನಾ ವೈರಸ್ ಬರುವುದಿಲ್ಲ ಎಂದು ಅನುಕರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ರೀತಿಯ ಕಾಯಿಗಳಿಗೆ ಹೆಚ್ಚುಬೇಡಿಕೆ ಬಂದಿದೆ. ಬೇಲಿ ಮುಳ್ಳಿನ ಕಾಯಿ ಎಂದು ಕರೆಸಿಕೊಳ್ಳುವ ಈ ಕಾಯಿಯ ತುಂಬಾ ಮುಳ್ಳುಗಳಿದ್ದು, ದುಂಡಾಗಿದೆ. ಇದು ಕೊರೊನಾ ವೈರಸ್ ರೀತಿ ಕಾಣುತ್ತಿದೆ. ಹಾಗಾಗಿ, ಜನರು ಇದರ ಮೊರೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಇದಕ್ಕೆ ಕೊರೊನಾ ಕಾಯಿ ಎಂದು ಹೊಸದಾಗಿ ಕರೆಯಲಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ತಮಗೆ ಮನಬಂದಂತೆ ಆಚರಣೆ ಮಾಡುವ ಮೂಲಕ ಕೊರೊನಾ ವೈರಸ್ ಅನ್ನು ದೂರ ಇಡಬಹುದು ಎಂದು ಭಾವಿಸಿ ಕಾಯಿಯೊಂದನ್ನು ಕಟ್ಟುತ್ತಿದ್ದಾರೆ. ನಗರದ ರಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಬೇಲಿ ಮುಳ್ಳು ಕಾಯಿ ಅಥವಾ ಮುಳ್ಳು ಮುತ್ತುಗ ಕಾಯಿಯನ್ನು ಬೇವಿನ ಸೊಪ್ಪಿನೊಂದಿಗೆ ತಮ್ಮ - ತಮ್ಮ ಮನೆ ಬಾಗಿಲಿಗೆ ಕಟ್ಟಲಾಗಿದೆ.
ಈ ಆಚರಣೆ ಮಾಡುವುದರಿಂದ ಕೊರೊನಾ ವೈರಸ್ ಬರುವುದಿಲ್ಲ ಎಂದು ಅನುಕರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ರೀತಿಯ ಕಾಯಿಗಳಿಗೆ ಹೆಚ್ಚುಬೇಡಿಕೆ ಬಂದಿದೆ. ಬೇಲಿ ಮುಳ್ಳಿನ ಕಾಯಿ ಎಂದು ಕರೆಸಿಕೊಳ್ಳುವ ಈ ಕಾಯಿಯ ತುಂಬಾ ಮುಳ್ಳುಗಳಿದ್ದು, ದುಂಡಾಗಿದೆ. ಇದು ಕೊರೊನಾ ವೈರಸ್ ರೀತಿ ಕಾಣುತ್ತಿದೆ. ಹಾಗಾಗಿ, ಜನರು ಇದರ ಮೊರೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಇದಕ್ಕೆ ಕೊರೊನಾ ಕಾಯಿ ಎಂದು ಹೊಸದಾಗಿ ಕರೆಯಲಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.