ಆ್ಯಪ್ನಗರ

ಲಕ್ಷ್ಮೀ ‘ಪುತ್ರ’ನ ಸಂಭ್ರಮ: ಆನೆ ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ ಎಂದ ಡಿಸಿಎಫ್ ಕರಿಕಾಳನ್..!

ನಾವು ಆನೆ ಶಿಬಿರಕ್ಕೆ ಆನೆಗಳನ್ನು ಪರೀಕ್ಷಿಸಲು ಹೋದಾಗ ಈ ಆನೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ಹಾಗಾಗಿ ದಸರಾದಲ್ಲಿ ಭಾಗವಹಿಸಲು ಈ ಆನೆಯನ್ನು ಆಯ್ಕೆ ಮಾಡಿದ್ದೆವು. ಮಂಗಳವಾರ ಮಧ್ಯಾಹ್ನ ಲಕ್ಷ್ಮಿ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿತ್ತು. ಕೂಡಲೇ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಡಿಸಿಎಫ್ ಕರಿಕಾಳನ್ ಪ್ರತಿಕ್ರಿಯೆ ನೀಡಿದರು.

Vijaya Karnataka Web 14 Sep 2022, 4:55 pm
ಮೈಸೂರು: ಅರಮನೆ ನಗರಿ ಮೈಸೂರಲ್ಲಿ ದಸರಾ ಸಂಭ್ರಮ ಮನೆಮಾಡಿದೆ. ಈಗಾಗ್ಲೇ ಗಜಪಡೆ ಮೈಸೂರಲ್ಲಿ ಬಿಡುಬಿಟ್ಟಿದ್ದು ಜಂಬೂ ಸವಾರಿಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಈ ನಡುವೆ ಅಭಿಮನ್ಯು ಅಂಡ್ ಟೀಮ್‌ಗೆ ಹೊಸ ಅತಿಥಿ ಸೇರ್ಪಡೆಯಾಗಿದ್ದಾನೆ. ಗಜಪಡೆಯ ಭಾಗವಾದ ಲಕ್ಷ್ಮೀ ಆನೆ ದಸರಾ ಸಂಭ್ರಮದಲ್ಲಿ ಗಂಡು ಆನೆಗೆ ಜನ್ಮನೀಡಿದ್ದಾಳೆ.
Vijaya Karnataka Web Elephant Lakshmi in Mysuru


ಈ ಬಗ್ಗೆ ಡಿಸಿಎಫ್ ಕರಿಕಾಳನ್ ಪ್ರತಿಕ್ರಿಯೆ ನೀಡಿದ್ದು, 'ಮಂಗಳವಾರ ಮಧ್ಯಾಹ್ನ ಲಕ್ಷ್ಮಿ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿತ್ತು. ಕೂಡಲೇ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಹೇಳಿದ್ರು. ನಾವು ಆನೆ ಶಿಬಿರಕ್ಕೆ ಆನೆಗಳನ್ನು ಪರೀಕ್ಷಿಸಲು ಹೋದಾಗ ಈ ಆನೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ಹಾಗಾಗಿ ದಸರಾದಲ್ಲಿ ಭಾಗವಹಿಸಲು ಈ ಆನೆಯನ್ನು ಆಯ್ಕೆ ಮಾಡಿದ್ದೆವು ಎಂದರು.
Mysuru Dasara: ಮೈಸೂರು ಅರಮನೆ ಆವರಣದಲ್ಲಿ ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ; ಮರಿ ಆನೆಯ ಹೆಸರೇನು?
ದಸರಾಗೆ ಆನೆಯನ್ನು ಆಯ್ಕೆ ಮಾಡಿದ್ದಾಗ ಸಾಮಾನ್ಯ ಆನೆಗಳಂತೆ ಲಕ್ಷ್ಮಿ ಆನೆಯ ಚಲನವಲನವಿತ್ತು. ಮಂಗಳವಾರ ಮಧ್ಯಾಹ್ನ ಈ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡಿತು. ಕೂಡಲೇ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ಕೂಡಲೇ ಕೆಲವು ಟೆಸ್ಟ್ ಸ್ಯಾಂಪಲ್ಗಳನ್ನು ಹೈದರಾಬಾದ್ಗೆ ಕಳುಹಿಸಲಾಯಿತು. ಆದರೆ ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಮಾಹಿತಿ ನೀಡಿದರು.

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸೇರಿ ಎಲ್ರಿಗೂ ತುಂಬಾ ಸಂತೋಷವಾಗಿದೆ. ತಾಯಿ ಮತ್ತು ಮರಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ ಎಷ್ಟು ದಿನ ಬೇಕೋ ಅಷ್ಟು ದಿನ ಅರಮನೆಯಲ್ಲಿ ಇಟ್ಟುಕೊಳ್ಳಿ. ಅದಕ್ಕೆ ನಮ್ಮ ಸಹಕಾರವಿರುತ್ತದೆ ಎಂದು ಹೇಳಿದ್ದಾರೆ ಎಂದು ಕರಿಕಾಳನ್ ತಿಳಿಸಿದರು.
ದಸರಾ ಗಜಪಡೆಗೆ ಸಿಡಿಮದ್ದು ತಾಲೀಮು: ಭಾರೀ ಶಬ್ದಕ್ಕೆ ಬೆದರಿದ ಆನೆ ಹಾಗೂ ಕುದುರೆಗಳು!
ಗರ್ಭಿಣಿ ಆನೆಯನ್ನು ತಾಲೀಮಿನಲ್ಲಿ ಕರೆದುಕೊಂಡು ಹೋಗಿದ್ದರಿಂದ ಜೊತೆಗೆ ಒಳ್ಳೆಯ ಆಹಾರ ನೀಡಿದ್ದರಿಂದ ಯಾವುದೇ ಕಷ್ಟ ಆಗದ ರೀತಿಯಲ್ಲಿ ಮರಿ ಜನನವಾಗಿದೆ. ಮುಂದಿನ 1 ವಾರ ತಾಯಿ ಮಗುವಿನ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಅಂತ ಹೇಳಿದ್ರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ