ಆ್ಯಪ್ನಗರ

ದಸರಾ ಆನೆ ಜೂನಿಯರ್ ದ್ರೋಣ ಇನ್ನಿಲ್ಲ

ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 39 ವರ್ಷದ ದ್ರೋಣ ಬೆಳಗ್ಗೆ 11 ಗಂಟೆ ವೇಳೆಗೆ ನೀರು ಕುಡಿಯುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದೆ. ಸದ್ಯ ಆನೆಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

Vijaya Karnataka Web 26 Apr 2019, 5:01 pm
ಮೈಸೂರು: ಮೈಸೂರು ದಸರಾ ಆನೆ ದ್ರೋಣ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದೆ.
Vijaya Karnataka Web Drona (Junior) dies after heart attack


ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 39 ವರ್ಷದ ದ್ರೋಣ ಬೆಳಗ್ಗೆ 11 ಗಂಟೆ ವೇಳೆಗೆ ನೀರು ಕುಡಿಯುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದೆ. ಸದ್ಯ ಆನೆಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಕಳೆದ ವರ್ಷ ಮೊದಲ ಬಾರಿಗೆ ದಸರಾ ಅಂಬಾರಿ ಆನೆಯ ಜತೆಯಲ್ಲಿ ಪಾಲ್ಗೊಂಡಿದ್ದ ದ್ರೋಣ (39) ಇನ್ನಿಲ್ಲ. ಮತ್ತಿಗೋಡು ಶಿಬಿರದ ದ್ರೋಣ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ.

'ದ್ರೋಣ'ನ ಹಠಾತ್ ಸಾವು ದಸರಾ ಆನೆಗಳ ಅಭಿಮಾನಿಗಳಿಗೆ ತೀವ್ರ ದುಃಖ ಉಂಟುಮಾಡಿದೆ.

ದಸರಾ ಆನೆಗಳ ಬಳಗದ ಹಿರಿಯ 'ದ್ರೋಣ' ಸತತ 18 ವರ್ಷಗಳ ಕಾಲ (1981-1997) ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿದ್ದ. 1998ರಲ್ಲಿ ಮೇಯಲು ಹೋಗಿದ್ದಾಗ ವಿದ್ಯುತ್ ತಗುಲಿ ಸಾವಿಗೀಡಾಗಿದ್ದ.

ಹಿರಿಯ 'ದ್ರೋಣ'ನ ಅಂತ್ಯದ ಬಳಿಕ ಮತ್ತೊಂದು ಕಿರಿಯ ಆನೆಗೆ 'ದ್ರೋಣ' ಎಂದು ನಾಮಕರಣ ಮಾಡಿ ದಸರಾ ಆನೆಗಳ ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು. ಈಗ ಈ ಕಿರಿಯ 'ದ್ರೋಣ'ನೂ ಮೃತಪಟ್ಟಿದ್ದಾನೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ