ಮೈಸೂರು: ದಸರಾ ಕ್ರೀಡಾಕೂಟದಲ್ಲಿವಿಶೇಷಚೇತನರಿಗೆ ಕ್ರೀಡೆ ಆಯೋಜನೆ ಮಾಡಬೇಕೆಂದು ವಿಕಲಚೇತನರ ಅಭ್ಯುದಯ ಸೇವಾ ಸಂಸ್ಥೆ ಸಂಸ್ಥಾಪಕ ಎಂ.ಪ್ರಭುಸ್ವಾಮಿ ಒತ್ತಾಯಿಸಿದರು.
ದಸರಾದಲ್ಲಿಶ್ವಾನ ಪ್ರದರ್ಶನ ಏರ್ಪಡಿಸಿ ಮೂಕ ಪ್ರಾಣಿಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಹಾಗಾದರೆ ವಿಶೇಷಚೇತನರು ಅವುಗಳಿಗಿಂತಲೂ ಹೀನವೇ ಎಂದು ಸುದ್ದಿಗೋಷ್ಠಿಯಲ್ಲಿಬೇಸರ ವ್ಯಕ್ತಪಡಿಸಿದರು. ಈ ಕುರಿತು ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜತೆಗೆ ಜಂಬೂ ಸವಾರಿ ವೀಕ್ಷಣೆಗೆ ಜಿಲ್ಲಾಡಳಿತದಿಂದ ವಿಶೇಷಚೇತನರಿಗೆ ಉಚಿತ ಪಾಸ್ ವಿತರಿಸಬೇಕೆಂದು ಒತ್ತಾಯಿಸಿದರು.
29ಕ್ಕೆ ವ್ಹೀಲ್ಚೇರ್ ಕ್ರಿಕೆಟ್ ಪಂದ್ಯಾವಳಿ: ದಸರಾದಲ್ಲಿವಿಶೇಷಚೇತನರ ಕ್ರೀಡಾಕೂಟ ಆಯೋಜಿಸದ ಕಾರಣ ಬೇಸರಗೊಂಡು ನಾವೇ ಕಳೆದ ಮೂರು ವರ್ಷಗಳಿಂದ ರಾಜ್ಯಮಟ್ಟದ ವ್ಹೀಲ್ಚೇರ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದು, ಈ ಬಾರಿ ಸೆ.29ರಂದು ದಸರಾ ಕಪ್-ವಿಶೇಷಚೇತನರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯಲು ಯತ್ನಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ವ್ಹೀಲ್ಚೇರ್ ಅಸೋಸಿಯೇಷನ್, ವಿಕಲಚೇತನರ ಅಭ್ಯುದಯ ಸೇವಾ ಸಂಸ್ಥೆ ಹಾಗೂ ಸುರಕ್ಷಾ ಫೌಂಡೇಶನ್ ಸಹಯೋಗದಲ್ಲಿವಿಕಲಚೇತನ ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿ ಅಂದು ಬೆಳಗ್ಗೆ 9ಕ್ಕೆ ವಿಜಯನಗರದ ಮುಡಾ ಕ್ರೀಡಾ ಮೈದಾನದಲ್ಲಿನಡೆಯಲಿದೆ ಎಂದು ಕರ್ನಾಟಕ ವ್ಹೀಲ್ಚೇರ್ ಅಸೋಸಿಯೇಷನ್ನ ಕಾರ್ಯದರ್ಶಿ ವಿಜಯ್ ತಿಳಿಸಿದರು.
10 ಓವರ್ಗಳ ಪಂದ್ಯ ಇದಾಗಿದ್ದು, ಬಾಗಲಕೋಟೆ, ಮೈಸೂರು ಮತ್ತು ಬೆಂಗಳೂರು ತಂಡಗಳು ಪಾಲ್ಗೊಳ್ಳುತ್ತಿವೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್ಮನ್, ಉತ್ತಮ ಫೀಲ್ಡರ್ಗೆ ಪ್ರಶಸ್ತಿ ನೀಡಲಾಗುವುದು ಎಂದರು.
ವಿಭೂತಿಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮಠದ ಪಟ್ಟದ ಮಲಯಾಳ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ನಟರಾದ ದರ್ಶನ್, ಅಭಿಷೇಕ್ ಅಂಬರೀಶ್, ಹಿರಿಯ ನಟ ದೊಡ್ಡಣ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಜಾಗೃತಿ: ''ಪಂದ್ಯಾವಳಿ ಅಂಗವಾಗಿ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೈದಾನದಲ್ಲಿಮಳಿಗೆ ತೆರೆದು ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸುವ ಸಲುವಾಗಿ ಬಟ್ಟೆ ಬ್ಯಾಗುಗಳ ಪ್ರಚಾರ, ಅಂಗದಾನ ಅರಿವು ಮತ್ತು ಅರ್ಜಿಗಳ ವಿತರಣೆ, ಸಿಪೆಟ್ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ ಮತ್ತು ಉದ್ಯೋಗ ಅವಕಾಶದ ಬಗ್ಗೆ ಮಾಹಿತಿ, ಥಿಯೋರಮ್ ಇಂಡಿಯಾ ಸಂಸ್ಥೆಯಿಂದ ದೈಹಿಕ ವಿಶೇಷಚೇತನರಿಗೆ ಉದ್ಯೋಗ ಅವಕಾಶದ ಬಗ್ಗೆ ಮಾಹಿತಿ ಮತ್ತು ಅಂಧ ಮಕ್ಕಳಿಂದ ಗಾಂಧೀಜಿ ಕನಸು 150 ವರ್ಷಕ್ಕೆ ನನಸು ಆಡಿಯೋ ಪ್ಲೇ ಮಾಡಲಾಗುವುದು,'' ಎಂದರು.
ಸೆ.30ರಂದು 11ಕ್ಕೆ ಗುಣಮಟ್ಟದ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಲು ನಾನಾ ಸಂಘ ಸಂಸ್ಥೆಗಳು, ಸಿಪೆಟ್ ವಿದ್ಯಾರ್ಥಿಗಳು ಮತ್ತು ವಿಶೇಷಚೇತನರ
ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾವು ಮೇಟಗಳ್ಳಿಯಿಂದ ಆರಂಭಗೊಂಡು ಹೆಬ್ಬಾಳದ ಸೂರ್ಯ ಬೇಕರಿಯಲ್ಲಿಕೊನೆಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ ಪ್ರದೀಪ್, ಆನಂದ್, ಆರ್.ರಾಮಚಂದ್ರ ಇದ್ದರು.
ದಸರಾದಲ್ಲಿಶ್ವಾನ ಪ್ರದರ್ಶನ ಏರ್ಪಡಿಸಿ ಮೂಕ ಪ್ರಾಣಿಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಹಾಗಾದರೆ ವಿಶೇಷಚೇತನರು ಅವುಗಳಿಗಿಂತಲೂ ಹೀನವೇ ಎಂದು ಸುದ್ದಿಗೋಷ್ಠಿಯಲ್ಲಿಬೇಸರ ವ್ಯಕ್ತಪಡಿಸಿದರು. ಈ ಕುರಿತು ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜತೆಗೆ ಜಂಬೂ ಸವಾರಿ ವೀಕ್ಷಣೆಗೆ ಜಿಲ್ಲಾಡಳಿತದಿಂದ ವಿಶೇಷಚೇತನರಿಗೆ ಉಚಿತ ಪಾಸ್ ವಿತರಿಸಬೇಕೆಂದು ಒತ್ತಾಯಿಸಿದರು.
29ಕ್ಕೆ ವ್ಹೀಲ್ಚೇರ್ ಕ್ರಿಕೆಟ್ ಪಂದ್ಯಾವಳಿ: ದಸರಾದಲ್ಲಿವಿಶೇಷಚೇತನರ ಕ್ರೀಡಾಕೂಟ ಆಯೋಜಿಸದ ಕಾರಣ ಬೇಸರಗೊಂಡು ನಾವೇ ಕಳೆದ ಮೂರು ವರ್ಷಗಳಿಂದ ರಾಜ್ಯಮಟ್ಟದ ವ್ಹೀಲ್ಚೇರ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದು, ಈ ಬಾರಿ ಸೆ.29ರಂದು ದಸರಾ ಕಪ್-ವಿಶೇಷಚೇತನರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯಲು ಯತ್ನಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ವ್ಹೀಲ್ಚೇರ್ ಅಸೋಸಿಯೇಷನ್, ವಿಕಲಚೇತನರ ಅಭ್ಯುದಯ ಸೇವಾ ಸಂಸ್ಥೆ ಹಾಗೂ ಸುರಕ್ಷಾ ಫೌಂಡೇಶನ್ ಸಹಯೋಗದಲ್ಲಿವಿಕಲಚೇತನ ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿ ಅಂದು ಬೆಳಗ್ಗೆ 9ಕ್ಕೆ ವಿಜಯನಗರದ ಮುಡಾ ಕ್ರೀಡಾ ಮೈದಾನದಲ್ಲಿನಡೆಯಲಿದೆ ಎಂದು ಕರ್ನಾಟಕ ವ್ಹೀಲ್ಚೇರ್ ಅಸೋಸಿಯೇಷನ್ನ ಕಾರ್ಯದರ್ಶಿ ವಿಜಯ್ ತಿಳಿಸಿದರು.
10 ಓವರ್ಗಳ ಪಂದ್ಯ ಇದಾಗಿದ್ದು, ಬಾಗಲಕೋಟೆ, ಮೈಸೂರು ಮತ್ತು ಬೆಂಗಳೂರು ತಂಡಗಳು ಪಾಲ್ಗೊಳ್ಳುತ್ತಿವೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್ಮನ್, ಉತ್ತಮ ಫೀಲ್ಡರ್ಗೆ ಪ್ರಶಸ್ತಿ ನೀಡಲಾಗುವುದು ಎಂದರು.
ವಿಭೂತಿಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮಠದ ಪಟ್ಟದ ಮಲಯಾಳ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ನಟರಾದ ದರ್ಶನ್, ಅಭಿಷೇಕ್ ಅಂಬರೀಶ್, ಹಿರಿಯ ನಟ ದೊಡ್ಡಣ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಜಾಗೃತಿ: ''ಪಂದ್ಯಾವಳಿ ಅಂಗವಾಗಿ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೈದಾನದಲ್ಲಿಮಳಿಗೆ ತೆರೆದು ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸುವ ಸಲುವಾಗಿ ಬಟ್ಟೆ ಬ್ಯಾಗುಗಳ ಪ್ರಚಾರ, ಅಂಗದಾನ ಅರಿವು ಮತ್ತು ಅರ್ಜಿಗಳ ವಿತರಣೆ, ಸಿಪೆಟ್ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ ಮತ್ತು ಉದ್ಯೋಗ ಅವಕಾಶದ ಬಗ್ಗೆ ಮಾಹಿತಿ, ಥಿಯೋರಮ್ ಇಂಡಿಯಾ ಸಂಸ್ಥೆಯಿಂದ ದೈಹಿಕ ವಿಶೇಷಚೇತನರಿಗೆ ಉದ್ಯೋಗ ಅವಕಾಶದ ಬಗ್ಗೆ ಮಾಹಿತಿ ಮತ್ತು ಅಂಧ ಮಕ್ಕಳಿಂದ ಗಾಂಧೀಜಿ ಕನಸು 150 ವರ್ಷಕ್ಕೆ ನನಸು ಆಡಿಯೋ ಪ್ಲೇ ಮಾಡಲಾಗುವುದು,'' ಎಂದರು.
ಸೆ.30ರಂದು 11ಕ್ಕೆ ಗುಣಮಟ್ಟದ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಲು ನಾನಾ ಸಂಘ ಸಂಸ್ಥೆಗಳು, ಸಿಪೆಟ್ ವಿದ್ಯಾರ್ಥಿಗಳು ಮತ್ತು ವಿಶೇಷಚೇತನರ
ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾವು ಮೇಟಗಳ್ಳಿಯಿಂದ ಆರಂಭಗೊಂಡು ಹೆಬ್ಬಾಳದ ಸೂರ್ಯ ಬೇಕರಿಯಲ್ಲಿಕೊನೆಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ ಪ್ರದೀಪ್, ಆನಂದ್, ಆರ್.ರಾಮಚಂದ್ರ ಇದ್ದರು.