ಬೀರೇಶ್ ಕಬಿನಿ
ಮೈಸೂರು: ಕೊರೊನಾ ನಿಯಂತ್ರಣ ಕ್ರಮವಾಗಿ ನಗರದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲು ಮುಂದಾಗಿರುವ ಜಿಲ್ಲಾಡಳಿತ, ಅದಕ್ಕಾಗಿ ಹೆಚ್ಚುವರಿಯಾಗಿ 14 ತಂಡಗಳನ್ನು ರಚಿಸಿಕೊಂಡು ಅಕ್ಟೋಬರ್ 3ರಿಂದಲೇ ವಿಶೇಷ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ. ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣವೂ ಕಡಿಮೆಯಾಗುತ್ತದೆ ಎಂಬ ಕಾರಣಕ್ಕಾಗಿ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅವರು ಸೆಪ್ಟೆಂಬರ್ 25ರಂದು ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್19 ಪ್ರಗತಿ ಪರಿಶೀಲನೆ ಸಭೆ ನಡೆಸಿ ಸೂಚನೆ ನೀಡಿದ್ದರು.
ಈ ಜವಾಬ್ದಾರಿಯನ್ನು ನಿರ್ವಹಣೆ ಮಾಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಜವಾಬ್ದಾರಿ ವಹಿಸಲಾಗಿತ್ತು. ಅಂತೆಯೇ ಕೊರೊನಾ ಪರೀಕ್ಷೆ ಹೆಚ್ಚಳಕ್ಕೆ ಯೋಜನೆಯೊಂದನ್ನು ಸಿದ್ಧಪಡಿಸಿರುವ ಪಾಲಿಕೆ, ನಗರದಲ್ಲಿ ಹಾಲಿ 14 ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂಡಗಳಲ್ಲದೆ ಹೆಚ್ಚುವರಿಯಾಗಿ 14 ತಂಡಗಳನ್ನು ರಚಿಸಿದೆ. ಅದಕ್ಕಾಗಿ 14 ಸ್ಥಳಗಳನ್ನು ಗುರುತಿಸಲಾಗಿದೆ. ಮಾತ್ರವಲ್ಲದೆ ಈ ವಿಶೇಷ ತಂಡಗಳಿಗೆ ತರಬೇತಿ ನೀಡಲಾಗಿದೆ. ಅಕ್ಟೋಬರ್ 3 ರಿಂದ ದೊಡ್ಡ ಮಟ್ಟದಲ್ಲಿ ಕೊರೊನಾ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಕೊರೊನಾತಂಕದ ನಡುವೆ ದಸರಾ ನಿಭಾಯಿಸೋದು ಸವಾಲಿನ ಕೆಲಸ: ರೋಹಿಣಿ ಸಿಂಧೂರಿ
ಕಾರ್ಯಾಚರಣೆ ಹೇಗೆ?: ಈ ವಿಶೇಷ ತಂಡಗಳು 9 ದಿನ ಒಂಬತ್ತು ವಲಯಗಳಲ್ಲಿ ಪರೀಕ್ಷೆ ನಡೆಸಲಿವೆ. ಈ 9 ದಿನಗಳಲ್ಲಿ ಆಯಾ ವಲಯಗಳಲ್ಲಿ ಆಟೋ ಪ್ರಚಾರ ನಡೆಸುವ ಮುಖಾಂತರ ಜನರಿಗೆ ಕೊರೊನಾ ಲಕ್ಷಣಗಳ ಬಗ್ಗೆ ವಿವರಣೆ ನೀಡಿ ಪರೀಕ್ಷೆ ನಡೆಯುತ್ತಿರುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ನಂತರ ಈ ಮಾಹಿತಿಯನ್ನು ಆಧರಿಸಿ ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.
ಆಂಧ್ರದ ಹೆಣ್ಣು ಮಗಳಿಗೋಸ್ಕರ, ಕನ್ನಡಿಗ ದಲಿತ ಜಿಲ್ಲಾಧಿಕಾರಿಗೆ ಅನ್ಯಾಯ: ಸಾರಾ ಮಹೇಶ್
ಒಂದು ತಂಡದಲ್ಲಿ ಒಬ್ಬರು ಡಾಟಾ ಎಂಟ್ರಿ ಆಪರೇಟರ್ ಹಾಗೂ ಪ್ರಯೋಗ ತಜ್ಞರು ಕೆಲಸ ಮಾಡುತ್ತಾರೆ. ಪ್ರಯೋಗ ತಜ್ಞರು ಗಂಟಲು ಹಾಗೂ ಮೂಗಿನ ದ್ರವವನ್ನು ಪಡೆದುಕೊಂಡು ಪರೀಕ್ಷೆ ಮಾಡುತ್ತಾರೆ. ಡಾಟಾ ಎಂಟ್ರಿ ಆಪರೇಟರ್ ಮಾಹಿತಿಯನ್ನು ದಾಖಲಿಸಿಕೊಂಡು ಪಾಲಿಕೆಗೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡವರಿಗೆ ರೋಗದ ಪ್ರಮಾಣದ ಆಧಾರದ ಮೇಲೆ ಚಿಕಿತ್ಸೆಗೆ ಕೋವಿಡ್ಕೇರ್ ಸೆಂಟರ್ಗಳಿಗೆ ರವಾನಿಸಲಾಗುತ್ತದೆ.
ಮೊಬೈಲ್ ತಂಡಗಳ ರಚನೆ: ಎ ಸಿಮ್ಟಮ್ಯಾಟಿಕ್ ವರ್ಗಕ್ಕೆ ಸೇರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಹೀಗಾಗಿ ಇವರಿಂದ ಮತ್ತಷ್ಟು ಜನರಿಗೆ ಕೊರೊನಾ ಸೋಂಕು ಹರಡುತ್ತದೆ. ಹೀಗಾಗಿ ಸಾರ್ವಜನಿಕರ ಸಂಚಾರ ಹೆಚ್ಚಾಗಿರುವ ಮಾರುಕಟ್ಟೆ, ವ್ಯಾಪಾರ ಸ್ಥಳಗಳು, ಕೈಗಾರಿಕೆ ಪ್ರದೇಶಗಳಿಗೆ ನೇರವಾಗಿ ಆರೋಗ್ಯ ಇಲಾಖೆಯ ಮೊಬೈಲ್ ತಂಡಗಳು ತೆರಳಿ ಪರೀಕ್ಷೆ ನಡೆಸಬೇಕಿದೆ. ಅದಕ್ಕಾಗಿ ಎರಡು ಮೊಬೈಲ್ ತಂಡಗಳನ್ನು ರಚಿಸಲಾಗಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ
ಮೈಸೂರು: ಕೊರೊನಾ ನಿಯಂತ್ರಣ ಕ್ರಮವಾಗಿ ನಗರದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲು ಮುಂದಾಗಿರುವ ಜಿಲ್ಲಾಡಳಿತ, ಅದಕ್ಕಾಗಿ ಹೆಚ್ಚುವರಿಯಾಗಿ 14 ತಂಡಗಳನ್ನು ರಚಿಸಿಕೊಂಡು ಅಕ್ಟೋಬರ್ 3ರಿಂದಲೇ ವಿಶೇಷ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ.
ಈ ಜವಾಬ್ದಾರಿಯನ್ನು ನಿರ್ವಹಣೆ ಮಾಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಜವಾಬ್ದಾರಿ ವಹಿಸಲಾಗಿತ್ತು. ಅಂತೆಯೇ ಕೊರೊನಾ ಪರೀಕ್ಷೆ ಹೆಚ್ಚಳಕ್ಕೆ ಯೋಜನೆಯೊಂದನ್ನು ಸಿದ್ಧಪಡಿಸಿರುವ ಪಾಲಿಕೆ, ನಗರದಲ್ಲಿ ಹಾಲಿ 14 ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂಡಗಳಲ್ಲದೆ ಹೆಚ್ಚುವರಿಯಾಗಿ 14 ತಂಡಗಳನ್ನು ರಚಿಸಿದೆ. ಅದಕ್ಕಾಗಿ 14 ಸ್ಥಳಗಳನ್ನು ಗುರುತಿಸಲಾಗಿದೆ. ಮಾತ್ರವಲ್ಲದೆ ಈ ವಿಶೇಷ ತಂಡಗಳಿಗೆ ತರಬೇತಿ ನೀಡಲಾಗಿದೆ. ಅಕ್ಟೋಬರ್ 3 ರಿಂದ ದೊಡ್ಡ ಮಟ್ಟದಲ್ಲಿ ಕೊರೊನಾ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಕೊರೊನಾತಂಕದ ನಡುವೆ ದಸರಾ ನಿಭಾಯಿಸೋದು ಸವಾಲಿನ ಕೆಲಸ: ರೋಹಿಣಿ ಸಿಂಧೂರಿ
ಕಾರ್ಯಾಚರಣೆ ಹೇಗೆ?: ಈ ವಿಶೇಷ ತಂಡಗಳು 9 ದಿನ ಒಂಬತ್ತು ವಲಯಗಳಲ್ಲಿ ಪರೀಕ್ಷೆ ನಡೆಸಲಿವೆ. ಈ 9 ದಿನಗಳಲ್ಲಿ ಆಯಾ ವಲಯಗಳಲ್ಲಿ ಆಟೋ ಪ್ರಚಾರ ನಡೆಸುವ ಮುಖಾಂತರ ಜನರಿಗೆ ಕೊರೊನಾ ಲಕ್ಷಣಗಳ ಬಗ್ಗೆ ವಿವರಣೆ ನೀಡಿ ಪರೀಕ್ಷೆ ನಡೆಯುತ್ತಿರುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ನಂತರ ಈ ಮಾಹಿತಿಯನ್ನು ಆಧರಿಸಿ ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.
ಆಂಧ್ರದ ಹೆಣ್ಣು ಮಗಳಿಗೋಸ್ಕರ, ಕನ್ನಡಿಗ ದಲಿತ ಜಿಲ್ಲಾಧಿಕಾರಿಗೆ ಅನ್ಯಾಯ: ಸಾರಾ ಮಹೇಶ್
ಒಂದು ತಂಡದಲ್ಲಿ ಒಬ್ಬರು ಡಾಟಾ ಎಂಟ್ರಿ ಆಪರೇಟರ್ ಹಾಗೂ ಪ್ರಯೋಗ ತಜ್ಞರು ಕೆಲಸ ಮಾಡುತ್ತಾರೆ. ಪ್ರಯೋಗ ತಜ್ಞರು ಗಂಟಲು ಹಾಗೂ ಮೂಗಿನ ದ್ರವವನ್ನು ಪಡೆದುಕೊಂಡು ಪರೀಕ್ಷೆ ಮಾಡುತ್ತಾರೆ. ಡಾಟಾ ಎಂಟ್ರಿ ಆಪರೇಟರ್ ಮಾಹಿತಿಯನ್ನು ದಾಖಲಿಸಿಕೊಂಡು ಪಾಲಿಕೆಗೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡವರಿಗೆ ರೋಗದ ಪ್ರಮಾಣದ ಆಧಾರದ ಮೇಲೆ ಚಿಕಿತ್ಸೆಗೆ ಕೋವಿಡ್ಕೇರ್ ಸೆಂಟರ್ಗಳಿಗೆ ರವಾನಿಸಲಾಗುತ್ತದೆ.
ಮೊಬೈಲ್ ತಂಡಗಳ ರಚನೆ: ಎ ಸಿಮ್ಟಮ್ಯಾಟಿಕ್ ವರ್ಗಕ್ಕೆ ಸೇರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಹೀಗಾಗಿ ಇವರಿಂದ ಮತ್ತಷ್ಟು ಜನರಿಗೆ ಕೊರೊನಾ ಸೋಂಕು ಹರಡುತ್ತದೆ. ಹೀಗಾಗಿ ಸಾರ್ವಜನಿಕರ ಸಂಚಾರ ಹೆಚ್ಚಾಗಿರುವ ಮಾರುಕಟ್ಟೆ, ವ್ಯಾಪಾರ ಸ್ಥಳಗಳು, ಕೈಗಾರಿಕೆ ಪ್ರದೇಶಗಳಿಗೆ ನೇರವಾಗಿ ಆರೋಗ್ಯ ಇಲಾಖೆಯ ಮೊಬೈಲ್ ತಂಡಗಳು ತೆರಳಿ ಪರೀಕ್ಷೆ ನಡೆಸಬೇಕಿದೆ. ಅದಕ್ಕಾಗಿ ಎರಡು ಮೊಬೈಲ್ ತಂಡಗಳನ್ನು ರಚಿಸಲಾಗಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ