ಬೈಲಕುಪ್ಪೆ : ರೈತರಿಗೆ ಬೆಳೆಸಾಲ ಹಾಗೂ ಉದ್ಯಮಿಗಳಿಗೆ ಪ್ರತಿವರ್ಷ ನೋಂದಣಿ ಮಾಡಿಕೊಳ್ಳಲು ಸಿಂಡಿಕೇಟ್ ಬ್ಯಾಂಕ್ನ ವ್ಯವಸ್ಥಾಪಕರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬೈಲಕುಪ್ಪೆ ಸಿಂಡಿಕೇಟ್ ಬ್ಯಾಂಕ್ ಎದುರು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಬ್ಯಾಂಕ್ನ ವ್ಯವಸ್ಥಾಪಕ ಆಸಿಫ್ ಅವರೊಂದಿಗೆ ರೈತರು ಹಾಗೂ ಉದ್ಯಮಿಗಳು ಕೆಲಕಾಲ ಮಾತಿನ ಚಕಮಕಿ ನಡೆಸಿದರು.
ಜಿ.ಪಂ. ಸದಸ್ಯ ವಿ.ರಾಜೇಂದ್ರ ಮಾತನಾಡಿ, ''ಸುಮಾರು 5 ತಿಂಗಳು ಕಳೆದರು ನಮ್ಮ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಇಂದು, ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಸಕಾಲಕ್ಕೆ ನೋಂದಣಿ ಮಾಡಿಕೊಳ್ಳಲು ವಿಳಂಬವಾದರೆ ಹೆಚ್ಚುವರಿಯಾಗಿ ಲಕ್ಷಾಂತರ ರೂ. ಬಡ್ಡಿ ನಮ್ಮ ಮೇಲೆ ಬರುತ್ತದೆ,'' ಎಂದು ದೂರಿದರು.
''ಬ್ಯಾಂಕ್ನ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಮಹಿಳೆಯರು ಬ್ಯಾಂಕ್ಗೆ ಬಂದು ಕೇಳಿದರೆ ಇಲ್ಲಿಯ ಕೆಲವು ನೌಕರರಿಗೆ ಕನ್ನಡ ಭಾಷೆ ಬಾರದೆ ನನಗೆ ಏನೂ ಗೊತ್ತಿಲ್ಲ ಹೋಗು ಎಂದು ಗದರುತ್ತಾರೆ. ಆದುದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕನ್ನಡ ಭಾಷೆ ಮಾತನಾಡುವ ಕೆಲವು ಸಿಬ್ಬಂದಿ ನಿಯೋಜಿಸಿದರೆ ಉತ್ತಮ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಬ್ಯಾಂಕ್ಗೆ ಭೇಟಿ ನೀಡಿ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತ್ತಿರುವುದನ್ನು ಸರಿಪಡಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ,'' ಎಂದು ಎಚ್ಚರಿಸಿದರು.
ಬಿಳಗುಂದ ಗ್ರಾಮದ ರೈತ ಬಿ.ಜೆ.ವೆಂಕಟೇಶ್ ಮಾತನಾಡಿ, ''ನಾನು ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿಕೊಟ್ಟು 4 ತಿಂಗಳುಗಳಿಂದ ಬ್ಯಾಂಕ್ಗೆ ಅಲೆದಾಡುತ್ತಿದ್ದೇನೆ. ತಂಬಾಕು ಕಟಾವಿಗೆ ಬಂದಿದೆ. ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಇತ್ತೀಚೆಗೆ ಬಂದ ಬ್ಯಾಂಕ್ನ ವ್ಯವಸ್ಥಾಪಕರು ಸಿಬ್ಬಂದಿ ಕೊರತೆಯಿಂದ ತೊಂದರೆಯಾಗಿದೆ. ಸದ್ಯಕ್ಕೆ ಆಗುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ,'' ಎಂದರು.
ಬ್ಯಾಂಕ್ ವ್ಯವಸ್ಥಾಪಕ ಆಸಿಫ್ ಮಾತನಾಡಿ, ''ಬ್ಯಾಂಕ್ನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಕಾರ್ಯಗಳಲ್ಲಿ ವಿಳಂಬವಾಗದಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತೇನೆ,'' ಎಂದು ತಿಳಿಸಿದರು.
ಮೈಸೂರಿನ ರೀಜಿನಲ್ ಆಫೀಸ್ನ ವ್ಯವಸ್ಥಾಪಕ ಕಲ್ಕೋರೆ ಮಾತನಾಡಿ, ''ಸಿಂಡಿಕೇಟ್ ಬ್ಯಾಂಕ್ಗೆ ಕನ್ನಡ ಭಾಷೆ ತಿಳಿದಿರುವ ವ್ಯವಸ್ಥಾಪಕರನ್ನು ಈಗಾಗಲೆ ನಿಯೋಜಿಸಲಾಗಿದೆ. ಆತ ಒಂದೆರಡು ದಿನ ರಜೆಯಲ್ಲಿದ್ದಾರೆ, ಬ್ಯಾಂಕ್ಗೆ ಕೂಡಲೇ ಭೇಟಿ ನೀಡಿ ಕ್ರಮ ತೆಗೆದುಕೊಳ್ಳುತ್ತೇನೆ,'' ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಮಿ ಉಲ್ಲಾಖಾನ್, ರೈತ ಮಹಿಳೆಯಾದ ತಾಯಮ್ಮ, ಲಕ್ಷ್ಮಮ್ಮ, ಗಂಗನಕುಪ್ಪೆ ಕೃಷ್ಣೆಗೌಡ, ಆಲನಹಳ್ಳಿ ನಂಜಪ್ಪ, ರಘು, ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಪ್ರತಿಭಟನೆ ವೇಳೆ ಬ್ಯಾಂಕ್ನ ವ್ಯವಸ್ಥಾಪಕ ಆಸಿಫ್ ಅವರೊಂದಿಗೆ ರೈತರು ಹಾಗೂ ಉದ್ಯಮಿಗಳು ಕೆಲಕಾಲ ಮಾತಿನ ಚಕಮಕಿ ನಡೆಸಿದರು.
ಜಿ.ಪಂ. ಸದಸ್ಯ ವಿ.ರಾಜೇಂದ್ರ ಮಾತನಾಡಿ, ''ಸುಮಾರು 5 ತಿಂಗಳು ಕಳೆದರು ನಮ್ಮ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಇಂದು, ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಸಕಾಲಕ್ಕೆ ನೋಂದಣಿ ಮಾಡಿಕೊಳ್ಳಲು ವಿಳಂಬವಾದರೆ ಹೆಚ್ಚುವರಿಯಾಗಿ ಲಕ್ಷಾಂತರ ರೂ. ಬಡ್ಡಿ ನಮ್ಮ ಮೇಲೆ ಬರುತ್ತದೆ,'' ಎಂದು ದೂರಿದರು.
''ಬ್ಯಾಂಕ್ನ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಮಹಿಳೆಯರು ಬ್ಯಾಂಕ್ಗೆ ಬಂದು ಕೇಳಿದರೆ ಇಲ್ಲಿಯ ಕೆಲವು ನೌಕರರಿಗೆ ಕನ್ನಡ ಭಾಷೆ ಬಾರದೆ ನನಗೆ ಏನೂ ಗೊತ್ತಿಲ್ಲ ಹೋಗು ಎಂದು ಗದರುತ್ತಾರೆ. ಆದುದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕನ್ನಡ ಭಾಷೆ ಮಾತನಾಡುವ ಕೆಲವು ಸಿಬ್ಬಂದಿ ನಿಯೋಜಿಸಿದರೆ ಉತ್ತಮ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಬ್ಯಾಂಕ್ಗೆ ಭೇಟಿ ನೀಡಿ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತ್ತಿರುವುದನ್ನು ಸರಿಪಡಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ,'' ಎಂದು ಎಚ್ಚರಿಸಿದರು.
ಬಿಳಗುಂದ ಗ್ರಾಮದ ರೈತ ಬಿ.ಜೆ.ವೆಂಕಟೇಶ್ ಮಾತನಾಡಿ, ''ನಾನು ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿಕೊಟ್ಟು 4 ತಿಂಗಳುಗಳಿಂದ ಬ್ಯಾಂಕ್ಗೆ ಅಲೆದಾಡುತ್ತಿದ್ದೇನೆ. ತಂಬಾಕು ಕಟಾವಿಗೆ ಬಂದಿದೆ. ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಇತ್ತೀಚೆಗೆ ಬಂದ ಬ್ಯಾಂಕ್ನ ವ್ಯವಸ್ಥಾಪಕರು ಸಿಬ್ಬಂದಿ ಕೊರತೆಯಿಂದ ತೊಂದರೆಯಾಗಿದೆ. ಸದ್ಯಕ್ಕೆ ಆಗುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ,'' ಎಂದರು.
ಬ್ಯಾಂಕ್ ವ್ಯವಸ್ಥಾಪಕ ಆಸಿಫ್ ಮಾತನಾಡಿ, ''ಬ್ಯಾಂಕ್ನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಕಾರ್ಯಗಳಲ್ಲಿ ವಿಳಂಬವಾಗದಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತೇನೆ,'' ಎಂದು ತಿಳಿಸಿದರು.
ಮೈಸೂರಿನ ರೀಜಿನಲ್ ಆಫೀಸ್ನ ವ್ಯವಸ್ಥಾಪಕ ಕಲ್ಕೋರೆ ಮಾತನಾಡಿ, ''ಸಿಂಡಿಕೇಟ್ ಬ್ಯಾಂಕ್ಗೆ ಕನ್ನಡ ಭಾಷೆ ತಿಳಿದಿರುವ ವ್ಯವಸ್ಥಾಪಕರನ್ನು ಈಗಾಗಲೆ ನಿಯೋಜಿಸಲಾಗಿದೆ. ಆತ ಒಂದೆರಡು ದಿನ ರಜೆಯಲ್ಲಿದ್ದಾರೆ, ಬ್ಯಾಂಕ್ಗೆ ಕೂಡಲೇ ಭೇಟಿ ನೀಡಿ ಕ್ರಮ ತೆಗೆದುಕೊಳ್ಳುತ್ತೇನೆ,'' ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಮಿ ಉಲ್ಲಾಖಾನ್, ರೈತ ಮಹಿಳೆಯಾದ ತಾಯಮ್ಮ, ಲಕ್ಷ್ಮಮ್ಮ, ಗಂಗನಕುಪ್ಪೆ ಕೃಷ್ಣೆಗೌಡ, ಆಲನಹಳ್ಳಿ ನಂಜಪ್ಪ, ರಘು, ವೆಂಕಟೇಶ್ ಮತ್ತಿತರರು ಹಾಜರಿದ್ದರು.