ಮೈಸೂರು: ಕೆಆರ್ ನಗರಕ್ಕೆ ನಿರಂತರ ನೀರು..? ಮೀಟರ್ ಅಳವಡಿಕೆಗೆ ಪುರಸಭೆ ಸದಸ್ಯರ ಒಲವು
ಕೃಷ್ಣರಾಜನಗರ ಪಟ್ಟಣದಲ್ಲಿ ನಿರಂತರ ನೀರು ಸರಬರಾಜು ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದಿದ್ದು, ಜಲಮಂಡಳಿಯ ಅಧಿಕಾರಿಗಳ ಜೊತೆ ಸಭೆ ಬಳಿಕ ಈ ಬಗ್ಗೆ ತೀರ್ಮಾನಿಸುವುದಾಗಿ ಪುರಸಭೆ ಅಧ್ಯಕ್ಷರು ಹೇಳಿದ್ದಾರೆ. ಇನ್ನು, ಮೀಟರ್ ಅಳವಡಿಕೆಗೆ ಪುರಸಭೆ ಸದಸ್ಯರು ಒಲವು ವ್ಯಕ್ತಪಡಿಸಿದ್ದು, ನಿರಂತರ ನೀರು ಸರಬರಾಜಿಗೆ ಒತ್ತಾಯಿಸಿದ್ದಾರೆ.
Vijaya Karnataka Web 2 Dec 2020, 3:30 pm
ಕೃಷ್ಣರಾಜನಗರ: ಪುರಭೆಯ ಅಧಿಕಾರಿಗಳನ್ನೊಳಗೊಂಡಂತೆ ವಾರ್ಡಿನ ಸದಸ್ಯರ ಜೊತೆಗೂಡಿ ಖುದ್ದು ಪರಿಶೀಲನೆ ನಡೆಸಿ ನಗರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ ಹೇಳಿದರು. ಪುರಸಭೆಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯ ಉಮೇಶ್ ಮಾತನಾಡಿ, ಪಟ್ಟಣದಲ್ಲಿ ಮನೆ ಮತ್ತು ವಾಣಿಜ್ಯ ಬಳಕೆಗೆ ಸಂಪರ್ಕ ಪಡೆದಿರುವ ನಲ್ಲಿಗಳಿಗೆ ಮೀಟರ್ ಅಳವಡಿಸಿ ನಿರಂತರವಾಗಿ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಬಗ್ಗೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ನಟರಾಜು, ಶಿವು, ಕೆ.ಎಲ್.ಜಗದೀಶ್ ಮತ್ತು ಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಮೀಟರ್ ಅಳವಡಿಸುವುದಕ್ಕೆ ನಮ್ಮ ಬೆಂಬಲವಿದೆ. ಆದರೆ ನಿರಂತರ ನೀರು ಸರಬರಾಜು ಮಾಡಲು ಸಾಧ್ಯವೇ ಎಂಬ ಬಗ್ಗೆ ಮೊದಲು ಚಿಂತಿಸಿ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷರು ಮುಂದಿನ ಸಭೆಗೆ ಜಲ ಮಂಡಳಿಯ ಅಧಿಕಾರಿಗಳನ್ನು ಕರೆಯಿಸಿ ಇದರಿಂದ ಆಗುವ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚಿಸಿ ನಂತರ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದರು.
ಪಟ್ಟಣದ ಹಲವೆಡೆ ನೂರಾರು ಮಂದಿ ಅಕ್ರಮವಾಗಿ ರೈಸಿಂಗ್ ಮೇಯಿನ್ನಿಂದ ನೀರಿನ ಸಂಪರ್ಕ ಪಡೆದಿದ್ದು, ಅದನ್ನು ಪತ್ತೆ ಮಾಡಿ ಸಂಪರ್ಕ ಕಡಿತ ಮಾಡಬೇಕು ಎಂದು ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷ ಈ ಬಗ್ಗೆ ಕೂಡಲೇ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು: ಜಾತಿಗೆ ತೋರುವ ಕಾಳಜಿ ಭಾಷೆಗೇಕಿಲ್ಲ..? ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಬೇಸರ
ತಮ್ಮ ಮನೆ ಮತ್ತು ನಿವೇಶನಗಳ ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಅರ್ಜಿ ನೀಡಿದರೆ ಅಧಿಕಾರಿಗಳು ನಿಗದಿತವಾಗಿ ಕೆಲಸ ಮಾಡದೆ ಅಲೆಸುತ್ತಾರೆ ಮತ್ತು ಕೆಲವರು ಬ್ರೋಕರ್ಗಳನ್ನು ನೇಮಕ ಮಾಡಿಕೊಂಡಿದ್ದಾರೆಂದು ಕೆಲವು ಸದಸ್ಯರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪ್ರಸ್ತುತ ಖಾತೆಗಾಗಿ ಅರ್ಜಿ ಸಲ್ಲಿಸಿರುವವರಿಗೆ 15 ದಿನಗಳೊಳಗೆ ಕೆಲಸ ಮಾಡುವುದರ ಜತೆಗೆ ಮುಂದೆ ವಿಳಂಬವಾಗದಂತೆ ಗಮನ ಹರಿಸುವ ಭರವಸೆ ನೀಡಿದರು.
ಮೈಸೂರು: ಕಟ್ಟಡ ತ್ಯಾಜ್ಯ ವಿಲೇವಾರಿ ಪ್ಲಾಂಟ್ಗೆ ಅನುಮತಿ | ಸುದೀರ್ಘ ಚರ್ಚೆ ಬಳಿಕ ಪಾಲಿಕೆಯಿಂದ ಒಪ್ಪಿಗೆ
ಉಪಾಧ್ಯಕ್ಷೆ ಸೌಮ್ಯ, ಸದಸ್ಯ ಶಂಕರ, ಶಿವಕುಮಾರ್, ಮಂಜುಳ, ಪಲ್ಲವಿ, ಅಶ್ವಿನಿ, ವಸಂತಮ್ಮ, ಶಾರದಾ, ತೋಂಟದಾರ್ಯ, ವೀಣಾ, ಸೈಯದ್ಸಿದ್ದಿಕ್, ಅಪ್ರೋಜ್ಉನ್ನೀಸಾ, ಸಮುದಾಯ ಸಂಘಟನಾ ಅಧಿಕಾರಿ ಶಂಕರ್, ನಟರಾಜು ಮತ್ತಿತರರು ಹಾಜರಿದ್ದರು.
ಮೈಸೂರು: ಸರ್ವೆ ಇಲಾಖೆ ಸಮಸ್ಯೆ ಶೀಘ್ರ ಬಗೆಹರಿಸಿ | ಎಡಿಎಲ್ಆರ್ಗೆ ರೋಹಿಣಿ ಸಿಂಧೂರಿ ಸೂಚನೆ
ಸದಸ್ಯ ಉಮೇಶ್ ಮಾತನಾಡಿ, ಪಟ್ಟಣದಲ್ಲಿ ಮನೆ ಮತ್ತು ವಾಣಿಜ್ಯ ಬಳಕೆಗೆ ಸಂಪರ್ಕ ಪಡೆದಿರುವ ನಲ್ಲಿಗಳಿಗೆ ಮೀಟರ್ ಅಳವಡಿಸಿ ನಿರಂತರವಾಗಿ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಬಗ್ಗೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ನಟರಾಜು, ಶಿವು, ಕೆ.ಎಲ್.ಜಗದೀಶ್ ಮತ್ತು ಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಮೀಟರ್ ಅಳವಡಿಸುವುದಕ್ಕೆ ನಮ್ಮ ಬೆಂಬಲವಿದೆ. ಆದರೆ ನಿರಂತರ ನೀರು ಸರಬರಾಜು ಮಾಡಲು ಸಾಧ್ಯವೇ ಎಂಬ ಬಗ್ಗೆ ಮೊದಲು ಚಿಂತಿಸಿ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷರು ಮುಂದಿನ ಸಭೆಗೆ ಜಲ ಮಂಡಳಿಯ ಅಧಿಕಾರಿಗಳನ್ನು ಕರೆಯಿಸಿ ಇದರಿಂದ ಆಗುವ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚಿಸಿ ನಂತರ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದರು.
ಪಟ್ಟಣದ ಹಲವೆಡೆ ನೂರಾರು ಮಂದಿ ಅಕ್ರಮವಾಗಿ ರೈಸಿಂಗ್ ಮೇಯಿನ್ನಿಂದ ನೀರಿನ ಸಂಪರ್ಕ ಪಡೆದಿದ್ದು, ಅದನ್ನು ಪತ್ತೆ ಮಾಡಿ ಸಂಪರ್ಕ ಕಡಿತ ಮಾಡಬೇಕು ಎಂದು ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷ ಈ ಬಗ್ಗೆ ಕೂಡಲೇ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು: ಜಾತಿಗೆ ತೋರುವ ಕಾಳಜಿ ಭಾಷೆಗೇಕಿಲ್ಲ..? ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಬೇಸರ
ತಮ್ಮ ಮನೆ ಮತ್ತು ನಿವೇಶನಗಳ ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಅರ್ಜಿ ನೀಡಿದರೆ ಅಧಿಕಾರಿಗಳು ನಿಗದಿತವಾಗಿ ಕೆಲಸ ಮಾಡದೆ ಅಲೆಸುತ್ತಾರೆ ಮತ್ತು ಕೆಲವರು ಬ್ರೋಕರ್ಗಳನ್ನು ನೇಮಕ ಮಾಡಿಕೊಂಡಿದ್ದಾರೆಂದು ಕೆಲವು ಸದಸ್ಯರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪ್ರಸ್ತುತ ಖಾತೆಗಾಗಿ ಅರ್ಜಿ ಸಲ್ಲಿಸಿರುವವರಿಗೆ 15 ದಿನಗಳೊಳಗೆ ಕೆಲಸ ಮಾಡುವುದರ ಜತೆಗೆ ಮುಂದೆ ವಿಳಂಬವಾಗದಂತೆ ಗಮನ ಹರಿಸುವ ಭರವಸೆ ನೀಡಿದರು.
ಮೈಸೂರು: ಕಟ್ಟಡ ತ್ಯಾಜ್ಯ ವಿಲೇವಾರಿ ಪ್ಲಾಂಟ್ಗೆ ಅನುಮತಿ | ಸುದೀರ್ಘ ಚರ್ಚೆ ಬಳಿಕ ಪಾಲಿಕೆಯಿಂದ ಒಪ್ಪಿಗೆ
ಉಪಾಧ್ಯಕ್ಷೆ ಸೌಮ್ಯ, ಸದಸ್ಯ ಶಂಕರ, ಶಿವಕುಮಾರ್, ಮಂಜುಳ, ಪಲ್ಲವಿ, ಅಶ್ವಿನಿ, ವಸಂತಮ್ಮ, ಶಾರದಾ, ತೋಂಟದಾರ್ಯ, ವೀಣಾ, ಸೈಯದ್ಸಿದ್ದಿಕ್, ಅಪ್ರೋಜ್ಉನ್ನೀಸಾ, ಸಮುದಾಯ ಸಂಘಟನಾ ಅಧಿಕಾರಿ ಶಂಕರ್, ನಟರಾಜು ಮತ್ತಿತರರು ಹಾಜರಿದ್ದರು.
ಮೈಸೂರು: ಸರ್ವೆ ಇಲಾಖೆ ಸಮಸ್ಯೆ ಶೀಘ್ರ ಬಗೆಹರಿಸಿ | ಎಡಿಎಲ್ಆರ್ಗೆ ರೋಹಿಣಿ ಸಿಂಧೂರಿ ಸೂಚನೆ