ಆ್ಯಪ್ನಗರ

ಎಂಟಿಬಿಗೆ ದುಡ್ಡಿನ ಮದ ಎಂದ ದಿನೇಶ್‌

ಹುಣಸೂರು: ​ಎಂಟಿಬಿ ನಾಗರಾಜ್‌ಗೆ ದುಡ್ಡಿನ ಮದ ಬಂದಿದೆ. ನೂರಾರು ಕೋಟಿ ಒಡೆಯರಾಗಿದ್ದು, ಅವರಿಗೆ ಅಹಂಕಾರ ತಲೆಗೇರಿದೆ ಹೀಗಾಗಿ ಏನೇನೋ ಬಡ ಬಡಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದರು.

Vijaya Karnataka 25 Nov 2019, 5:00 am
ಹುಣಸೂರು: ಎಂಟಿಬಿ ನಾಗರಾಜ್‌ಗೆ ದುಡ್ಡಿನ ಮದ ಬಂದಿದೆ. ನೂರಾರು ಕೋಟಿ ಒಡೆಯರಾಗಿದ್ದು, ಅವರಿಗೆ ಅಹಂಕಾರ ತಲೆಗೇರಿದೆ ಹೀಗಾಗಿ ಏನೇನೋ ಬಡ ಬಡಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದರು.
Vijaya Karnataka Web Hun election


ಹುಣಸೂರು ಕ್ಷೇತ್ರದ ಉಪ ಚುನಾವಣೆ ಸಂಬಂಧ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಕಳೆದ ಚುನಾವಣೆಯಲ್ಲಿಎಂ.ಟಿ.ಬಿ.ನಾಗರಾಜ್‌ ಪಕ್ಷಕ್ಕೆ ಸಾಕಷ್ಟು ಹಣ ನೀಡಿದ್ದೇನೆಂದು ಆರೋಪಿಸಿದ್ದಾ ರಲ್ಲಾಎಂಬ ಪ್ರಶ್ನೆಗೆ ''ದುಡ್ಡು ಹೆಚ್ಚಾಗಿ ಎಲ್ಲವನ್ನೂ ನಾನೇ ಮಾಡಿದೆ, ಎಲ್ಲವೂ ನನ್ನಿಂದಲೇ ಆಯಿತು ಎನ್ನುವ ಇವರ ಮಾತು ಒಳಿತಲ್ಲ. ಇಂತಹ ದುರಹಂಕಾರದ ಹೇಳಿಕೆ ಕೊಟ್ಟರೆ ಅಂಧಃಪತನಕ್ಕಿಳಿ ಯುತ್ತಾರೆ. ಈಗಾಗಲೆ ಅವರು ಮೂರನೇ ಸ್ಥಾನ ದಲ್ಲಿದ್ದು, ಸೋಲಿನ ಭಯದಿಂದ ಏನೇನೋ ಬಡ ಬಡಿಸುತ್ತಿದ್ದಾರೆ,'' ಎಂದು ಅಭಿಪ್ರಾಯಪಟ್ಟರು.

''ಪಕ್ಷಕ್ಕೆ, ಮುಖಂಡರಿಗೆ ಸಾಲ ಕೊಟ್ಟಿದ್ದರೆ ಅಫಿಡೆವಿಟ್‌ನಲ್ಲಿಮಾಹಿತಿಯನ್ನೇಕೆ ಉಲ್ಲೇಖಿಸಿಲ್ಲ, ಇವರ ಹೇಳಿಕೆ ಬಗ್ಗೆ ಪಕ್ಷ ಈಗಾಗಲೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದೆ,'' ಎಂದರು. ಅನರ್ಹರ ಕ್ಯಾಪ್ಟನ್‌ ಡಾ.ಸುಧಾಕರ್‌: ''17 ಅನರ್ಹ ಶಾಸಕರ ಪೈಕಿ ಅತಿ ಹೆಚ್ಚು ಸುಳ್ಳು ಹೇಳಿ ಪಕ್ಷದ ಮುಖಂಡರನ್ನೇ ದಾರಿ ತಪ್ಪಿಸಿದ ಕುಖ್ಯಾತಿ ಡಾ.ಸುಧಾಕರ್‌ಗೆ ಸಲ್ಲಲಿದೆ. ಈತ ಕೊನೆ ದಿನದ ವರೆಗೂ ನಿಮ್ಮ ಜತೆ ಇರುತ್ತೇನೆ, ಹೋಗಿರುವವ ರನ್ನು ಕರೆ ತರುತ್ತೇನೆಂದು ಮೆಸೇಜ್‌ ಸಹ ಮಾಡಿ ದ್ದರು. ಇವರನ್ನು ಬೆಳೆಸಿದ್ದ ಸಿದ್ದರಾಮಯ್ಯ ಅವರಿಗೆ ಮೋಸ ಮಾಡಿದ ಆಸಾಮಿ. ಇವರಂತ ಸುಳ್ಳುಗಾರ ಮತ್ತೊಬ್ಬರಿಲ್ಲ. ಚುನಾವಣೆ ಎದುರಿಸುತ್ತಿರುವಾತ ನನ್ನ ಬಗ್ಗೆ ವಸೂಲಿ ಮಾಡ್ತಾರೆಂದು ದೂರಿದ್ದಾರೆ. ಆದರೆ, ಅವರ ಕ್ಷೇತ್ರದಲ್ಲಿಯಾರು ಬೇಕಾದರೂ ಹೋಗಿ ನೋಡಿ ಯಾರು ವಸೂಲಿ ರಾಜಕಾರಣ ಮಾಡುತ್ತಾರೆಂದು ಗೊತ್ತಾಗಲಿದೆ,'' ಎಂದರು.

ನ.9ರ ನಂತರ ಮಹತ್ತರ ಬದಲಾವಣೆ: ದೇಶದಲ್ಲಿಇತ್ತೀಚೆಗೆ ನಡೆದ ಉಪ ಚುನಾವಣೆ ಗಳಲ್ಲಿಎಲ್ಲಪಕ್ಷಾಂತರಿಗಳಿಗೂ ಸೋಲುಂಟಾಗಿದೆ. ಅದೇ ರೀತಿ ಡಿ.5ರ ಉಪ ಚುನಾವಣೆಯಲ್ಲೂಪಕ್ಷಾಂತರಿಗಳಿಗೆ ಜನತೆ ಸರಿಯಾದ ಬುದ್ಧಿ ಕಲಿಸಲಿ ದ್ದಾರೆ. ಡಿ.9ರ ನಂತರ ರಾಜ್ಯ ರಾಜಕೀಯದಲ್ಲಿಮಹತ್ತರ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಒಡೆದ ಮನೆ: ಕಾಂಗ್ರೆಸ್‌ ಒಡೆದ ಮನೆ, ಸಿದ್ಧರಾಮಯ್ಯ ಏಕಾಂಗಿ ಎಂಬಿತ್ಯಾದಿ ಹೇಳಿಕೆಗಳನ್ನು ಬಿಜೆಪಿ ನೀಡುತ್ತಿರುವುದು ಆ ಪಕ್ಷದ ಮನಸ್ಥಿತಿ ಯನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್‌ ಕುರಿತು ಬಿಜೆಪಿಗೆ ಹೇಳಲು ಏನೂ ಇಲ್ಲ. ನಿಜಾಂಶವೆಂದರೆ ಬಿಜೆಪಿಯೇ ಇಬ್ಭಾಗವಾಗಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಅಧಿಕಾರ ದಿಂದ ಕೆಳಗಿಳಿಸಲು ಉಪಚುನಾವಣೆಯನ್ನು ಅಸ್ತ್ರ ವಾಗಿ ಬಳಸಿಕೊಳ್ಳುತ್ತಿದೆ. ನೈತಿಕತೆಯಿಲ್ಲದ ರಾಜಕಾರಣಿ ಎಂದರೆ ಅದು ವಿಶ್ವನಾಥ್‌,'' ಎಂದೂ ಟೀಕಿಸಿದರು.

''ಇದು ಸ್ವಾಭಿಮಾನದ ಚುನಾವಣೆಯಾಗಿದ್ದು, ಹುಣಸೂರು ಸೇರಿದಂತೆ ಎಲ್ಲಅಭ್ಯರ್ಥಿಗಳು ಗೆಲುವು ಸಾಧಿಸುವುದು ಗ್ಯಾರಂಟಿ. ಹೀಗಾಗಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಪರ ಪ್ರಾಮಾಣಿಕವಾಗಿ ದುಡಿಯ ಬೇಕು,'' ಎಂದು ಮನವಿ ಮಾಡಿದರು. ಮಾಜಿ ಸಚಿವ ಯು.ಟಿ.ಖಾದರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್‌, ಶಾಸಕ ಧರ್ಮಸೇನ, ಮಾಜಿ ಶಾಸಕರಾದ ವೆಂಕಟೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ