ಆ್ಯಪ್ನಗರ

ತಂತಿಬೇಲಿ ಹಾರಲು ಯತ್ನಿಸಿದ ಜಿಂಕೆ ಸಾವು

ಮೈಸೂರಿನ ಹೊರ ವಲಯದಲ್ಲಿರುವ ಬೋಗಾದಿಯ ಮರಿಯಪ್ಪನ ಕೆರೆಯ ಬಳಿ ಆಳೆತ್ತರದ ತಂತಿ ಬೇಲಿ ಹಾರಲು ಯತ್ನಿಸಿದ ಜಿಂಕೆ ಮಂಗಳವಾರ ರಾತ್ರಿ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದೆ.

Vijaya Karnataka 31 Aug 2017, 9:00 am

ಮೈಸೂರು: ಮೈಸೂರಿನ ಹೊರ ವಲಯದಲ್ಲಿರುವ ಬೋಗಾದಿಯ ಮರಿಯಪ್ಪನ ಕೆರೆಯ ಬಳಿ ಆಳೆತ್ತರದ ತಂತಿ ಬೇಲಿ ಹಾರಲು ಯತ್ನಿಸಿದ ಜಿಂಕೆ ಮಂಗಳವಾರ ರಾತ್ರಿ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದೆ.

ಬುಧವಾರ ಬೆಳಗ್ಗೆ ವಾಯು ವಿಹಾರಿಗಳು, ಜಿಂಕೆ ಸತ್ತು ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಜಿಂಕೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಅರಣ್ಯ ಭವನದ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಎಸಿಎಫ್‌ ಪ್ರಕಾಶ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ