ಆ್ಯಪ್ನಗರ

ಸಾಂಸ್ಕೃತಿಕ ಸಂಭ್ರಮ: ನೃತ್ಯ, ಗಾಯನ ಮೋಡಿ

ಅರಮನೆ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಆಪ್ತ ರಕ್ಷಕ' ಸಿನಿಮಾ ಖ್ಯಾತಿಯ ನೃತ್ಯ ಕಲಾವಿದೆ ಲಕ್ಷ್ಮೇ ಗೋಪಾಲಸ್ವಾಮಿ ಅವರು ನಡೆಸಿಕೊಟ್ಟ ನೃತ್ಯ ವೈಭವ ಎಲ್ಲರ ಮೆಚ್ಚುಗೆ ಪಾತ್ರವಾಯಿತು.

Vijaya Karnataka 12 Oct 2018, 5:00 am
ಮೈಸೂರು: ಅರಮನೆ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಆಪ್ತ ರಕ್ಷಕ' ಸಿನಿಮಾ ಖ್ಯಾತಿಯ ನೃತ್ಯ ಕಲಾವಿದೆ ಲಕ್ಷ್ಮೇ ಗೋಪಾಲಸ್ವಾಮಿ ಅವರು ನಡೆಸಿಕೊಟ್ಟ ನೃತ್ಯ ವೈಭವ ಎಲ್ಲರ ಮೆಚ್ಚುಗೆ ಪಾತ್ರವಾಯಿತು.
Vijaya Karnataka Web cultural celebration dance singing charm
ಸಾಂಸ್ಕೃತಿಕ ಸಂಭ್ರಮ: ನೃತ್ಯ, ಗಾಯನ ಮೋಡಿ


ನಾಗಚಂದ್ರಿಕಾ ಭಟ್‌, ರವಿ ಮುರೂರು ತಂಡದ ಗೀತಗಾಯನ ಸಭಿಕರು ತಲೆ ತೂಗುವಂತೆ ಮಾಡಿತು.

ಗಾಯಕಿ ನಾಗಚಂದ್ರಿಕಾ ಭಟ್‌ ಅವರು ಹಾಡಿದ, ಎಂ.ಎನ್‌.ವ್ಯಾಸರಾಯ್‌ ಅವರ ರಚನೆಯ 'ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ, ನನ್ನೆದೆಯ ಕಡಲೇಕೆ ಬೀಗುತಿಹುದು?, ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ ಗರಿಗೆದರಿ ಕನಸುಗಳು ಕಾಡುತಿಹುದು' ಭಾವಗೀತೆ ಕೇಳುಗರಿಗೆ ಮುದನೀಡಿತು.

ಗಾಯಕ ರವಿ ಮುರೂರು ಕಂಠದಲ್ಲಿ ಮೂಡಿಬಂದ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಭಾವಗೀತೆಗೆ ಪ್ರೇಕ್ಷಕರೂ ದನಿಗೂಡಿಸಿದರು.

ಮೈಸೂರಿನ ಶೃತಿ ವಿದ್ಯಾಸಂಗೀತ ಪಾಠಶಾಲೆಯ ವಿದ್ವಾನ್‌ ಎ.ವಿ.ದತಾತ್ರೇಯ ಅವರು ಒಂದು ತಾಸು ನಡೆಸಿಕೊಟ್ಟ ಶಾಸ್ತ್ರೀಯ ಮ್ಯಾಂಡೋಲಿನ್‌ ವಾದನ ಮತ್ತು ನಗರದ ಸಮೀರ್‌ರಾವ್‌ ಮತ್ತು ವಂಶಿಧರ್‌ ಅವರ ಕೊಳಲು ವಾದನ ಜುಗಲ್‌ಬಂದಿಗೆ ಪ್ರೇಕ್ಷಕರು ತಲೆದೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ