ಆ್ಯಪ್ನಗರ

ದಸರೆಗೆ ತೆರೆ: ಸಹಜ ಸ್ಥೀತಿಯತ್ತ ಸಾಂಸ್ಕೃತಿಕ ನಗರಿ

ಸುಮಾರು 10 ದಿನಗಳಿಂದ ನಗರದ ವಿವಿಧೆಡೆ ಸಾಂಸ್ಕೃತಿಕ ಹಾಗೂ ಚಲನಚಿತ್ರೋತ್ಸವ, ರಂಗೋತ್ಸವ, ಕ್ರೀಡೆ ಹೀಗೆ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಆಗಮಿಸಿದ್ದ ಸಾವಿರಾರು ಮಂದಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಾಂಸ್ಕೃತಿಕ ನಗರಿ ಬುಧವಾರ ಸಹಜ ಸ್ಥಿತಿಯತ್ತ ಮುಖಮಾಡಿತು.

Vijaya Karnataka 10 Oct 2019, 5:00 am
ಮೈಸೂರು: ಸುಮಾರು 10 ದಿನಗಳಿಂದ ನಗರದ ವಿವಿಧೆಡೆ ಸಾಂಸ್ಕೃತಿಕ ಹಾಗೂ ಚಲನಚಿತ್ರೋತ್ಸವ, ರಂಗೋತ್ಸವ, ಕ್ರೀಡೆ ಹೀಗೆ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಆಗಮಿಸಿದ್ದ ಸಾವಿರಾರು ಮಂದಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಾಂಸ್ಕೃತಿಕ ನಗರಿ ಬುಧವಾರ ಸಹಜ ಸ್ಥಿತಿಯತ್ತ ಮುಖಮಾಡಿತು.
Vijaya Karnataka Web MYSPHOTOS-11044032


ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿ ವೀಕ್ಷಣೆಗೆ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿ ನಾಡದೇವತೆ ಚಾಮುಂಡಿಯ ಕಣ್ತುಂಬಿಕೊಂಡರು. ಬಳಿಕ ಬಹುತೇಕರು ತಮ್ಮ ಊರಿನತ್ತ ಮುಖ ಮಾಡಿದ ಕಾರಣ ಬುಧವಾರ ಸಾಂಸ್ಕೃತಿಕ ನಗರಿಯು ಜನಜಂಗುಳಿಯಿಲ್ಲದೆ ಎಂದಿನಂತೆ ಕಂಡು ಬಂತು.

ಒನ್‌ ವೇಗೆ ಗುಡ್‌ ಬಾಯ್‌: ದಸರೆ ಹಿನ್ನೆಲೆಯಲ್ಲಿಬೆಂಗಳೂರಿನಲ್ಲಿಸಿಗ್ನಲ್‌ಗಾಗಿ ಕಾದು ನಿಲ್ಲುವಂತೆ ಕಾರು, ಬೈಕ್‌ಗಳಿಂದ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿಕಾದು ನಿಲ್ಲುವಂತಾಗಿತ್ತು. ಅದಲ್ಲದೆ, ನಗರದ ವಿವಿಧೆಡೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದ ಕಾರಣದಿಂದಾಗಿ ಅರಮನೆ ಸುತ್ತ ಸೇರಿದಂತೆ ಅಗತ್ಯವಿರುವಲ್ಲಿಒನ್‌ ವೇಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಬಹುತೇಕ ವಾಹನ ಸವಾರರು ಬೆಂಗಳೂರಿನ ಸ್ಥಿತಿಯನ್ನು ನೆನಪಿಸಿಕೊಂಡರು. ಜಂಬೂಸವಾರಿ ಮೆರವಣಿಗೆಯು ಮುಕ್ತಾಯವಾದ ಮರುದಿನವೇ ಟು ವೇನಲ್ಲಿವಾಹನಗಳಿಗೆ ಅವಕಾಶ ಕಲ್ಪಿಸಿದ ಕಾರಣ ಆರಾಮಧಾಯಕವಾಗಿ ವಾಹನಗಳು ಸಂಚಾರ ನಡೆಸಿದವು.

ಬಟ್ಟೆ ಅಂಗಡಿ, ಹೋಟೆಲ್‌ಗಳಲ್ಲೂಜನರು ವಿರಳ: ದಸರಾ ಸೊಬಗು ಸವಿಯಲು ಆಗಮಿಸಿದ್ದ ಪ್ರವಾಸಿಗರಿಂದ ಬಟ್ಟೆ ಅಂಗಡಿಗಳು, ಬೇಕರಿ, ಹೋಟೆಲ್‌ಗಳು 10 ದಿನಗಳ ಕಾಲ ಭರ್ತಿಗೊಂಡಿದ್ದವು. ಯಾವುದೇ ಹೋಟೆಲ್‌ನಲ್ಲಿಯೂ ನಿರ್ಧಿಷ್ಟ ಸಮಯದೊಳಗೆ ತಿಂಡಿ, ಊಟ ಖಾಲಿ ಎನ್ನುವಂತೆ ಬೋರ್ಡ್‌ ತಗುಲಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಂಬೂಸವಾರಿ ಮುಗಿದ ಬಳಿಕ ಮಾಮೂಲಿ ಸ್ಥಿತಿಗೆ ತಲುಪಿವೆ.

ಫಾಸ್ಟ್‌ಫುಡ್‌ ಊಟಕ್ಕೆ ಅಪಾರ ಬೇಡಿಕೆ: ದಸರೆಗೆ ಗ್ರಾಮಾಂತರ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿಜನರು ಆಗಮಿಸಿದ ಕಾರಣ ಬಹುಪಾಲು ಮಂದಿ ಆರ್‌.ಟಿ.ಒ, ಸರಸ್ವತಿಪುರಂ, ಅಗ್ರಹಾರ, ಸೇರಿದಂತೆ ನಗರದ ವಿವಿಧೆಡೆಗಳಲ್ಲಿರುವ ಫಾಸ್ಟ್‌ಫುಡ್‌ಗಳ ಮೊರೆ ಹೋದರು. ಯುವಸಂಭ್ರಮ, ಯುವದಸರೆಯ ಸಂದರ್ಭ ಸುಮಾರು 11 ಗಂಟೆಯ ವರೆಗೂ ಜನರು ಆಹಾರಕ್ಕಾಗಿ ಬಂದರು. ವೆಜ್‌, ನಾನ್‌ವೆಜ್‌ ಆಹಾರ ಮಾರಾಟಗಾರರ ಮೊಗದಲ್ಲಿನಗು ಮೂಡುವಂತಾಯಿತು ಎಂದು ಫಾಸ್ಟ್‌ಪುಡ್‌ ಪ್ರವೀಣ್‌ ಸಂತೋಷ ವ್ಯಕ್ತಪಡಿಸಿದರು.

ಸುಮಾರು 1,500 ಮಂದಿ ವಿದೇಶಿಗರ ಆಗಮನ: ದಸರೆಯು ಜನರಿಂದ ತುಂಬಿತುಳುಕುವಂತೆ ಕಂಡು ಬಂದಿದ್ದು, ಬಹಳ ಸಂತೋಷವನ್ನುಂಟು ಮಾಡಿತು ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು. ಬಹುತೇಕ ಎಲ್ಲಾಹೋಟೆಲ್‌ಗಳು 5,6,7,8 ಈ ನಾಲ್ಕು ದಿನಗಳಂದು ಸಂಪೂರ್ಣ ಭರ್ತಿಯಾಗಿದ್ದವು. ಸುಮಾರು 1,500 ಮಂದಿ ವಿದೇಶಿಗರು ಆಗಮಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದ್ದಾರೆ. ಪ್ರವಾಸೋದ್ಯಮವು ಜನರನ್ನು ಸೆಳೆಯುವ ನಿಟ್ಟಿನಲ್ಲಿಮತ್ತಷ್ಟು ಉತ್ತಮ ಕಾರ್ಯಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದರು.

ಮೃಗಾಲಯ, ಚಾಮುಂಡಿಬೆಟ್ಟ, ಅರಮನೆಗೆ ಪ್ರವಾಸಿಗರ ಭೇಟಿ: ಜಂಬೂಸವಾರಿಯನ್ನು ಕಣ್ತುಂಬಿಕೊಂಡು ಹೋಟೆಲ್‌ಗಳು ಹಾಗೂ ಸಂಬಂಧಿಕರ ಮನೆಗಳಲ್ಲಿಉಳಿದುಕೊಂಡಿದ್ದ ಅನೇಕ ಪ್ರವಾಸಿಗರು ಬುಧವಾರ ನಗರದ ಪ್ರಮುಖ ಸ್ಥಳಗಳಾದ ಮೃಗಾಲಯ, ಚಾಮುಂಡುಬೆಟ್ಟ, ಅರಮನೆ ಸೇರಿದಂತೆ ಕೆಆರ್‌ಎಸ್‌, ಶ್ರೀರಂಗಪಟ್ಟಣ, ರಂಗನತಿಟ್ಟು, ಸೋಮನಾಥಪುರ, ಶಿವನಸಮುದ್ರ, ತಲಕಾಡು, ನಂಜನಗೂಡು ಹಾಗೂ ಕೆಆರ್‌ಎಸ್‌ ಹಿನ್ನೀರು ಇನ್ನೂ ಹಲವು ಸ್ಥಳಗಳಿಗೆ ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ