ಹರೀಶ ಎಲ್.ತಲಕಾಡು
ಮೈಸೂರು: ಗ್ರಾಹಕರ ಬ್ಯಾಂಕ್ ಖಾತೆ ಹಣ ಎಗರಿಸಲು ನಾನಾ ತಂತ್ರ ಅನುಸರಿಸುವ ಸೈಬರ್ ಕಳ್ಳರು, ಹೆಚ್ಚಿದ ಡಿಜಿಟಲ್ ವ್ಯವಹಾರವನ್ನೇ ಬಂಡವಾಳವಾಗಿಸಿಕೊಂಡು ತಮ್ಮ ವರಸೆ ಬದಲಿಸಿದ್ದಾರೆ. ಇದುವರೆಗೂ ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್, ಗ್ರಾಹಕರಿಂದ ಒಟಿಪಿ ನಂಬರ್ ಪಡೆದು ಹಣ ಲಪಟಾಯಿಸುತ್ತಿದ್ದ ಸೈಬರ್ ಕಳ್ಳರು, ಡಿಜಿಟಲ್ ಪೇಮೆಂಟ್ನ ಹೊಸ ತಂತ್ರಜ್ಞಾನಗಳನ್ನೇ ಬಳಸಿಕೊಂಡು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ಹಣ ಕಳೆದುಕೊಂಡವರು ಬ್ಯಾಂಕ್ ಸೇರಿದಂತೆ ಡಿಜಿಟಲ್ ಪೇಮೆಂಟ್ ಸೇವೆ ನೀಡುವ ಕಂಪನಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲದಾಗಿದೆ. ಮೈಸೂರಿನ ಖಾಸಗಿ ಕಂಪನಿಯ ನೌಕರರೊಬ್ಬರು, ಸೈಬರ್ ಕಳ್ಳರ ವಂಚನೆಗೆ ಬಲಿಯಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿನ 11 ಸಾವಿರ ರೂ. ಕಳೆದುಕೊಂಡಿದ್ದಾರೆ.
ಆಗಿದ್ದಿಷ್ಟು: ಮೈಸೂರಿನ ವಿಜಯನಗರ ನಾಲ್ಕನೇ ಹಂತದ ನಿವಾಸಿ ಜಗನ್ನಾಥ್ ತಮ್ಮ ಕಾರನ್ನು ಮಾರಾಟ ಮಾಡಲು ಒಎಲ್ಎಕ್ಸ್ನಲ್ಲಿ ಜಾಹೀರಾತು ನೀಡಿದ್ದರು. ಇದನ್ನು ಗಮನಿಸಿದ ಸೈಬರ್ ಕಳ್ಳ, ತಾನು ಸೇನೆಯಲ್ಲಿ ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ ಕಾರು ಖರೀದಿಸುತ್ತೇನೆ ಎಂದು ನಂಬಿಸಿ ಸುಮಾರು ತಿಂಗಳ ಕಾಲ ಕಾಲಹರಣ ಮಾಡಿದ್ದಾನೆ. ಕೊನೆಗೆ ಜಗನ್ನಾಥ್ ತಕ್ಷಣ ಹಣ ನೀಡಿ ಕಾರು ಖರೀದಿಸದಿದ್ದರೆ ಬೇರೆಯವರಿಗೆ ಮಾರಾಟ ಮಾಡುವುದಾಗಿ ಎಚ್ಚರಿಕೆ ನೀಡಿದಾಗ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿ ಬ್ಯಾಂಕ್ ಖಾತೆಯ ವಿವರ ಪಡೆದಿದ್ದಾನೆ. ಜತೆಗೆ ಗೂಗಲ್ ಪೇ ಆ್ಯಪ್ ಬಳಕೆ ಮಾಡುತ್ತೀರಾ ಎಂದು ಮಾಹಿತಿ ಪಡೆದಿದ್ದಾನೆ.
ಆನ್ಲೈನ್ ವಂಚನೆ: ವಾಟ್ಸ್ಆಪ್ ಗರ್ಲ್ ಫ್ರೆಂಡ್ ನಂಬಿ 22 ಸಾವಿರ ರೂ. ಕಳೆದುಕೊಂಡ ಬೆಂಗಳೂರು ಯುವಕ
ಮಹಿಳೆಯೊಬ್ಬರಿಂದ ಬ್ಯಾಂಕ್ ಅಧಿಕಾರಿ ಎಂದು ಫೋನ್ ಮಾಡಿಸಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ. ನಿಮ್ಮ ಖಾತೆಯಲ್ಲಿ 20 ಸಾವಿರ ರೂ. ಹಣವಿದ್ದರೆ ಬ್ಯಾಂಕ್ ಖಾತೆಯಿಂದ ನಿಮಗೆ ಹಣ ಜಮಾ ಆಗಲಿದೆ ಎಂದಿದ್ದಾರೆ. ಗೂಗಲ್ ಪೇನಲ್ಲಿ 11 ಸಾವಿರ ರೂ. ಪಾವತಿಸುವಂತೆ ರಿಕ್ವೆಸ್ಟ್ ಕಳುಹಿಸಿದ್ದು, ಅದನ್ನು ಸಮ್ಮತಿಸಿದರೆ ಖಾತೆಗೆ ಹಣ ಜಮೆ ಆಗಲಿದೆ ಎಂದಿದ್ದಾರೆ. ತಕ್ಷಣ ಜಗನ್ನಾಥ್, ಪೇಮೆಂಟ್ ಆಕ್ಟಿವಿಟಿ ವಿಭಾಗದಲ್ಲಿ ಪರಿಶೀಲಿಸಿ, ಹಣ ತನ್ನ ಖಾತೆಗೆ ಬರಲಿದೆ ಎಂದು ನಂಬಿ, ರಿಕ್ವೆಸ್ಟ್ ಓಕೆ ಮಾಡಿ, ಯುಪಿಐ ನಂಬರ್ ಕೂಡ ಒತ್ತಿದ್ದಾರೆ. ತಕ್ಷಣ ಬ್ಯಾಂಕ್ ಖಾತೆಯಿಂದ 11 ಸಾವಿರ ರೂ. ಕಡಿತಗೊಂಡಿದೆ.
ಗಾಬರಿಯಾದ ಜಗನ್ನಾಥ್, ತನ್ನ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಬ್ಯಾಂಕ್ ಅಧಿಕಾರಿ ಎಂದುಕೊಂಡು ಮಾತನಾಡಿದ ಮಹಿಳೆ, ನಿಮ್ಮ ಖಾತೆಯಲ್ಲಿ ಕನಿಷ್ಠ 20 ಸಾವಿರ ರೂ. ಇಲ್ಲದೇ ಇರುವುದರಿಂದ ನಿಮ್ಮ ಖಾತೆಯಲ್ಲಿನ ಹಣವೇ ಕಡಿತಗೊಂಡಿದೆ. ಇನ್ನೆರಡು ದಿನಗಳಲ್ಲಿ ಮರು ಪಾವತಿಯಾಗಲಿದೆ ಎಂದು ನಂಬಿಸಿದ್ದಾರೆ. ಮೂರ್ನಾಲ್ಕು ದಿನಗಳಾದರೂ ಹಣ ಬಾರದೇ ಇರುವುದರಿಂದ ಅನುಮಾನಗೊಂಡು, ಮತ್ತೆ ಕರೆ ಮಾಡಿ ವಿಚಾರಿಸಿದಾಗ ಕಾರು ಖರೀದಿಸುವುದಾಗಿ ಸೈಬರ್ ಕಳ್ಳ ಹಾರಿಕೆ ಉತ್ತರ ನೀಡಿದ್ದಾರೆ.
ಕಾರವಾರ: ಕೊರೊನಾ ಸೋಂಕಿತರನ್ನು ವಂಚಿಸುತ್ತಿರುವ ಆನ್ ಲೈನ್ ವಂಚಕರು
ಇದರಿಂದ ತಾನು ಮೋಸ ಹೋಗಿರುವುದಾಗಿ ಅರಿತ ಜಗನ್ನಾಥ್, ತಕ್ಷಣ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು, ಇದು ನಮಗೆ ಸಂಬಂಧಪಟ್ಟಿದ್ದಲ್ಲ. ಗೂಗಲ್ ಪೇನಿಂದ ಹಣ ವರ್ಗಾವಣೆಯಾಗಿರುವುದರಿಂದ ಸಂಬಂಧಪಟ್ಟವರನ್ನು ವಿಚಾರಿಸಿ ಎಂದು ಹೇಳಿದ್ದಾರೆ. ಗೂಗಲ್ ಪೇಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದಾಗ, ನೀವೇ ಹಣ ವರ್ಗಾವಣೆ ಮಾಡಿರುವುದರಿಂದ ತಮ್ಮ ಲೋಪವೇನು ಇಲ್ಲ ಎಂದು ಹೇಳಿದ್ದಾರೆ. ಕೊನೆಗೆ ಬೇರೆ ದಾರಿಯಿಲ್ಲದೆ ಜಗನ್ನಾಥ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರಿಯಾಣದ ಬ್ಯಾಂಕ್ ಖಾತೆ: ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರ ಪತ್ತೆ ಹಚ್ಚಿದಾಗ ಅದು ಹರಿಯಾಣದಲ್ಲಿರುವ ಬ್ಯಾಂಕ್ವೊಂದರ ಖಾತೆ ಎಂದು ತಿಳಿದು ಬಂದಿದೆ. ಅಲ್ಲದೇ ಮೊಬೈಲ್ ಸಿಮ್ನ ನೆಟ್ವರ್ಕ್ ಆಧಾರದ ಮೇಲೆ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲು ಮುಂದಾದ ಪೊಲೀಸರಿಗೆ ಮೊಬೈಲ್ ಸಿಮ್ ಇದ್ದ ಸ್ಥಳ ಒಂದು ಕಡೆಯಾದರೆ, ಸೈಬರ್ ಕಳ್ಳ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಆ ಮೊಬೈಲ್ ಸಿಮ್ ಬಳಸಿ ಕರೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.
ಆನ್ಲೈನ್ ವಂಚನೆ: ಓಎಲ್ಎಕ್ಸ್ನಲ್ಲಿ ಮಾರಾಟಕ್ಕಿಟ್ಟ ವಸ್ತುಗಳೆಲ್ಲವನ್ನೂ ಕೊಳ್ಳುತ್ತೇನೆಂದು ಬಂದಿದ್ದ ವಂಚಕ!
ಮೈಸೂರು: ಗ್ರಾಹಕರ ಬ್ಯಾಂಕ್ ಖಾತೆ ಹಣ ಎಗರಿಸಲು ನಾನಾ ತಂತ್ರ ಅನುಸರಿಸುವ ಸೈಬರ್ ಕಳ್ಳರು, ಹೆಚ್ಚಿದ ಡಿಜಿಟಲ್ ವ್ಯವಹಾರವನ್ನೇ ಬಂಡವಾಳವಾಗಿಸಿಕೊಂಡು ತಮ್ಮ ವರಸೆ ಬದಲಿಸಿದ್ದಾರೆ.
ಹಣ ಕಳೆದುಕೊಂಡವರು ಬ್ಯಾಂಕ್ ಸೇರಿದಂತೆ ಡಿಜಿಟಲ್ ಪೇಮೆಂಟ್ ಸೇವೆ ನೀಡುವ ಕಂಪನಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲದಾಗಿದೆ. ಮೈಸೂರಿನ ಖಾಸಗಿ ಕಂಪನಿಯ ನೌಕರರೊಬ್ಬರು, ಸೈಬರ್ ಕಳ್ಳರ ವಂಚನೆಗೆ ಬಲಿಯಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿನ 11 ಸಾವಿರ ರೂ. ಕಳೆದುಕೊಂಡಿದ್ದಾರೆ.
ಆಗಿದ್ದಿಷ್ಟು: ಮೈಸೂರಿನ ವಿಜಯನಗರ ನಾಲ್ಕನೇ ಹಂತದ ನಿವಾಸಿ ಜಗನ್ನಾಥ್ ತಮ್ಮ ಕಾರನ್ನು ಮಾರಾಟ ಮಾಡಲು ಒಎಲ್ಎಕ್ಸ್ನಲ್ಲಿ ಜಾಹೀರಾತು ನೀಡಿದ್ದರು. ಇದನ್ನು ಗಮನಿಸಿದ ಸೈಬರ್ ಕಳ್ಳ, ತಾನು ಸೇನೆಯಲ್ಲಿ ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ ಕಾರು ಖರೀದಿಸುತ್ತೇನೆ ಎಂದು ನಂಬಿಸಿ ಸುಮಾರು ತಿಂಗಳ ಕಾಲ ಕಾಲಹರಣ ಮಾಡಿದ್ದಾನೆ. ಕೊನೆಗೆ ಜಗನ್ನಾಥ್ ತಕ್ಷಣ ಹಣ ನೀಡಿ ಕಾರು ಖರೀದಿಸದಿದ್ದರೆ ಬೇರೆಯವರಿಗೆ ಮಾರಾಟ ಮಾಡುವುದಾಗಿ ಎಚ್ಚರಿಕೆ ನೀಡಿದಾಗ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿ ಬ್ಯಾಂಕ್ ಖಾತೆಯ ವಿವರ ಪಡೆದಿದ್ದಾನೆ. ಜತೆಗೆ ಗೂಗಲ್ ಪೇ ಆ್ಯಪ್ ಬಳಕೆ ಮಾಡುತ್ತೀರಾ ಎಂದು ಮಾಹಿತಿ ಪಡೆದಿದ್ದಾನೆ.
ಆನ್ಲೈನ್ ವಂಚನೆ: ವಾಟ್ಸ್ಆಪ್ ಗರ್ಲ್ ಫ್ರೆಂಡ್ ನಂಬಿ 22 ಸಾವಿರ ರೂ. ಕಳೆದುಕೊಂಡ ಬೆಂಗಳೂರು ಯುವಕ
ಮಹಿಳೆಯೊಬ್ಬರಿಂದ ಬ್ಯಾಂಕ್ ಅಧಿಕಾರಿ ಎಂದು ಫೋನ್ ಮಾಡಿಸಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ. ನಿಮ್ಮ ಖಾತೆಯಲ್ಲಿ 20 ಸಾವಿರ ರೂ. ಹಣವಿದ್ದರೆ ಬ್ಯಾಂಕ್ ಖಾತೆಯಿಂದ ನಿಮಗೆ ಹಣ ಜಮಾ ಆಗಲಿದೆ ಎಂದಿದ್ದಾರೆ. ಗೂಗಲ್ ಪೇನಲ್ಲಿ 11 ಸಾವಿರ ರೂ. ಪಾವತಿಸುವಂತೆ ರಿಕ್ವೆಸ್ಟ್ ಕಳುಹಿಸಿದ್ದು, ಅದನ್ನು ಸಮ್ಮತಿಸಿದರೆ ಖಾತೆಗೆ ಹಣ ಜಮೆ ಆಗಲಿದೆ ಎಂದಿದ್ದಾರೆ. ತಕ್ಷಣ ಜಗನ್ನಾಥ್, ಪೇಮೆಂಟ್ ಆಕ್ಟಿವಿಟಿ ವಿಭಾಗದಲ್ಲಿ ಪರಿಶೀಲಿಸಿ, ಹಣ ತನ್ನ ಖಾತೆಗೆ ಬರಲಿದೆ ಎಂದು ನಂಬಿ, ರಿಕ್ವೆಸ್ಟ್ ಓಕೆ ಮಾಡಿ, ಯುಪಿಐ ನಂಬರ್ ಕೂಡ ಒತ್ತಿದ್ದಾರೆ. ತಕ್ಷಣ ಬ್ಯಾಂಕ್ ಖಾತೆಯಿಂದ 11 ಸಾವಿರ ರೂ. ಕಡಿತಗೊಂಡಿದೆ.
ಗಾಬರಿಯಾದ ಜಗನ್ನಾಥ್, ತನ್ನ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಬ್ಯಾಂಕ್ ಅಧಿಕಾರಿ ಎಂದುಕೊಂಡು ಮಾತನಾಡಿದ ಮಹಿಳೆ, ನಿಮ್ಮ ಖಾತೆಯಲ್ಲಿ ಕನಿಷ್ಠ 20 ಸಾವಿರ ರೂ. ಇಲ್ಲದೇ ಇರುವುದರಿಂದ ನಿಮ್ಮ ಖಾತೆಯಲ್ಲಿನ ಹಣವೇ ಕಡಿತಗೊಂಡಿದೆ. ಇನ್ನೆರಡು ದಿನಗಳಲ್ಲಿ ಮರು ಪಾವತಿಯಾಗಲಿದೆ ಎಂದು ನಂಬಿಸಿದ್ದಾರೆ. ಮೂರ್ನಾಲ್ಕು ದಿನಗಳಾದರೂ ಹಣ ಬಾರದೇ ಇರುವುದರಿಂದ ಅನುಮಾನಗೊಂಡು, ಮತ್ತೆ ಕರೆ ಮಾಡಿ ವಿಚಾರಿಸಿದಾಗ ಕಾರು ಖರೀದಿಸುವುದಾಗಿ ಸೈಬರ್ ಕಳ್ಳ ಹಾರಿಕೆ ಉತ್ತರ ನೀಡಿದ್ದಾರೆ.
ಕಾರವಾರ: ಕೊರೊನಾ ಸೋಂಕಿತರನ್ನು ವಂಚಿಸುತ್ತಿರುವ ಆನ್ ಲೈನ್ ವಂಚಕರು
ಇದರಿಂದ ತಾನು ಮೋಸ ಹೋಗಿರುವುದಾಗಿ ಅರಿತ ಜಗನ್ನಾಥ್, ತಕ್ಷಣ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು, ಇದು ನಮಗೆ ಸಂಬಂಧಪಟ್ಟಿದ್ದಲ್ಲ. ಗೂಗಲ್ ಪೇನಿಂದ ಹಣ ವರ್ಗಾವಣೆಯಾಗಿರುವುದರಿಂದ ಸಂಬಂಧಪಟ್ಟವರನ್ನು ವಿಚಾರಿಸಿ ಎಂದು ಹೇಳಿದ್ದಾರೆ. ಗೂಗಲ್ ಪೇಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದಾಗ, ನೀವೇ ಹಣ ವರ್ಗಾವಣೆ ಮಾಡಿರುವುದರಿಂದ ತಮ್ಮ ಲೋಪವೇನು ಇಲ್ಲ ಎಂದು ಹೇಳಿದ್ದಾರೆ. ಕೊನೆಗೆ ಬೇರೆ ದಾರಿಯಿಲ್ಲದೆ ಜಗನ್ನಾಥ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರಿಯಾಣದ ಬ್ಯಾಂಕ್ ಖಾತೆ: ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರ ಪತ್ತೆ ಹಚ್ಚಿದಾಗ ಅದು ಹರಿಯಾಣದಲ್ಲಿರುವ ಬ್ಯಾಂಕ್ವೊಂದರ ಖಾತೆ ಎಂದು ತಿಳಿದು ಬಂದಿದೆ. ಅಲ್ಲದೇ ಮೊಬೈಲ್ ಸಿಮ್ನ ನೆಟ್ವರ್ಕ್ ಆಧಾರದ ಮೇಲೆ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲು ಮುಂದಾದ ಪೊಲೀಸರಿಗೆ ಮೊಬೈಲ್ ಸಿಮ್ ಇದ್ದ ಸ್ಥಳ ಒಂದು ಕಡೆಯಾದರೆ, ಸೈಬರ್ ಕಳ್ಳ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಆ ಮೊಬೈಲ್ ಸಿಮ್ ಬಳಸಿ ಕರೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.
ಆನ್ಲೈನ್ ವಂಚನೆ: ಓಎಲ್ಎಕ್ಸ್ನಲ್ಲಿ ಮಾರಾಟಕ್ಕಿಟ್ಟ ವಸ್ತುಗಳೆಲ್ಲವನ್ನೂ ಕೊಳ್ಳುತ್ತೇನೆಂದು ಬಂದಿದ್ದ ವಂಚಕ!