ಮೈಸೂರು: ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತ ಆರ್ಭಟಿಸುತ್ತಿದ್ದು, ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಆದರೆ, ಮೈಸೂರಿನಿಂದ ತಮಿಳುನಾಡಿಗೆ ಸಂಚರಿಸುವ ಸಾರಿಗೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ.
ಮೈಸೂರು ಮತ್ತು ಚೆನ್ನೈ ನಡುವೆ ಎಲ್ಲ ಮಾದರಿಯ ಸಾರಿಗೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿದೆ. ವಿಮಾನ ಹಾಗೂ ಕೆಎಸ್ಆರ್ಟಿಸಿ ಸೇವೆ ಎಂದಿನಂತೆ ಪ್ರಯಾಣಿಕರಿಗೆ ಸಿಗಲಿದೆ. ಆದರೆ, ಮೈಸೂರು ಮತ್ತು ಮೈಲಾದುತುರೈ ನಡುವೆ ಚಲಿಸುವ ರೈಲು ತಮಿಳುನಾಡಿನ ತಿರುಚ್ಚಿ ಮತ್ತು ಮೈಲಾದುತುರೈ ನಡುವೆ ಭಾಗಶಃ ರದ್ದಾಗಿದೆ. ಅದಲ್ಲದೇ 5 ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ, ಇದುವರೆಗೂ ಚೆನ್ನೈನಿಂದ ಮೈಸೂರಿಗೆ ಬರುವ ಹಾಗೂ ಮೈಸೂರಿನಿಂದ ಚೆನ್ನೈಗೆ ಹೋಗುವ ವಿಮಾನ ಸೇವೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಚೆನ್ನೈ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 26 ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.
ನಿವಾರ್ ಚಂಡಮಾರುತ: ತಮಿಳುನಾಡಿನ 13 ಜಿಲ್ಲೆಗಳಲ್ಲಿ ನ.26ರಂದು ಸಾರ್ವತ್ರಿಕ ರಜೆ!
ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ಸಹ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಕೊರೊನಾ ವೈರಸ್ ಪರಿಸ್ಥಿತಿ ನಂತರ ಕೇವಲ ಒಂದು ಬಸ್ ಮಾತ್ರ ತಮಿಳುನಾಡಿಗೆ ಮೀಸಲಾತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದರ ಕಾರ್ಯಾಚರಣೆಯಲ್ಲಿಯೂ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದಾರೆ.
ನಿವಾರ್ ಚಂಡಮಾರುತ ಎಂಟ್ರಿಗೂ ಮುನ್ನವೇ: ಭಾರಿ ಮಳೆ, ಸುಂಟರಗಾಳಿ; ತಮಿಳುನಾಡು-ಪುದುಚೇರಿಯಲ್ಲಿ ಹೈ ಅಲರ್ಟ್!
ಮೈಸೂರು ಮತ್ತು ಚೆನ್ನೈ ನಡುವೆ ಎಲ್ಲ ಮಾದರಿಯ ಸಾರಿಗೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿದೆ. ವಿಮಾನ ಹಾಗೂ ಕೆಎಸ್ಆರ್ಟಿಸಿ ಸೇವೆ ಎಂದಿನಂತೆ ಪ್ರಯಾಣಿಕರಿಗೆ ಸಿಗಲಿದೆ. ಆದರೆ, ಮೈಸೂರು ಮತ್ತು ಮೈಲಾದುತುರೈ ನಡುವೆ ಚಲಿಸುವ ರೈಲು ತಮಿಳುನಾಡಿನ ತಿರುಚ್ಚಿ ಮತ್ತು ಮೈಲಾದುತುರೈ ನಡುವೆ ಭಾಗಶಃ ರದ್ದಾಗಿದೆ. ಅದಲ್ಲದೇ 5 ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ, ಇದುವರೆಗೂ ಚೆನ್ನೈನಿಂದ ಮೈಸೂರಿಗೆ ಬರುವ ಹಾಗೂ ಮೈಸೂರಿನಿಂದ ಚೆನ್ನೈಗೆ ಹೋಗುವ ವಿಮಾನ ಸೇವೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಚೆನ್ನೈ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 26 ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.
ನಿವಾರ್ ಚಂಡಮಾರುತ: ತಮಿಳುನಾಡಿನ 13 ಜಿಲ್ಲೆಗಳಲ್ಲಿ ನ.26ರಂದು ಸಾರ್ವತ್ರಿಕ ರಜೆ!
ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ಸಹ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಕೊರೊನಾ ವೈರಸ್ ಪರಿಸ್ಥಿತಿ ನಂತರ ಕೇವಲ ಒಂದು ಬಸ್ ಮಾತ್ರ ತಮಿಳುನಾಡಿಗೆ ಮೀಸಲಾತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದರ ಕಾರ್ಯಾಚರಣೆಯಲ್ಲಿಯೂ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದಾರೆ.
ನಿವಾರ್ ಚಂಡಮಾರುತ ಎಂಟ್ರಿಗೂ ಮುನ್ನವೇ: ಭಾರಿ ಮಳೆ, ಸುಂಟರಗಾಳಿ; ತಮಿಳುನಾಡು-ಪುದುಚೇರಿಯಲ್ಲಿ ಹೈ ಅಲರ್ಟ್!