ಆ್ಯಪ್ನಗರ

ಕ್ರೇನ್‌ ಡಿಕ್ಕಿ: ಬೈಕ್‌ ಸವಾರ ಸಾವು

ಬೈಕ್‌ಗೆ ಹಿಂದಿನಿಂದ ಬಂದ ಕ್ರೇನ್‌ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾರೆ. ಮೈಸೂರಿನ ರಿಂಗ್‌ ರಸ್ತೆ ಪೊಲೀಸ್‌ ಲೇಔಟ್‌ ಬಳಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ.

Vijaya Karnataka 8 Apr 2019, 5:00 am
ಮೈಸೂರು: ಬೈಕ್‌ಗೆ ಹಿಂದಿನಿಂದ ಬಂದ ಕ್ರೇನ್‌ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾರೆ. ಮೈಸೂರಿನ ರಿಂಗ್‌ ರಸ್ತೆ ಪೊಲೀಸ್‌ ಲೇಔಟ್‌ ಬಳಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ.
Vijaya Karnataka Web crane collision bike riders death
ಕ್ರೇನ್‌ ಡಿಕ್ಕಿ: ಬೈಕ್‌ ಸವಾರ ಸಾವು


ನಂಜನಗೂಡು ತಾಲೂಕಿನ ತಗಡೂರಿನ ನಿವಾಸಿ ರಂಗಸ್ವಾಮಿ(21)ಮೃತರು.

ಇವರು ಬೈಕ್‌ನಲ್ಲಿ ತಿ.ನರಸೀಪುರ ರಿಂಗ್‌ ರಸ್ತೆಯ ಜಂಕ್ಷ ನ್‌ ಕಡೆಯಿಂದ ಉತ್ತನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಪೊಲೀಸ್‌ ಲೇ ಔಟ್‌ನ ಸುಣ್ಣದಗೂಡು ಹತ್ತಿರ ಹಿಂದಿನಿಂದ ಬಂದ ಕ್ರೇನ್‌ ಡಿಕ್ಕಿಯಾಗಿದೆ. ಕ್ರೇನ್‌ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಂಗಸ್ವಾಮಿ ಅವರನ್ನು ಕೆ.ಆರ್‌.ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ