ಆ್ಯಪ್ನಗರ

ಮೈಸೂರು: ಕೊರೊನಾ ಭೀತಿ ನಡುವೆ ಚಾಮುಂಡಿ ಬೆಟ್ಟದಲ್ಲಿ ಜನವೋ ಜನ! ವಿಐಪಿಗಳ ಎಂಟ್ರಿಗೆ ಸಾರ್ವಜನಿಕರ ಆಕ್ರೋಶ

ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಕೊರೊನಾ ವೈರಸ್‌ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆಯೇ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ವರ್ಧಂತ್ಯೋತ್ಸವ ಜರುಗುತ್ತಿದೆ. ಭಕ್ತಾಧಿಗಳಿಗೆ ನಿರ್ಬಂಧ ಹೇರಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದು ಕೊರೊನಾ ಭೀತಿಗೆ ಕಾರಣವಾಗಿದೆ.

Vijaya Karnataka Web 13 Jul 2020, 9:12 pm
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರವೂ ಕೂಡ ದಾಖಲೆಯ ಪ್ರಮಾಣದಲ್ಲಿ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಈ ನಡುವೆ ಚಾಮುಂಡಿ ಬೆಟ್ಟದಲ್ಲಿ ತಾಯಿಯ ವರ್ಧಂತ್ಯೋತ್ಸವ ಸಹ ಜರುಗುತ್ತಿದೆ. ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರೂ, ವಿಐಪಿಗಳಿಗೆ ಎಂಟ್ರಿ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Vijaya Karnataka Web coronavirus outbreak lot of people gathered in chamundi hills mysuru
ಮೈಸೂರು: ಕೊರೊನಾ ಭೀತಿ ನಡುವೆ ಚಾಮುಂಡಿ ಬೆಟ್ಟದಲ್ಲಿ ಜನವೋ ಜನ! ವಿಐಪಿಗಳ ಎಂಟ್ರಿಗೆ ಸಾರ್ವಜನಿಕರ ಆಕ್ರೋಶ


ಹೌದು, ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಗುಲಕ್ಕೆ ನಿರ್ಬಂಧ ಹೇರಿದ್ದರೂ ವಿಐಪಿಗಳಿಗೆ ತಾಯಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂದರೆ, ವಿಐಪಿಗಳೆಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯವೆಂದು ಭೇದ-ಭಾವ ಮಾಡುತ್ತಿದ್ದಾರೇನೋ ಎಂಬ ಅನುಮಾನ ಮೂಡುತ್ತಿದೆ. ಉಳ್ಳವರಿಗೆ ಮಾತ್ರ ದೇವರ ದರ್ಶನಕ್ಕೆ ಮುಂದಾಗಿದ್ದು, ಐಷಾರಾಮಿ ಕಾರುಗಳಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶ ನೀಡಲಾಗಿದೆ.

ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥರ ಉಪಸ್ಥಿತಿಯಲ್ಲಿ ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ

ಚಾಮುಂಡೇಶ್ವರಿ ವರ್ಧಂತಿಯ ಕಾರಣದಿಂದ ಮೈಸೂರು, ಬೆಂಗಳೂರು, ಹಾಸನ ಸೇರಿ ವಿವಿಧ ಭಾಗಗಳಿಂದ ಬಂದ ನೂರಕ್ಕು ಹೆಚ್ಚು ಕಾರುಗಳು ಬೆಟ್ಟಕ್ಕೆ ಆಗಮಿಸಿದ್ದವು. ಸೋಮವಾರ ಬೆಳಗ್ಗೆಯಿಂದ ಸಾರ್ವಜನಿಕರಿಗೆ ನಿಷೇಧ ಹೇರಿದ್ದರೂ ಪೊಲೀಸರ ಸಹಾಯ ಪಡೆದು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿರುವುದು ಸದ್ಯ ಎಲ್ಲರಲ್ಲೂ ಬೇಸರ ತರಿಸಿದೆ.

ಕೊರೊನಾ ಭೀತಿಯಿಂದ ಮೈಸೂರಿನಲ್ಲಿ ಮತ್ತೆ ಲಾಕ್‌ಡೌನ್‌ ಹೇರಿಕೆ ಆಗುತ್ತಾ? ಡಿಸಿ ಹೇಳಿದ್ದೇನು..?

ರಾತ್ರಿ ಉತ್ಸವ, ಫಲಪೂಜೆ, ಮಂಟಪೋತ್ಸವ, ದರ್ಬಾರ್‌ ಉತ್ಸವ, ರಾಷ್ಟ್ರಾಶೀರ್ವಾದ ಕಾರ್ಯಕ್ರಮಗಳೊಂದಿಗೆ ವರ್ಧಂತಿಗೆ ತೆರೆ ಬಿದ್ದಿದ್ದು, ರಾತ್ರಿ ಉಳ್ಳವರ ಅನುಕೂಲಕ್ಕೆ ಆದೇಶವೇ ಮಾಯವಾದಂತಹ ಅನುಭವವಾಗಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.

ಮೈಸೂರಿನಲ್ಲಿ ಸೋಮವಾರ 100ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣ ದೃಢ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ