ಆ್ಯಪ್ನಗರ

ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ಹೈನುಗಾರಿಕೆ ಸಹಕಾರಿ

ಗ್ರಾಮೀಣ ಪ್ರದೇಶಗಳಲ್ಲಿ ರೈತರ ಬದುಕನ್ನು ಹಸನು ಮಾಡಲು ಹಾಗೂ ಆರ್ಥಿಕತೆಯಲ್ಲಿ ಸದೃಢತೆ ಸಾಧಿಸಲು ಉಪ ಕಸುಬಾದ ಹೈನುಗಾರಿಕೆ ಸಹಕಾರಿ ಎಂದು ಶಾಸಕ ಎಂ. ಅಶ್ವಿನ್‌ ಕುಮಾರ್‌ ಹೇಳಿದರು.

Vijaya Karnataka 25 Jul 2018, 5:00 am
ತಿ.ನರಸೀಪುರ : ಗ್ರಾಮೀಣ ಪ್ರದೇಶಗಳಲ್ಲಿ ರೈತರ ಬದುಕನ್ನು ಹಸನು ಮಾಡಲು ಹಾಗೂ ಆರ್ಥಿಕತೆಯಲ್ಲಿ ಸದೃಢತೆ ಸಾಧಿಸಲು ಉಪ ಕಸುಬಾದ ಹೈನುಗಾರಿಕೆ ಸಹಕಾರಿ ಎಂದು ಶಾಸಕ ಎಂ. ಅಶ್ವಿನ್‌ ಕುಮಾರ್‌ ಹೇಳಿದರು.
Vijaya Karnataka Web dairy assistant to strengthen farmers economy
ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ಹೈನುಗಾರಿಕೆ ಸಹಕಾರಿ


ತಾಲೂಕಿನ ಹಲವಾರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ರೈತ ಕುಟುಂಬಗಳಿಗೆ ಅಧಿಕ ಲಾಭ ತಂದು ಕೊಡುವ ಹೈನುಗಾರಿಕೆ ಪ್ರಗತಿಗೆ ಪೂರಕವಾಗಿದೆ. ಕೃಷಿಯ ಜತೆಗೆ ಉಪ ಕಸಬಾಗಿ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಿಕೊಂಡರೆ ರೈತರ ಬದುಕಿನಲ್ಲಿ ಸ್ಥಿರ
ತೆ ಕಾಪಾಡಿಕೊಳ್ಳಬಹುದು ಎಂದರು.

ಹಲವಾರ ಗ್ರಾಮದಂತಹ ಹಳ್ಳಿಯಲ್ಲಿ ಆರಂಭಗೊಂಡ ಹಾಲು ಉತ್ಪಾದಕರ ಸಹಕಾರ ಸಂಘ ಹಂತ ಹಂತವಾಗಿ ಅಭಿವೃದ್ಧಿ ಹೆಜ್ಜೆಯನ್ನಿಡುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ. ಸಹಕಾರಿ ತತ್ತ್ವ ಪಾಲನೆಯಿಂದ ಗ್ರಾಮದಲ್ಲಿ ಪ್ರಗತಿ ಕಂಡಿದೆ. ಹಾಲು ಉತ್ಪಾದಕರೆಲ್ಲರೂ ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡುವ ಮೂಲಕ ಅಧಿಕ ಲಾಭ ಗಳಿಸಬೇಕು ಎಂದರು.

ನೂತನ ಕಟ್ಟಡ ಉದ್ಘಾಟಿಸಿದ ಮೈಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್‌ ಮಾತನಾಡಿ, ಮಾರುಕಟ್ಟೆಯಲ್ಲಿ ಹಾಲಿಗೆ ನಿಖರವಾದ ಬೆಲೆಯಿರುವುದರಿಂದ ಹೈನುಗಾರಿಕೆ ರೈತರಿಗೆ ಲಾಭ ತಂದುಕೊಡುತ್ತಿದೆ. ರೈತರಿಗೆ ಉತ್ತೇಜನ ನೀಡಲು ಮೈಮುಲ್‌ ಹೆಚ್ಚಿನ ನೆರವನ್ನು ನೀಡುತ್ತಿದೆ ಎಂದು ತಿಳಿಸಿದರು.

ಹಲವಾರ ಮಠದ ಷಡಕ್ಷ ರ ದೇಶಿಕೇಂದ್ರ ಸ್ವಾಮೀಜಿ, ನೆರಗ್ಯಾತನಹಳ್ಳಿ ವೀರಕ್ತ ಮಠದ ರಾಜಶೇಖರ ಸ್ವಾಮೀಜಿ, ಮೈಮುಲ್‌ ನಿರ್ದೇಶಕ ಕೆ.ಸಿ.ಬಲರಾಂ, ಅಪರ ನಿರ್ದೇಶಕ ಮಲ್ಲಿಕಾರ್ಜುನ, ಉಪ ವ್ಯವಸ್ಥಾಪಕ ಡಾ.ಕೆ.ಬಿ.ಶಿವಪ್ರಸಾದ್‌, ಜಿ.ಪಂ ಮಾಜಿ ಅಧ್ಯಕ್ಷ ಎಸ್‌.ಎನ್‌. ಸಿದ್ದಾರ್ಥ, ಗ್ರಾ.ಪಂ ಅಧ್ಯಕ್ಷ ಮಹದೇವಸ್ವಾಮಿ, ಪಿಡಿಓ ನಾಗರಾಜು, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಸಿ.ಬಿ ಹುಂಡಿ ಚಿನ್ನಸ್ವಾಮಿ, ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಸಿದ್ಧಶೆಟ್ಟಿ, ಸಿಇಓ ಮಲ್ಲಿಕಾರ್ಜುನಸ್ವಾಮಿ, ನಿರ್ದೇಶಕರಾದ ಶಿವಸ್ವಾಮಿ, ಎಚ್‌ .ಜಿ.ಮಹೇಶ, ಮಹದೇವಯ್ಯ, ಶಾಂತಶೆಟ್ಟಿ, ಪ್ರಭುಸ್ವಾಮಿ, ಪಿ.ಶಾಂತಪ್ಪ, ಮಹದೇವಮ್ಮ, ಎಸ್‌.ಮೇಗಡಹಳ್ಳಿ ಮೂರ್ತಿ, ಮಹದೇವಯ್ಯ, ಜಯಪಾಲ ಭರಣಿ, ಸುರೇಶ, ಪ್ರೀತಂ, ಕೆಂಡನಕೊಪ್ಪಲು ಸುರೇಶ, ಧರ್ಮರತ್ನಕುಮಾರ ಹಾಗೂ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ