ಎಂ.ನಂಜುಂಡಸ್ವಾಮಿ ಮೈಸೂರು
''ಅರ್ಜುನನ ಗಂಟೆ ಸದ್ದು ನಮ್ಮನ್ನು ಕಲ್ಪನಾ ಲೋಕದ ಜಂಬೂಸವಾರಿಗೆ ಕರೆದೊಯ್ಯಿತು. ನಮ್ಮದೇ ಕಲ್ಪನೆಯಲ್ಲಿ ಆನೆ, ಅಂಬಾರಿ, ಚಾಮುಂಡೇಶ್ವರಿ...ಹೀಗೆ ಎಲ್ಲವೂ ನಮ್ಮ ಸ್ಮೃತಿ ಪಟಲದಲ್ಲಿ ಒಂದು ಕ್ಷಣ ಹಾದು ಹೋಯಿತು. ಈ ಜನಜಂಗುಳಿ, ಮೆರವಣಿಗೆ ಯ ಶಬ್ದಗಳಿಂದ ನಮ್ಮೊಳಗೊಂದು ದಸರಾ ಜಂಬೂಸವಾರಿ ಮೂಡಿತು. ಈ ಮೂಲಕ ಸಾಮಾನ್ಯರಂತೆ ನಾವೂ ದಸರಾ ನೋಡಿದೆವು ಎಂಬ ಸಂಭ್ರಮದಿಂದಿದ್ದೇವೆ...'' -ಇದು ತಿಲಕ್ನಗರದ ಸರಕಾರಿ ಅಂಧ ಮಕ್ಕಳ ಶಾಲೆಯ ಮುಂಭಾಗ ದಸರಾ ಜಂಬೂಸವಾರಿ ವೀಕ್ಷಿಸಿದ ಆ ಶಾಲೆಯ ಮಕ್ಕಳು ಆಡಿದ ಸಂತಸದ ಮಾತುಗಳು. ಈ ಶಾಲೆಯ ಮುಂದೆಯೇ ಜಂಬೂಸವಾರಿ ಸಾಗುತ್ತಿದ್ದು, ಮುಂಭಾಗ ರಸ್ತೆಬದಿ ಮಕ್ಕಳಿಗೆ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಸ್ತಬ್ಧಚಿತ್ರ, ಕಲಾತಂಡಗಳು ಹಾಗೂ ಜಂಬೂಸವಾರಿ ಮೆರವಣಿಗೆಯ ವೀಕ್ಷಕ ವಿವರಣೆ ನೀಡಲಾಗುತ್ತಿತ್ತು.
ಈ ಮೂಲಕ ಎಲ್ಲವನ್ನು ಕಲ್ಪಿಸಿಕೊಂಡು ತಮ್ಮ ಅಂತರಾಳದಲ್ಲಿ ದಸರಾ ಮಹೋತ್ಸವವನ್ನು ಸೃಷ್ಟಿಸಿಕೊಂಡರು. ದಸರೆ ವೀಕ್ಷಿಸಿದ ದೃಷ್ಟಿ ವಿಶೇಷಚೇತನರು ತಮ್ಮ ಸಂತಸವನ್ನು ವಿಜಯಕರ್ನಾಟಕ ದೊಂದಿಗೆ ಹಂಚಿಕೊಂಡಿದ್ದಾರೆ. ಶಾಲೆಯ ಕಲಿಕೆ ವೇಳೆ ಹೇಳಿಕೊಡಲಾಗುವ ಆನೆ, ಜಾತ್ರೆ, ಉತ್ಸವ ಹೇಗಿರುತ್ತದೆ ಎಂದು ಶಿಕ್ಷಕರು ದೃಷ್ಟಿ ವಿಶೇಷಚೇತನ ಮಕ್ಕಳಿಗೆ ಸ್ಪರ್ಶದ ಮೂಲಕ ಮತ್ತು ಮೌಖಿಕವಾಗಿ ಹೇಳಿಕೊಟ್ಟಿದ್ದರು. ಇದು ದಸರಾ ವೀಕ್ಷಣೆ ವೇಳೆ ಅವರು ಕೇಳಿಸಿಕೊಳ್ಳುವ ಶಬ್ದಗಳಿಂದ ಮನದೊಳಗೆ ರೂಪ ಪಡೆದುಕೊಂಡವು. ತಮ್ಮ ಸ್ನೇಹಿತರಿಂದ ಮಾಹಿತಿ ಪಡೆದುಕೊಂಡು ದಸರೆ ಖುಷಿಯಲ್ಲಿಪಾಲ್ಗೊಂಡರು.
''ಪೂರ್ತಿ ಕಾಣದವರಿಗೆ, ಅಲ್ಪಸ್ವಲ್ಪ ದೃಷ್ಟಿ ಇರುವವರು ಮೆರವಣಿಗೆ ವೀಕ್ಷಣೆ ವಿವರ ಹೇಳುತ್ತಾರೆ. ನಮಗೆ ಮತ್ತು ಮಕ್ಕಳಿಗೆ ಮೆರವಣಿಗೆ, ಕಲಾತಂಡ, ಜಾನಪದ ವಾದ್ಯದ ಝೇಂಕಾರ ಮತ್ತು ಕುಣಿತದ ಸದ್ದು ವಿನೂತನ ಅನುಭವ ನೀಡಿದೆ. ಇದೇ ವೇಳೆ ನಮ್ಮ ಜತೆಗಿರುವ ಕುಟುಂಬದವರು ಹೇಳುತ್ತಿದ್ದ ವಿವರಣೆ ನಾವು ಸ್ವತಃ ದಸರೆ ವೀಕ್ಷಣೆ ಮಾಡಿದಷ್ಟೆ ಖುಷಿ ನೀಡಿತು. ಸ್ತಬ್ಧಚಿತ್ರ ಮತ್ತು ಕಲಾತಂಡಗಳು ಮುಗಿಯುವ ವೇಳೆ ಅಂಬಾರಿ ಹೊತ್ತ ಅರ್ಜುನನ ನಡಿಗೆ, ಅವನ ಗಂಟೆ ಸದ್ದು ಜಂಬೂಸವಾರಿ ಮೆರವಣಿಗೆ ನಮ್ಮನ್ನು ಸಮೀಪಿಸಿತು ಎಂದು ಅರಿವಾಯಿತು. ದೇವಿಯ ದರ್ಶನ ಪಡೆದ ಜನರ ಉದ್ಗಾರ, ಜೈಕಾರಗಳಿಂದ ಪ್ರೇರಿತರಾದ ನಾವೂ ಜೈಕಾರ ಕೂಗಿದೆವು,'' ಎಂದು ದೃಷ್ಟಿ ವಿಶೇಷಚೇತನೆ, ಸಂಗೀತ ಶಿಕ್ಷಕಿ ನಾಗಶ್ರೀ ತಿಳಿಸಿದರು.
ಮತ್ತೊಂದು ಕಡೆಯೂ: ಜಂಬೂಸವಾರಿ ಸಾಗುವ ಆಯುರ್ವೇದ ಕಾಲೇಜು ಸಮೀಪವೂ ಕಲ್ಪವೃಕ್ಷ ಮತ್ತು ಜನಚೇತನ ಟ್ರಸ್ಟ್ನಿಂದ ವಿಶೇಷ ಚೇತನರು ದಸರಾ ವೀಕ್ಷಣೆಗೆ ಅನುಕೂಲ ವಾಗುವಂತೆ ಆಸನ ವ್ಯವಸ್ಥೆ ಮಾಡ ಲಾಗಿತ್ತು. ಸಂಪೂರ್ಣ ಮತ್ತು ಅರೆ ದೃಷ್ಟಿವುಳ್ಳ ಹಾಗೂ ಇತರೆ ವಿಶೇಷ ಚೇತನರು ದಸರಾ ಜಂಬೂಸವಾರಿಗೆ ಸಾಕ್ಷಿ ಯಾದರು. ಮೈಸೂರಿ ನಲ್ಲಿರುವ ದೃಷ್ಟಿ ವಿಶೇಷ ಚೇತನ ಶಾಲೆಗಳ ಮಕ್ಕಳು, ಇತರೆ ಜಿಲ್ಲೆಯ ವಿಶೇಷ ಚೇತನ ಮಕ್ಕಳು ತಮ್ಮದೇ ದೃಷ್ಟಿಯಲ್ಲಿ ದಸರಾ ವೀಕ್ಷಿಸಿ ದರು. ಕೆಲ ದೃಷ್ಟಿವಿಶೇಷಚೇತನರು ಇದೇ ಮೊದಲ ಬಾರಿಗೆ ದಸರಾ ವೀಕ್ಷಣೆಯ ಅನುಭವ ಪಡೆದು ಪುಳಕಿತರಾದರು.
''ಅರ್ಜುನನ ಗಂಟೆ ಸದ್ದು ನಮ್ಮನ್ನು ಕಲ್ಪನಾ ಲೋಕದ ಜಂಬೂಸವಾರಿಗೆ ಕರೆದೊಯ್ಯಿತು. ನಮ್ಮದೇ ಕಲ್ಪನೆಯಲ್ಲಿ ಆನೆ, ಅಂಬಾರಿ, ಚಾಮುಂಡೇಶ್ವರಿ...ಹೀಗೆ ಎಲ್ಲವೂ ನಮ್ಮ ಸ್ಮೃತಿ ಪಟಲದಲ್ಲಿ ಒಂದು ಕ್ಷಣ ಹಾದು ಹೋಯಿತು. ಈ ಜನಜಂಗುಳಿ, ಮೆರವಣಿಗೆ ಯ ಶಬ್ದಗಳಿಂದ ನಮ್ಮೊಳಗೊಂದು ದಸರಾ ಜಂಬೂಸವಾರಿ ಮೂಡಿತು. ಈ ಮೂಲಕ ಸಾಮಾನ್ಯರಂತೆ ನಾವೂ ದಸರಾ ನೋಡಿದೆವು ಎಂಬ ಸಂಭ್ರಮದಿಂದಿದ್ದೇವೆ...'' -ಇದು ತಿಲಕ್ನಗರದ ಸರಕಾರಿ ಅಂಧ ಮಕ್ಕಳ ಶಾಲೆಯ ಮುಂಭಾಗ ದಸರಾ ಜಂಬೂಸವಾರಿ ವೀಕ್ಷಿಸಿದ ಆ ಶಾಲೆಯ ಮಕ್ಕಳು ಆಡಿದ ಸಂತಸದ ಮಾತುಗಳು. ಈ ಶಾಲೆಯ ಮುಂದೆಯೇ ಜಂಬೂಸವಾರಿ ಸಾಗುತ್ತಿದ್ದು, ಮುಂಭಾಗ ರಸ್ತೆಬದಿ ಮಕ್ಕಳಿಗೆ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಸ್ತಬ್ಧಚಿತ್ರ, ಕಲಾತಂಡಗಳು ಹಾಗೂ ಜಂಬೂಸವಾರಿ ಮೆರವಣಿಗೆಯ ವೀಕ್ಷಕ ವಿವರಣೆ ನೀಡಲಾಗುತ್ತಿತ್ತು.
ಈ ಮೂಲಕ ಎಲ್ಲವನ್ನು ಕಲ್ಪಿಸಿಕೊಂಡು ತಮ್ಮ ಅಂತರಾಳದಲ್ಲಿ ದಸರಾ ಮಹೋತ್ಸವವನ್ನು ಸೃಷ್ಟಿಸಿಕೊಂಡರು. ದಸರೆ ವೀಕ್ಷಿಸಿದ ದೃಷ್ಟಿ ವಿಶೇಷಚೇತನರು ತಮ್ಮ ಸಂತಸವನ್ನು ವಿಜಯಕರ್ನಾಟಕ ದೊಂದಿಗೆ ಹಂಚಿಕೊಂಡಿದ್ದಾರೆ. ಶಾಲೆಯ ಕಲಿಕೆ ವೇಳೆ ಹೇಳಿಕೊಡಲಾಗುವ ಆನೆ, ಜಾತ್ರೆ, ಉತ್ಸವ ಹೇಗಿರುತ್ತದೆ ಎಂದು ಶಿಕ್ಷಕರು ದೃಷ್ಟಿ ವಿಶೇಷಚೇತನ ಮಕ್ಕಳಿಗೆ ಸ್ಪರ್ಶದ ಮೂಲಕ ಮತ್ತು ಮೌಖಿಕವಾಗಿ ಹೇಳಿಕೊಟ್ಟಿದ್ದರು. ಇದು ದಸರಾ ವೀಕ್ಷಣೆ ವೇಳೆ ಅವರು ಕೇಳಿಸಿಕೊಳ್ಳುವ ಶಬ್ದಗಳಿಂದ ಮನದೊಳಗೆ ರೂಪ ಪಡೆದುಕೊಂಡವು. ತಮ್ಮ ಸ್ನೇಹಿತರಿಂದ ಮಾಹಿತಿ ಪಡೆದುಕೊಂಡು ದಸರೆ ಖುಷಿಯಲ್ಲಿಪಾಲ್ಗೊಂಡರು.
''ಪೂರ್ತಿ ಕಾಣದವರಿಗೆ, ಅಲ್ಪಸ್ವಲ್ಪ ದೃಷ್ಟಿ ಇರುವವರು ಮೆರವಣಿಗೆ ವೀಕ್ಷಣೆ ವಿವರ ಹೇಳುತ್ತಾರೆ. ನಮಗೆ ಮತ್ತು ಮಕ್ಕಳಿಗೆ ಮೆರವಣಿಗೆ, ಕಲಾತಂಡ, ಜಾನಪದ ವಾದ್ಯದ ಝೇಂಕಾರ ಮತ್ತು ಕುಣಿತದ ಸದ್ದು ವಿನೂತನ ಅನುಭವ ನೀಡಿದೆ. ಇದೇ ವೇಳೆ ನಮ್ಮ ಜತೆಗಿರುವ ಕುಟುಂಬದವರು ಹೇಳುತ್ತಿದ್ದ ವಿವರಣೆ ನಾವು ಸ್ವತಃ ದಸರೆ ವೀಕ್ಷಣೆ ಮಾಡಿದಷ್ಟೆ ಖುಷಿ ನೀಡಿತು. ಸ್ತಬ್ಧಚಿತ್ರ ಮತ್ತು ಕಲಾತಂಡಗಳು ಮುಗಿಯುವ ವೇಳೆ ಅಂಬಾರಿ ಹೊತ್ತ ಅರ್ಜುನನ ನಡಿಗೆ, ಅವನ ಗಂಟೆ ಸದ್ದು ಜಂಬೂಸವಾರಿ ಮೆರವಣಿಗೆ ನಮ್ಮನ್ನು ಸಮೀಪಿಸಿತು ಎಂದು ಅರಿವಾಯಿತು. ದೇವಿಯ ದರ್ಶನ ಪಡೆದ ಜನರ ಉದ್ಗಾರ, ಜೈಕಾರಗಳಿಂದ ಪ್ರೇರಿತರಾದ ನಾವೂ ಜೈಕಾರ ಕೂಗಿದೆವು,'' ಎಂದು ದೃಷ್ಟಿ ವಿಶೇಷಚೇತನೆ, ಸಂಗೀತ ಶಿಕ್ಷಕಿ ನಾಗಶ್ರೀ ತಿಳಿಸಿದರು.
ಮತ್ತೊಂದು ಕಡೆಯೂ: ಜಂಬೂಸವಾರಿ ಸಾಗುವ ಆಯುರ್ವೇದ ಕಾಲೇಜು ಸಮೀಪವೂ ಕಲ್ಪವೃಕ್ಷ ಮತ್ತು ಜನಚೇತನ ಟ್ರಸ್ಟ್ನಿಂದ ವಿಶೇಷ ಚೇತನರು ದಸರಾ ವೀಕ್ಷಣೆಗೆ ಅನುಕೂಲ ವಾಗುವಂತೆ ಆಸನ ವ್ಯವಸ್ಥೆ ಮಾಡ ಲಾಗಿತ್ತು. ಸಂಪೂರ್ಣ ಮತ್ತು ಅರೆ ದೃಷ್ಟಿವುಳ್ಳ ಹಾಗೂ ಇತರೆ ವಿಶೇಷ ಚೇತನರು ದಸರಾ ಜಂಬೂಸವಾರಿಗೆ ಸಾಕ್ಷಿ ಯಾದರು. ಮೈಸೂರಿ ನಲ್ಲಿರುವ ದೃಷ್ಟಿ ವಿಶೇಷ ಚೇತನ ಶಾಲೆಗಳ ಮಕ್ಕಳು, ಇತರೆ ಜಿಲ್ಲೆಯ ವಿಶೇಷ ಚೇತನ ಮಕ್ಕಳು ತಮ್ಮದೇ ದೃಷ್ಟಿಯಲ್ಲಿ ದಸರಾ ವೀಕ್ಷಿಸಿ ದರು. ಕೆಲ ದೃಷ್ಟಿವಿಶೇಷಚೇತನರು ಇದೇ ಮೊದಲ ಬಾರಿಗೆ ದಸರಾ ವೀಕ್ಷಣೆಯ ಅನುಭವ ಪಡೆದು ಪುಳಕಿತರಾದರು.