ಆ್ಯಪ್ನಗರ

ಕೇರಳದಲ್ಲಿ ಬಸ್‌ಗೆ ಬೆಂಕಿ, ಪಾರಾದ ಭಕ್ತರು

ಶಬರಿಮಲೆ ಸ್ವಾಮಿ ಅಯ್ಯಪ್ಪನ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಬಸ್‌ನಲ್ಲಿಬೆಂಕಿ ಅವಘಡ ಸಂಭವಿಸಿದ್ದು, ಬಸ್‌ನಲ್ಲಿದ್ದ ಮೈಸೂರಿನ ಹೂಟಗಳ್ಳಿಯ 20ಕ್ಕೂ ಹೆಚ್ಚು ಮಂದಿ ನಿವಾಸಿಗಳು ಪಾರಾಗಿದ್ದಾರೆ. ಕೇರಳದ ನೆಲಕ್ಕಲ್‌ನಿಂದ ಪಂಪಾಗೆ ತೆರಳುವ ಮಾರ್ಗ ಮಧ್ಯೆ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

Vijaya Karnataka 16 Feb 2020, 5:00 am
ಮೈಸೂರು: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಬಸ್‌ನಲ್ಲಿಬೆಂಕಿ ಅವಘಡ ಸಂಭವಿಸಿದ್ದು, ಬಸ್‌ನಲ್ಲಿದ್ದ ಮೈಸೂರಿನ ಹೂಟಗಳ್ಳಿಯ 20ಕ್ಕೂ ಹೆಚ್ಚು ಮಂದಿ ನಿವಾಸಿಗಳು ಪಾರಾಗಿದ್ದಾರೆ. ಕೇರಳದ ನೆಲಕ್ಕಲ್‌ನಿಂದ ಪಂಪಾಗೆ ತೆರಳುವ ಮಾರ್ಗ ಮಧ್ಯೆ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.
Vijaya Karnataka Web devotees of fire and escape to the bus in kerala
ಕೇರಳದಲ್ಲಿ ಬಸ್‌ಗೆ ಬೆಂಕಿ, ಪಾರಾದ ಭಕ್ತರು


ಮೈಸೂರಿನಿಂದ ಕೇರಳಕ್ಕೆ ಮೂರು ದಿನಗಳ ಹಿಂದೆ ಬಸ್‌ನಲ್ಲಿತೆರಳಿದ್ದು , ಮಾರ್ಗ ಮಧ್ಯೆ ಕೇರಳದ ಬಸ್‌ನಲ್ಲಿಸಂಚಾರ ಮುಂದುವರೆಸಿದ್ದಾರೆ. ಈ ವೇಳೆ ಕೇರಳದ ಬಸ್‌ನ ಟೈರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಇಡಿ ಬಸ್‌ಗೆ ವ್ಯಾಪಿಸಿದೆ. ತಕ್ಷಣ ಮೈಸೂರಿನ ಅಯ್ಯಪ್ಪ ಭಕ್ತರು ಸೇರಿದಂತೆ ಸ್ಥಳೀಯರು ಬಸ್‌ನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂತರ ಮೈಸೂರಿನ ಅಯ್ಯಪ್ಪ ಸ್ವಾಮಿ ಭಕ್ತರು, ತಾವು ಬಂದಿದ್ದ ಬಸ್‌ನಲ್ಲಿಮೈಸೂರಿಗೆ ಹಿಂದಿರುಗಿದ್ದು, ಭಾನುವಾರ ಬೆಳಗ್ಗೆ ಮೈಸೂರಿನತ್ತ ಬರಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ