ಆ್ಯಪ್ನಗರ

ಭಗವಾನ್‌ ವಿರುದ್ಧದ ಪ್ರಕರಣ ವಜಾಕ್ಕೆ ಆಗ್ರಹ

ಭಗವಾನ್‌ ವಿರುದ್ಧದ ಪ್ರಕರಣ ವಜಾಕ್ಕೆ ಆಗ್ರಹ ವಿಕ ಸುದ್ದಿಲೋಕ ಮೈಸೂರು ಸಾಹಿತಿ ಕೆಎಸ್‌...

Vijaya Karnataka 6 Jan 2019, 5:00 am
ಮೈಸೂರು: ಸಾಹಿತಿ ಕೆ.ಎಸ್‌.ಭಗವಾನ್‌ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಕಾಯಕ ಸಮಾಜಗಳ ಒಕ್ಕೂಟ, ದಲಿತ ವೇಲ್‌ಫೇರ್‌ ಟ್ರಸ್ಟ್‌ ಆಗ್ರಹಿಸಿದವು.
Vijaya Karnataka Web demanded take back case against bhagwan has
ಭಗವಾನ್‌ ವಿರುದ್ಧದ ಪ್ರಕರಣ ವಜಾಕ್ಕೆ ಆಗ್ರಹ


ಭಗವಾನ್‌ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಿರುವುದನ್ನು ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿದರು.

''ನಮಗೂ ಮಾತನಾಡುವ, ಬರೆಯುವ, ವಿಮರ್ಶಿಸುವ, ಸಂಶೋಧಿಸುವ, ಚರ್ಚಿಸುವ ಸ್ವಾತಂತ್ರವಿದ್ದು, ಅದನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ನಾವ್ಯಾರೂ ಹಿಂದೂ ಧರ್ಮ ವಿರೋಧಿಗಳಲ್ಲ. ಹಿಂದೂ ಧರ್ಮವನ್ನು ಯಾರೂ ಗುತ್ತಿಗೆ ಪಡೆದಿಲ್ಲ, ಗುತ್ತಿಗೆ ಪಡೆದವರಂತೆ ಹೋರಾಡುವವರ ವಿರುದ್ಧ ತಾವು ಪ್ರತಿ ಹೋರಾಟ ನಡೆಸಬೇಕಾಗುವುದು,'' ಎಂದು ಎಚ್ಚರಿಕೆ ನೀಡಿದರು.

ದಲಿತ ವೆಲ್‌ ಫೆರ್‌ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಮಾತನಾಡಿ, ''ಭಗವಾನ್‌ ಅವರ 'ರಾಮಮಂದಿರ ಏಕೆ ಬೇಡ' ಪುಸ್ತಕ ಪ್ರಕಟಗೊಂಡು ಆಗಲೇ ಆರು ತಿಂಗಳೇ ಕಳೆದಿವೆ. ಅದರ ಎರಡನೇ ಆವೃತ್ತಿಯೂ ಇನ್ನೂ ಕೆಲವೇ ದಿನಗಳಲ್ಲಿ ಹೊರಬರಲಿದೆ. ಹೀಗಿದ್ದರೂ ಈಗ ಏಕೆ ಈ ಹೋರಾಟ,''ಎಂದು ಪ್ರಶ್ನಿಸಿದರು. ''ಭಗವಾನ್‌ ವಿರುದ್ಧ ದಾಖಲಾಗಿರುವ ದೂರನ್ನು ಕೂಡಲೇ ರದ್ದುಗೊಳಿಸಬೇಕೆಂದು,''ಆಗ್ರಹಿಸಿದರು. ಗೋಷ್ಠಿಯಲ್ಲಿ ನಂಜುಂಡಸ್ವಾಮಿ, ಬೋರಪ್ಪ ಶೆಟ್ಟಿ, ಚಿಕ್ಕಂದಾನಿ, ರವೀಶ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ