ಆ್ಯಪ್ನಗರ

ನಾಡಹಬ್ಬ ದಸರೆಗೆ ದಿನಗಣನೆ: ಭರದಿಂದ ಸಾಗಿದೆ ಗಜಪಡೆಯ ತಯಾರಿ

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಣ ನಿಟ್ಟಿನಲ್ಲಿ ಗಜಪಡೆಯ ಮಾವುತರು ಹಾಗೂ ಕಾವಾಡಿಗಳು ಅರಮನೆ ಆವರಣದಾಚೆಗೆ ಕಾಲಿಡುವಂತಿಲ್ಲ. ಹೊರಗಿನ ಜನರ ಸಂಪರ್ಕ ಮಾಡುವಂತಿಲ್ಲ. ಇವರೆಲ್ಲರಿಗೂ ಇತ್ತೀಚೆಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್‌ ಬಂದಿತ್ತು.

Vijaya Karnataka Web 10 Oct 2020, 5:31 pm
ಮೈಸೂರು: ನಾಡಹಬ್ಬ ದಸರೆಗೆ ಬಾಕಿ ಉಳಿದಿರುವುದು ಕೇವಲ 7 ದಿನಗಳಷ್ಟೇ. ಈ ಬಾರಿ ಸರಳವಾಗಿ ಹಾಗೂ ಸಾಂಪ್ರದಾಯಕವಾಗಿ ದಸರಾ ಆಚರಣೆ ಮಾಡಲು ಸರಕಾರ ತೀರ್ಮಾನ ಮಾಡಿದೆ.
Vijaya Karnataka Web ದಸರಾ ಆನೆ
ದಸರಾ ಆನೆ


ಅಲ್ಲದೇ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗಿಯಾಗಲೂ ಕೇಬಲ 300 ಜನರಿಗಷ್ಟೇ ಅವಕಾಶವನ್ನು ನೀಡಿದೆ. ಈ ಹಿನ್ನೆಲೆ ಅಂಬಾವಿಲಾಸ ಅರಮನೆಯಲ್ಲಿ ನಡೆಯಲಿರುವ ಜಂಬೂಸವಾರಿಗೆ ಪೂರ್ವಭಾವಿಯಾಗಿ ಅಭಿಮನ್ಯು ನೇತೃತ್ವದ 5 ಆನೆಗಳಿಗೆ ತಾಲೀಮು ಆರಂಭಿಸಿದ್ದು ಮರಳು ಮೂಟೆಗಳನ್ನು ಹೊರಿಸಲಾಗುತ್ತಿದೆ. ಇದರಲ್ಲಿ ಮೊದಲ ದಿನ ಅಭಿಮನ್ಯು, ಎರಡನೇ ದಿನ ವಿಕ್ರಮ, ಇಂದು ಗೋಪಿ ಎಲ್ಲಾ ಆನೆಗಳಿಗೂ 350 ಕೆ.ಜಿ ತೂಕವನ್ನು ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ.

ಗೋಪಿ ಆನೆಯು ಆನೆಯು ಮರಳಿನ ಮೂಟೆ, ಕಬ್ಬಿಣದ ತೊಟ್ಟಿಲು ಹೊತ್ತು ಸಾಗಿತ್ತಿದ್ದರೆ. ಅದರ ಜೊತೆಗೆ ಕ್ಯಾಪ್ಟನ್‌ ಅಭಿಮನ್ಯು, ವಿಕ್ರಂ, ವಿಜಯಾ, ಕಾವೇರಿ ಸುಮಾರು 3 ಕಿ.ಮೀ ಹೆಜ್ಜೆ ಹಾಕಿದವು.

ಈ ಬಗ್ಗೆ ಮಾಹಿತಿ ನೀಡಿದ ಪಶುವೈದ್ಯ ಡಾ.ನಾಗರಾಜು,ಸದ್ಯ ಐದೂ ಆನೆಗಳು ಆರೋಗ್ಯವಾಗಿವೆ. ಪೂರಕವಾದ ಆಹಾರ ನೀಡುತ್ತಿದ್ದು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ಮುಂದುವರಿಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಣ ನಿಟ್ಟಿನಲ್ಲಿ ಗಜಪಡೆಯ ಮಾವುತರು ಹಾಗೂ ಕಾವಾಡಿಗಳು ಅರಮನೆ ಆವರಣದಾಚೆಗೆ ಕಾಲಿಡುವಂತಿಲ್ಲ. ಹೊರಗಿನ ಜನರ ಸಂಪರ್ಕ ಮಾಡುವಂತಿಲ್ಲ. ಇವರೆಲ್ಲರಿಗೂ ಇತ್ತೀಚೆಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್‌ ಬಂದಿತ್ತು. ಕೋವಿಡ್‌ ಆತಂಕ ಕಾರಣ ಈ ಬಾರಿ ಅರಮನೆಗೆ ಸೀಮಿತಗೊಳಿಸಲಾಗಿದೆ. ಅಲ್ಲದೇ ಕೋವಿಡ್‌ ಆತಂಕ ಇರುವ ಕಾರಣ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು ಬೇಸರ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ