ಮೈಸೂರು: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಗುರುವಾರ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಚಿವರು ಮಾತ್ರ ನಗರದ ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯಿಗೆ ಒಳಪಡುವ ತಾವರೆಕಟ್ಟೆಗಷ್ಟೇ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು ಅಚ್ಚರಿ ಮೂಡಿಸಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರಕೃತಿ ವಿಕೋಪ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಸಭೆ ನಡೆಸಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು, ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ಜಿಲ್ಲೆಯ ಪ್ರಕೃತಿ ವಿಕೋಪ ಸ್ಥಳಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮಳೆ ಪರಿಣಾಮ ಎದುರಿಸದ, ಹಾನಿಗೂ ಒಳಗಾಗದ, ನಗರಕ್ಕೆ ಹತ್ತಿರದಲ್ಲೇ ಇರುವ ತಾವರೆಕಟ್ಟೆ ಗ್ರಾಮಕ್ಕೆ ಸಚಿವರು ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಆಲಿಸಿದರು. ಹಾಗೇ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ಮುಂಗಾರು ಇನ್ನೂ ಸದ್ದು ಮಾಡಿಲ್ಲ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆಯ ಕೆಲವೊಂದು ಗ್ರಾಮದಲ್ಲಿ ಮಳೆ ಹಾನಿ ವರದಿಯಾಗಿದೆ. ಕೆಲವೆಡೆ ಸಕಾಲಕ್ಕೆ ಬಾರದ ಮಳೆಯಿಂದ ಬೆಳೆ ನಷ್ಟವಾಗಿದ್ದು, ಈ ಬಗ್ಗೆ ಕೃಷಿ ಇಲಾಖೆಯೂ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಸಚಿವರು ಮೈಸೂರಿನಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ತಾವರೆಕಟ್ಟೆಗೆ ಭೇಟಿ ನೀಡಿದರು. ಚಾಮುಂಡಿಬೆಟ್ಟಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಸಚಿವರು 'ನಾಮ್ ಕೆ ವಾಸ್ತೆ' ಎಂಬಂತೆ ಬೆಟ್ಟದ ಕೆಳಗಿರುವ ತಾವರೆಕಟ್ಟೆಗೆ ಭೇಟಿ ನೀಡಿ ರಸ್ತೆ ಮಧ್ಯೆಯೇ ಗ್ರಾಮಸ್ಥರ ಅಹವಾಲು ಆಲಿಸಿ ತರಾತುರಿಯಲ್ಲೇ ಅಲ್ಲಿಂದ ತೆರಳಿದರು.
ನೀರಿನ ಸಮಸ್ಯೆ: ನಮ್ಮ ಗ್ರಾಮಕ್ಕಿರುವುದು ಒಂದೇ ಬೋರ್ವೆಲ್. ಅದು ಕೆಟ್ಟು ನಿಂತಿದೆ. ಇದೀಗ ಹೊಸ ಪೈಪ್ಲೈನ್ನಿಂದಲೂ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ. ಜತೆಗೆ ನಮ್ಮ ಮನೆಗಳಿಗೆ ಹೊಸ ಖಾತೆ ಮಾಡಿಕೊಡುತ್ತಿಲ್ಲ....
ತಾವರಕಟ್ಟೆ ಗ್ರಾಮಸ್ಥರು ಗುರುವಾರ ಕಂದಾಯ ಸಚಿವರ ಎದುರು ಸಮಸ್ಯೆಗಳ ಸರಮಾಲೆಯನ್ನೇ ಹರವಿಕೊಂಡರು. ಇದನ್ನು ಆಲಿಸಿದ ಸಚಿವರು, ಡಿಸಿ ವಿರುದ್ಧ ಸಿಡಿಮಿಡಿಗೊಂಡರು. ಸಮಸ್ಯೆ ಪರಿಹರಿಸುವಂತೆ ತಾಕೀತು ಮಾಡಿದರು.
ಕಾವೇರಿ ನೀರು ಕೊಡಿ: ''ನಮ್ಮ ಗ್ರಾಮಕ್ಕೆ 35 ವರ್ಷದಿಂದ ಒಂದೇ ಹಳೆ ಪೈಪ್ಲೈನ್ ಇತ್ತು. ಸದ್ಯ ಅದು ಕೆಟ್ಟು ನಿಂತಿದೆ. ತಾವರೆಕಟ್ಟೆ ಗ್ರಾಮದಲ್ಲಿ 74 ಮನೆಗಳಿವೆ. 750 ಜನ ವಾಸ ಮಾಡುತ್ತಿದ್ದಾರೆ. ಸದ್ಯ ಗ್ರಾ.ಪಂ.ವತಿಯಿಂದ 5 ಲಕ್ಷ ರೂ.ವೆಚ್ಚದಲ್ಲಿ ಹೊಸ ಪೈಪ್ಲೈನ್ ಎಳೆದಿದ್ದಾರೆ. ಆದರೆ, 1 ಕಿ.ಮೀ. ದೂರದಿಂದ ಅದನ್ನು ಅಳವಡಿಸಿರುವುದರಿಂದ ನೀರಿನ ಒತ್ತಡ ಕಡಿಮೆ ಇದೆ. ಈಗಾಗಲೇ ಬೋರ್ವೆಲ್ನಲ್ಲಿ ನಲ್ಲಿಯಲ್ಲಿ ಬರುವಂತೆ ನೀರು ಬರುತ್ತದೆ. ಅಲ್ಲದೆ, ಇಲ್ಲಿನ ಎಸ್ಡಿಎಂ ಕಾಲೇಜಿನವರೆಗೆ ಕಾವೇರಿ ನೀರು ಬರುತ್ತದೆ. ಕೂಗಳತೆ ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಕಾವೇರಿ ನೀರಿನ ಪೂರೈಕೆ ಲಭ್ಯವಿಲ್ಲ,'' ಎಂದು ಗ್ರಾಮಸ್ಥರಾದ ಗೀತಾ ದೂರಿದರು.
ಅಂದಾಜು ಪಟ್ಟಿ ಕೊಡಿ: ಗ್ರಾಮಸ್ಥರ ಅಹವಾಲು ಕೇಳಿದ ಸಚಿವ ಆರ್.ವಿ.ದೇಶಪಾಂಡೆ ಅವರು, ಸ್ಥಳದಲ್ಲೇ ಇದ್ದ ಸಿಇಒ ಜ್ಯೋತಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಅಲ್ಲದೆ, ಕಾವೇರಿ ನೀರು ಕೊಡುವ ಸಂಬಂಧ ಅಂದಾಜು ಪಟ್ಟಿಯನ್ನು ಇನ್ನು 1 ಗಂಟೆಯಲ್ಲಿ ನೀಡುವಂತೆ ತಾಕೀತು ಮಾಡಿದರು.
ಡಿಸಿ ವಿರುದ್ಧ ಗರಂ: ''ಎಷ್ಟೋ ವರ್ಷಗಳಿಂದ ನಾವಿಲ್ಲಿ ವಾಸವಾಗಿದ್ದೇವೆ. ಆದರೆ, 2017ರಲ್ಲಿ ಜಿಲ್ಲಾಧಿಕಾರಿ ಅವರು ಇಲ್ಲಿನ ಮನೆಗಳಿಗೆ ಹೊಸ ಖಾತೆ ಮಾಡಬೇಡಿ ಎಂದು ಆದೇಶ ಹೊರಡಿಸಿದ್ದಾರೆ. ಇದರಿಂದ ತಾತನಿಂದ ಅಪ್ಪ, ಅಪ್ಪನಿಂದ ಮಗನಿಗೆ ಮನೆ ಖಾತೆ ಬದಲಾಯಿಸಲು ಆಗಿಲ್ಲ. ಆದಷ್ಟು ಬೇಗ ನಮ್ಮ ಮನೆಗಳಿಗೆ ಹೊಸ ಖಾತೆ ಮಾಡಿಕೊಡಿ,'' ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು.
ಸಿಡಿಮಿಡಿಕೊಂಡ ಸಚಿವರು, ''ಏಕೆ ಖಾತೆ ಮಾಡಿಕೊಟ್ಟಿಲ್ಲ. ನಾಗರಿಕರ ಸಮಸ್ಯೆ ಬಗೆಹರಿಸುತ್ತಿಲ್ಲವೇಕೆ,'' ಎಂದು ಡಿಸಿ ವಿರುದ್ಧ ಗರಂ ಆದರು. ''ಈ ಕೆಲಸವನ್ನು ಚಿಕ್ಕ ಮಕ್ಕಳು ಮಾಡುತ್ತಿದ್ದರು. ನಿಮ್ಮ ಕೈಯಲ್ಲಿ ಏಕೆ ಸಾಧ್ಯವಾಗಿಲ್ಲ,'' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿ ಅಭಿರಾಮ್ ಜಿ.ಶಂಕರ್, ''ಈ ಗ್ರಾಮ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಜಂಟಿ ಸರ್ವೆ ನಡೆಸಿ ಖಾತೆ ಮಾಡಿಕೊಡಬೇಕಿದೆ,'' ಎಂದರು. ಆದಷ್ಟು ಬೇಗ ಅದನ್ನು ಮಾಡಿ ''ನಾಗರಿಕರನ್ನು ಅಲೆಸಬೇಡಿ, ಸಮಸ್ಯೆ ಬಗೆಹರಿಸಿ,'' ಎಂದು ಖಡಕ್ ಸೂಚನೆ ನೀಡಿದರು.
ಮಣ್ಣು ಅಕ್ರಮ ಸಾಗಣೆ?: ತಾವರಕಟ್ಟೆ ಕೆರೆ ಹೂಳೆತ್ತಲು ಸಿಎಸ್ಆರ್ ಫಂಡ್ ಮಂಜೂರಾಗಿತ್ತು. ಎರಡು ಮೂಕ್ಕಾಲು ಅಡಿ ತೆಗೆಯಬೇಕೆಂದು ಮೊದಲೇ ಸೂಚನೆ ನೀಡಿದ್ದರು. ಆದರೆ, ಅಲ್ಲಿದ್ದ ಮಣ್ಣನ್ನು ಒಡೆದು 5 ಅಡಿ ಕೊರೆಯಲಾಗಿದೆ. ಇಟ್ಟಿಗೆ ಕಾರ್ಖಾನೆಗೆ ಇಲ್ಲಿಂದ ಮಣ್ಣನ್ನು ರಾತ್ರೋರಾತ್ರಿ ಸಾಗಿಸಲಾಗಿದೆ ಎಂದು ಗ್ರಾಮಸ್ಥ ರಮೇಶ್ ಬಾಬು ದೂರಿದರು. ಈ ಬಗ್ಗೆ ಹೋರಾಟ, ಪ್ರತಿಭಟನೆ ಮಾಡಿ ಡಿಸಿ ಅವರಿಗೆ ಮನವಿ ಕೊಟ್ಟರು ಏನು ಪ್ರಯೋಜನವಾಗಿಲ್ಲ ಎಂದು ದೂರಿದರು. ಅಲ್ಲದೆ, ಸಚಿವ ಆರ್.ವಿ.ದೇಶಪಾಂಡೆ ಅವರಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಸಿಇಒ ಜ್ಯೋತಿ, ಮಾಜಿ ಶಾಸಕ ವಾಸು ಇದ್ದರು.
ಚಾಮುಂಡಿಬೆಟ್ಟಕ್ಕೆ ವಿಶೇಷ ಪೂಜೆ
ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮೈಸೂರಿನ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೇವಸ್ಥಾನದ ಮುಖ್ಯ ಆಗಮಿಕರಾದ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಸಚಿವ ಆರ್.ವಿ ದೇಶಪಾಂಡೆ ಅವರು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ''ರಾಜ್ಯದಲ್ಲಿ ಕಳೆದ 18 ವರ್ಷಗಳಿಂದ ಸರಿಯಾಗಿ ಮಳೆಯಾಗಿಲ್ಲ.4 ವರ್ಷ ಮಾತ್ರ ಮಳೆಯಾಗಿದೆ. ಹೆಚ್ಚಿನ ಮಳೆಯಾಗಲಿ ಎಂದು ಈಶ್ವರ ಹಾಗೂ ತಾಯಿ ಚಾಮುಂಡಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಒಂದು ಕಡೆ ಬರಗಾಲ ಇದೆ. ಮತ್ತೊಂದು ಕಡೆ ಅತಿವೃಷ್ಟಿ. ಇದನ್ನು ನಿವಾರಣೆ ಮಾಡಲು ದೇವರ ಅನುಗ್ರಹ ಮುಖ್ಯ ಹಾಗಾಗಿ ದೇವರ ಪ್ರಾರ್ಥನೆಯೊಂದಿಗೆ ಇಂದಿನ ಕಾರ್ಯ ಪ್ರಾರಂಭಿಸಿದ್ದೇನೆ,'' ಎಂದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರಕೃತಿ ವಿಕೋಪ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಸಭೆ ನಡೆಸಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು, ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ಜಿಲ್ಲೆಯ ಪ್ರಕೃತಿ ವಿಕೋಪ ಸ್ಥಳಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮಳೆ ಪರಿಣಾಮ ಎದುರಿಸದ, ಹಾನಿಗೂ ಒಳಗಾಗದ, ನಗರಕ್ಕೆ ಹತ್ತಿರದಲ್ಲೇ ಇರುವ ತಾವರೆಕಟ್ಟೆ ಗ್ರಾಮಕ್ಕೆ ಸಚಿವರು ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಆಲಿಸಿದರು. ಹಾಗೇ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ಮುಂಗಾರು ಇನ್ನೂ ಸದ್ದು ಮಾಡಿಲ್ಲ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆಯ ಕೆಲವೊಂದು ಗ್ರಾಮದಲ್ಲಿ ಮಳೆ ಹಾನಿ ವರದಿಯಾಗಿದೆ. ಕೆಲವೆಡೆ ಸಕಾಲಕ್ಕೆ ಬಾರದ ಮಳೆಯಿಂದ ಬೆಳೆ ನಷ್ಟವಾಗಿದ್ದು, ಈ ಬಗ್ಗೆ ಕೃಷಿ ಇಲಾಖೆಯೂ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಸಚಿವರು ಮೈಸೂರಿನಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ತಾವರೆಕಟ್ಟೆಗೆ ಭೇಟಿ ನೀಡಿದರು. ಚಾಮುಂಡಿಬೆಟ್ಟಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಸಚಿವರು 'ನಾಮ್ ಕೆ ವಾಸ್ತೆ' ಎಂಬಂತೆ ಬೆಟ್ಟದ ಕೆಳಗಿರುವ ತಾವರೆಕಟ್ಟೆಗೆ ಭೇಟಿ ನೀಡಿ ರಸ್ತೆ ಮಧ್ಯೆಯೇ ಗ್ರಾಮಸ್ಥರ ಅಹವಾಲು ಆಲಿಸಿ ತರಾತುರಿಯಲ್ಲೇ ಅಲ್ಲಿಂದ ತೆರಳಿದರು.
ನೀರಿನ ಸಮಸ್ಯೆ: ನಮ್ಮ ಗ್ರಾಮಕ್ಕಿರುವುದು ಒಂದೇ ಬೋರ್ವೆಲ್. ಅದು ಕೆಟ್ಟು ನಿಂತಿದೆ. ಇದೀಗ ಹೊಸ ಪೈಪ್ಲೈನ್ನಿಂದಲೂ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ. ಜತೆಗೆ ನಮ್ಮ ಮನೆಗಳಿಗೆ ಹೊಸ ಖಾತೆ ಮಾಡಿಕೊಡುತ್ತಿಲ್ಲ....
ತಾವರಕಟ್ಟೆ ಗ್ರಾಮಸ್ಥರು ಗುರುವಾರ ಕಂದಾಯ ಸಚಿವರ ಎದುರು ಸಮಸ್ಯೆಗಳ ಸರಮಾಲೆಯನ್ನೇ ಹರವಿಕೊಂಡರು. ಇದನ್ನು ಆಲಿಸಿದ ಸಚಿವರು, ಡಿಸಿ ವಿರುದ್ಧ ಸಿಡಿಮಿಡಿಗೊಂಡರು. ಸಮಸ್ಯೆ ಪರಿಹರಿಸುವಂತೆ ತಾಕೀತು ಮಾಡಿದರು.
ಕಾವೇರಿ ನೀರು ಕೊಡಿ: ''ನಮ್ಮ ಗ್ರಾಮಕ್ಕೆ 35 ವರ್ಷದಿಂದ ಒಂದೇ ಹಳೆ ಪೈಪ್ಲೈನ್ ಇತ್ತು. ಸದ್ಯ ಅದು ಕೆಟ್ಟು ನಿಂತಿದೆ. ತಾವರೆಕಟ್ಟೆ ಗ್ರಾಮದಲ್ಲಿ 74 ಮನೆಗಳಿವೆ. 750 ಜನ ವಾಸ ಮಾಡುತ್ತಿದ್ದಾರೆ. ಸದ್ಯ ಗ್ರಾ.ಪಂ.ವತಿಯಿಂದ 5 ಲಕ್ಷ ರೂ.ವೆಚ್ಚದಲ್ಲಿ ಹೊಸ ಪೈಪ್ಲೈನ್ ಎಳೆದಿದ್ದಾರೆ. ಆದರೆ, 1 ಕಿ.ಮೀ. ದೂರದಿಂದ ಅದನ್ನು ಅಳವಡಿಸಿರುವುದರಿಂದ ನೀರಿನ ಒತ್ತಡ ಕಡಿಮೆ ಇದೆ. ಈಗಾಗಲೇ ಬೋರ್ವೆಲ್ನಲ್ಲಿ ನಲ್ಲಿಯಲ್ಲಿ ಬರುವಂತೆ ನೀರು ಬರುತ್ತದೆ. ಅಲ್ಲದೆ, ಇಲ್ಲಿನ ಎಸ್ಡಿಎಂ ಕಾಲೇಜಿನವರೆಗೆ ಕಾವೇರಿ ನೀರು ಬರುತ್ತದೆ. ಕೂಗಳತೆ ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಕಾವೇರಿ ನೀರಿನ ಪೂರೈಕೆ ಲಭ್ಯವಿಲ್ಲ,'' ಎಂದು ಗ್ರಾಮಸ್ಥರಾದ ಗೀತಾ ದೂರಿದರು.
ಅಂದಾಜು ಪಟ್ಟಿ ಕೊಡಿ: ಗ್ರಾಮಸ್ಥರ ಅಹವಾಲು ಕೇಳಿದ ಸಚಿವ ಆರ್.ವಿ.ದೇಶಪಾಂಡೆ ಅವರು, ಸ್ಥಳದಲ್ಲೇ ಇದ್ದ ಸಿಇಒ ಜ್ಯೋತಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಅಲ್ಲದೆ, ಕಾವೇರಿ ನೀರು ಕೊಡುವ ಸಂಬಂಧ ಅಂದಾಜು ಪಟ್ಟಿಯನ್ನು ಇನ್ನು 1 ಗಂಟೆಯಲ್ಲಿ ನೀಡುವಂತೆ ತಾಕೀತು ಮಾಡಿದರು.
ಡಿಸಿ ವಿರುದ್ಧ ಗರಂ: ''ಎಷ್ಟೋ ವರ್ಷಗಳಿಂದ ನಾವಿಲ್ಲಿ ವಾಸವಾಗಿದ್ದೇವೆ. ಆದರೆ, 2017ರಲ್ಲಿ ಜಿಲ್ಲಾಧಿಕಾರಿ ಅವರು ಇಲ್ಲಿನ ಮನೆಗಳಿಗೆ ಹೊಸ ಖಾತೆ ಮಾಡಬೇಡಿ ಎಂದು ಆದೇಶ ಹೊರಡಿಸಿದ್ದಾರೆ. ಇದರಿಂದ ತಾತನಿಂದ ಅಪ್ಪ, ಅಪ್ಪನಿಂದ ಮಗನಿಗೆ ಮನೆ ಖಾತೆ ಬದಲಾಯಿಸಲು ಆಗಿಲ್ಲ. ಆದಷ್ಟು ಬೇಗ ನಮ್ಮ ಮನೆಗಳಿಗೆ ಹೊಸ ಖಾತೆ ಮಾಡಿಕೊಡಿ,'' ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು.
ಸಿಡಿಮಿಡಿಕೊಂಡ ಸಚಿವರು, ''ಏಕೆ ಖಾತೆ ಮಾಡಿಕೊಟ್ಟಿಲ್ಲ. ನಾಗರಿಕರ ಸಮಸ್ಯೆ ಬಗೆಹರಿಸುತ್ತಿಲ್ಲವೇಕೆ,'' ಎಂದು ಡಿಸಿ ವಿರುದ್ಧ ಗರಂ ಆದರು. ''ಈ ಕೆಲಸವನ್ನು ಚಿಕ್ಕ ಮಕ್ಕಳು ಮಾಡುತ್ತಿದ್ದರು. ನಿಮ್ಮ ಕೈಯಲ್ಲಿ ಏಕೆ ಸಾಧ್ಯವಾಗಿಲ್ಲ,'' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿ ಅಭಿರಾಮ್ ಜಿ.ಶಂಕರ್, ''ಈ ಗ್ರಾಮ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಜಂಟಿ ಸರ್ವೆ ನಡೆಸಿ ಖಾತೆ ಮಾಡಿಕೊಡಬೇಕಿದೆ,'' ಎಂದರು. ಆದಷ್ಟು ಬೇಗ ಅದನ್ನು ಮಾಡಿ ''ನಾಗರಿಕರನ್ನು ಅಲೆಸಬೇಡಿ, ಸಮಸ್ಯೆ ಬಗೆಹರಿಸಿ,'' ಎಂದು ಖಡಕ್ ಸೂಚನೆ ನೀಡಿದರು.
ಮಣ್ಣು ಅಕ್ರಮ ಸಾಗಣೆ?: ತಾವರಕಟ್ಟೆ ಕೆರೆ ಹೂಳೆತ್ತಲು ಸಿಎಸ್ಆರ್ ಫಂಡ್ ಮಂಜೂರಾಗಿತ್ತು. ಎರಡು ಮೂಕ್ಕಾಲು ಅಡಿ ತೆಗೆಯಬೇಕೆಂದು ಮೊದಲೇ ಸೂಚನೆ ನೀಡಿದ್ದರು. ಆದರೆ, ಅಲ್ಲಿದ್ದ ಮಣ್ಣನ್ನು ಒಡೆದು 5 ಅಡಿ ಕೊರೆಯಲಾಗಿದೆ. ಇಟ್ಟಿಗೆ ಕಾರ್ಖಾನೆಗೆ ಇಲ್ಲಿಂದ ಮಣ್ಣನ್ನು ರಾತ್ರೋರಾತ್ರಿ ಸಾಗಿಸಲಾಗಿದೆ ಎಂದು ಗ್ರಾಮಸ್ಥ ರಮೇಶ್ ಬಾಬು ದೂರಿದರು. ಈ ಬಗ್ಗೆ ಹೋರಾಟ, ಪ್ರತಿಭಟನೆ ಮಾಡಿ ಡಿಸಿ ಅವರಿಗೆ ಮನವಿ ಕೊಟ್ಟರು ಏನು ಪ್ರಯೋಜನವಾಗಿಲ್ಲ ಎಂದು ದೂರಿದರು. ಅಲ್ಲದೆ, ಸಚಿವ ಆರ್.ವಿ.ದೇಶಪಾಂಡೆ ಅವರಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಸಿಇಒ ಜ್ಯೋತಿ, ಮಾಜಿ ಶಾಸಕ ವಾಸು ಇದ್ದರು.
ಚಾಮುಂಡಿಬೆಟ್ಟಕ್ಕೆ ವಿಶೇಷ ಪೂಜೆ
ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮೈಸೂರಿನ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೇವಸ್ಥಾನದ ಮುಖ್ಯ ಆಗಮಿಕರಾದ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಸಚಿವ ಆರ್.ವಿ ದೇಶಪಾಂಡೆ ಅವರು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ''ರಾಜ್ಯದಲ್ಲಿ ಕಳೆದ 18 ವರ್ಷಗಳಿಂದ ಸರಿಯಾಗಿ ಮಳೆಯಾಗಿಲ್ಲ.4 ವರ್ಷ ಮಾತ್ರ ಮಳೆಯಾಗಿದೆ. ಹೆಚ್ಚಿನ ಮಳೆಯಾಗಲಿ ಎಂದು ಈಶ್ವರ ಹಾಗೂ ತಾಯಿ ಚಾಮುಂಡಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಒಂದು ಕಡೆ ಬರಗಾಲ ಇದೆ. ಮತ್ತೊಂದು ಕಡೆ ಅತಿವೃಷ್ಟಿ. ಇದನ್ನು ನಿವಾರಣೆ ಮಾಡಲು ದೇವರ ಅನುಗ್ರಹ ಮುಖ್ಯ ಹಾಗಾಗಿ ದೇವರ ಪ್ರಾರ್ಥನೆಯೊಂದಿಗೆ ಇಂದಿನ ಕಾರ್ಯ ಪ್ರಾರಂಭಿಸಿದ್ದೇನೆ,'' ಎಂದರು.