ಸಾಲಬಾಧೆ: ಹೋಟೆಲ್ ಮಾಲೀಕ ಆತ್ಮಹತ್ಯೆ
ಬಡ್ಡಿ ದಂಧೆಗೆ ಹೆದರಿ ಹೋಟೆಲ್ ಮಾಲೀಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಅಗ್ನಿಶಾಮಕ ಠಾಣೆ ಎದುರಿನ ಹೊಸಬಡಾವಣೆಯಲ್ಲಿ ಬುಧವಾರ ಸಂಜೆ ನಡೆದಿದೆ.
Vijaya Karnataka 13 Dec 2018, 5:00 am
ಹುಣಸೂರು: ಬಡ್ಡಿ ದಂಧೆಗೆ ಹೆದರಿ ಹೋಟೆಲ್ ಮಾಲೀಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಅಗ್ನಿಶಾಮಕ ಠಾಣೆ ಎದುರಿನ ಹೊಸಬಡಾವಣೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮೂಲತಃ ಕೆ.ಆರ್.ನಗರ ನಿವಾಸಿ, ಅಗ್ನಿಶಾಮಕ ಠಾಣೆ ಎದುರಿನ ಹೊಸಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆಸಿಂ ಷರೀಫ್(45) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಪತ್ನಿ, ಒಬ್ಬ ಮಗ ಹಾಗೂ ಮಗಳಿದ್ದಾರೆ.
ಆಸಿಂ ಷರೀಫ್, ಮೈಸೂರು ರಸ್ತೆಯ ಹೆದ್ದಾರಿ ಬದಿಯ ಮೂಕನಹಳ್ಳಿ ಗೇಟ್ನಲ್ಲಿ ಕೆಲ ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದರು. ಕೆ.ಆರ್.ನಗರದಿಂದ ಪತ್ನಿಯೊಂದಿಗೆ ಕೆಲ ವರ್ಷಗಳ ಹಿಂದೆ ಹುಣಸೂರಿಗೆ ಬಂದು ನಗರದ ಹೊರವಲಯದ ಹೊಸ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆ.ಆರ್.ನಗರದ ಸ್ನೇಹಿತರೊಬ್ಬರಿಂದ ಹಣ ಪಡೆದಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಅಲ್ಲದೆ ಹುಣಸೂರಿನ ಇಬ್ಬರಿಂದಲೂ ಸಾಲ ಪಡೆದಿದ್ದರು. ನಿತ್ಯ ಸಂಜೆ ವೇಳೆ ಹೋಟೆಲ್ ಬಳಿಗೆ ಆಗಮಿಸುತ್ತಿದ್ದ ಇವರು ಹಣ ವಾಪಸ್ ನೀಡುವಂತೆ ಪೀಡಿಸುತ್ತಿದ್ದರು. ಮತ್ತೊಂದೆಡೆ ಸಾಲ ನೀಡಿದ್ದ ಕೆ.ಆರ್.ನಗರದ ವ್ಯಕ್ತಿ ಹಾಕಿದ್ದ ದಾವೆಯಿಂದ ನನ್ನ ಪತಿ ಹೆದರಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ನೀಡಿದ್ದ ಮೂವರು ನೀಡುತ್ತಿದ್ದ ಕಿರುಕುಳವೇ ನನ್ನ ಪತಿಯ ಸಾವಿಗೆ ಕಾರಣ. ಸಾವಿಗೆ ಮುನ್ನ ಪತಿ ಬರೆದಿಟ್ಟ ಪತ್ರದಲ್ಲಿ ಇದನ್ನು ತಿಳಿಸಿದ್ದಾರೆ ಎಂದು ಆಸಿಂ ಷರೀಫ್ ಅವರ ಪತ್ನಿ ಅಂಜುಂ ಆರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿಭಟನೆಗೆ ಮುಂದು: ಆತ್ಮಹತ್ಯೆ ಹಿನ್ನೆಲೆಯಲ್ಲಿ ಆಸಿಂ ಷರೀಫ್ ಅವರ ಕಡೆಯವರು ಪ್ರತಿಭಟನೆಗೆ ಮುಂದಾದರು. ಕೆ.ಆರ್.ನಗರದ ಅತೀಕ್, ನಗರಸಭೆ ಅಧ್ಯಕ್ಷ ಅಯೂಬ್ ಖಾನ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸ್ನೇಹಿತರು, ಸಂಬಂಧಿಕರು ಆಸಿಂ ಅವರ ಶವವನ್ನು ಖಾಸಗಿ ಆಂಬ್ಯುಲೆನ್ಸ್ ನಲ್ಲಿ ನಗರ ಠಾಣೆ ಬಳಿಗೆ ತಂದು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಎಸ್ಐ ದೊಡ್ಡೇಗೌಡ ಪ್ರಕರಣದ ಬಗ್ಗೆ ದೂರು ನೀಡಿದ್ದು, ತಪ್ಪಿಸ್ಥರ ವಿರುದ್ಧ ನಿರ್ದಾಕ್ಷ ್ಯಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡ ಆತಂಕಕ್ಕೊಳಗಾಗಬಾರದೆಂದು ಮನವಿ ಮಾಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಮೂಲತಃ ಕೆ.ಆರ್.ನಗರ ನಿವಾಸಿ, ಅಗ್ನಿಶಾಮಕ ಠಾಣೆ ಎದುರಿನ ಹೊಸಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆಸಿಂ ಷರೀಫ್(45) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಪತ್ನಿ, ಒಬ್ಬ ಮಗ ಹಾಗೂ ಮಗಳಿದ್ದಾರೆ.
ಆಸಿಂ ಷರೀಫ್, ಮೈಸೂರು ರಸ್ತೆಯ ಹೆದ್ದಾರಿ ಬದಿಯ ಮೂಕನಹಳ್ಳಿ ಗೇಟ್ನಲ್ಲಿ ಕೆಲ ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದರು. ಕೆ.ಆರ್.ನಗರದಿಂದ ಪತ್ನಿಯೊಂದಿಗೆ ಕೆಲ ವರ್ಷಗಳ ಹಿಂದೆ ಹುಣಸೂರಿಗೆ ಬಂದು ನಗರದ ಹೊರವಲಯದ ಹೊಸ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆ.ಆರ್.ನಗರದ ಸ್ನೇಹಿತರೊಬ್ಬರಿಂದ ಹಣ ಪಡೆದಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಅಲ್ಲದೆ ಹುಣಸೂರಿನ ಇಬ್ಬರಿಂದಲೂ ಸಾಲ ಪಡೆದಿದ್ದರು. ನಿತ್ಯ ಸಂಜೆ ವೇಳೆ ಹೋಟೆಲ್ ಬಳಿಗೆ ಆಗಮಿಸುತ್ತಿದ್ದ ಇವರು ಹಣ ವಾಪಸ್ ನೀಡುವಂತೆ ಪೀಡಿಸುತ್ತಿದ್ದರು. ಮತ್ತೊಂದೆಡೆ ಸಾಲ ನೀಡಿದ್ದ ಕೆ.ಆರ್.ನಗರದ ವ್ಯಕ್ತಿ ಹಾಕಿದ್ದ ದಾವೆಯಿಂದ ನನ್ನ ಪತಿ ಹೆದರಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ನೀಡಿದ್ದ ಮೂವರು ನೀಡುತ್ತಿದ್ದ ಕಿರುಕುಳವೇ ನನ್ನ ಪತಿಯ ಸಾವಿಗೆ ಕಾರಣ. ಸಾವಿಗೆ ಮುನ್ನ ಪತಿ ಬರೆದಿಟ್ಟ ಪತ್ರದಲ್ಲಿ ಇದನ್ನು ತಿಳಿಸಿದ್ದಾರೆ ಎಂದು ಆಸಿಂ ಷರೀಫ್ ಅವರ ಪತ್ನಿ ಅಂಜುಂ ಆರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿಭಟನೆಗೆ ಮುಂದು: ಆತ್ಮಹತ್ಯೆ ಹಿನ್ನೆಲೆಯಲ್ಲಿ ಆಸಿಂ ಷರೀಫ್ ಅವರ ಕಡೆಯವರು ಪ್ರತಿಭಟನೆಗೆ ಮುಂದಾದರು. ಕೆ.ಆರ್.ನಗರದ ಅತೀಕ್, ನಗರಸಭೆ ಅಧ್ಯಕ್ಷ ಅಯೂಬ್ ಖಾನ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸ್ನೇಹಿತರು, ಸಂಬಂಧಿಕರು ಆಸಿಂ ಅವರ ಶವವನ್ನು ಖಾಸಗಿ ಆಂಬ್ಯುಲೆನ್ಸ್ ನಲ್ಲಿ ನಗರ ಠಾಣೆ ಬಳಿಗೆ ತಂದು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಎಸ್ಐ ದೊಡ್ಡೇಗೌಡ ಪ್ರಕರಣದ ಬಗ್ಗೆ ದೂರು ನೀಡಿದ್ದು, ತಪ್ಪಿಸ್ಥರ ವಿರುದ್ಧ ನಿರ್ದಾಕ್ಷ ್ಯಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡ ಆತಂಕಕ್ಕೊಳಗಾಗಬಾರದೆಂದು ಮನವಿ ಮಾಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.