ಆ್ಯಪ್ನಗರ

ಪೊಲೀಸರಿಗೆ ಶಿಸ್ತು ಮುಖ್ಯ: ಐಜಿಪಿ ಶರತ್‌ಚಂದ್ರ

ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿಸ್ತು ಮುಖ್ಯ ಎಂದು ಮೈಸೂರು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಸಲಹೆ ನೀಡಿದರು.

Vijaya Karnataka 9 Sep 2018, 5:00 am
ಮೈಸೂರು : ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿಸ್ತು ಮುಖ್ಯ ಎಂದು ಮೈಸೂರು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಸಲಹೆ ನೀಡಿದರು.
Vijaya Karnataka Web discipline chief to police igp sharat chandra
ಪೊಲೀಸರಿಗೆ ಶಿಸ್ತು ಮುಖ್ಯ: ಐಜಿಪಿ ಶರತ್‌ಚಂದ್ರ


ಮೈಸೂರಿನ ಲಲಿತಮಹಲ್‌ ರಸ್ತೆಯಲ್ಲಿರುವ ಕೆಎಸ್‌ಆರ್‌ಪಿ ಐದನೇ ಪಡೆ ಕವಾಯತು ಮೈದಾನದಲ್ಲಿ ಶನಿವಾರ ಬೆಳಗ್ಗೆ ಸಿಎಆರ್‌ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯು ಆಯೋಜಿಸಿದ್ದ 7ನೇ ತಂಡದ ಸಶಸ್ತ್ರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಮಾತನಾಡಿದರು.

ಪೊಲೀಸ್‌ ಇಲಾಖೆಯಲ್ಲಿ ಶಿಸ್ತು ಕಾಪಾಡಿ ಕೊಳ್ಳದಿದ್ದರೇ ಕರ್ತವ್ಯ ನಿರ್ವಹಣೆ ಕಷ್ಟ. ಆದ್ದರಿಂದ ಪ್ರತಿಯೋಬ್ಬರು ವೃತ್ತಿ ಜೀವನದಲ್ಲಿ ಶಿಸ್ತು ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಶಸ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ 8 ತಿಂಗಳ ತರಬೇತಿಯು ವೃತ್ತಿ ಜೀವನಕ್ಕೆ ಭದ್ರ ಬುನಾದಿಯಾಗಲಿದ್ದು, ತರಬೇತಿಯೊಂದಿಗೆ ಶಿಸ್ತು ಬೆಳೆಸಿಕೊಂಡು, ಆರೋಗ್ಯ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು. ಗಲಾಟೆ, ಗುಂಪು ಘರ್ಷಣೆ, ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಸಂದರ್ಭದಲ್ಲೂ ಕರ್ತವ್ಯಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದರು.

ಪೊಲೀಸ್‌ ಇಲಾಖೆಗೆ ಆಯ್ಕೆಯಾಗಿರುವ 180 ಜನರ ಪೈಕಿ 18 ಜನ ಸ್ನಾತಕೋತ್ತರ ಪದವಿ, 115 ಜನ ಪದವಿ, 47 ಜನ ಪಿಯುಸಿ ವಿದ್ಯಾರ್ಹತೆ ಹೊಂದಿದ್ದಾರೆ. ಇವರ ಮೇಲೆ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇದೆ. ಪೊಲೀಸ್‌ ಇಲಾಖೆಯ ಬೆನ್ನೆಲಬು ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಶಸ್ತ್ರ ಪಡೆಯ ಪೊಲೀಸರಿಗೆ ಒಳಾಂಗಣಕ್ಕಿಂತ ಹೊರಾಂಗಣ ತರಬೇತಿ ಮುಖ್ಯವಾಗಿದೆ. ಇದು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಸಶಸ್ತ್ರ ಪಡೆಯ ಪೊಲೀಸರು ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸಿ, ನಿವೃತ್ತಿಯಾಗುವವರೆಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

180 ಮಂದಿ ಪ್ರಶಿಕ್ಷಣಾರ್ಥಿಗಳಿಗೆ ಸಿಎಆರ್‌ ಡಿಸಿಪಿ ಬಿ.ವಿ. ಕಿತ್ತೂರ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ಗಮನ ಪಥಸಂಚಲನದ ಪ್ರಧಾನ ದಳಪತಿಯಾಗಿ ಇನ್ಸ್‌ಪೆಕ್ಟರ್‌ ಎ.ಜಿ. ಅಶೋಕ ಕುಮಾರ್‌, ಸಹಾಯಕ ದಳಪತಿಯಾಗಿ ಎಸ್‌ಐ ಪ್ರಕಾಶ ಕಾರ್ಯ ನಿರ್ವಹಿಸಿದರು.

ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ. ವಂಟಿಗೋಡಿ, ನಗರ ಪೊಲೀಸ್‌ ಆಯುಕ್ತ ಡಾ.ಎ. ಸುಬ್ರಮಣ್ಯೇಶ್ವರ ರಾವ್‌, ಎಸ್ಪಿ ಅಮಿತ್‌ ಸಿಂಗ್‌, ಡಿಸಿಪಿಗಳಾದ ಎನ್‌. ವಿಷ್ಣುವರ್ಧನ್‌, ಪ್ರವೀಣ್‌ ಆಳ್ವಾ , ಸಿಎಆರ್‌ ಎಸಿಪಿ ಎಚ್‌.ವಿ. ವೀರಣ್ಣ , ತರಬೇತಿ ಶಾಲೆ ಉಪ ಪ್ರಾಂಶುಪಾಲ ಎಂ.ಜಿ. ನಾಗರಾಜು ಇದ್ದರು.

ಪ್ರಶಸ್ತಿ ವಿಜೇತರು:

ಸರ್ವೋತ್ತಮ ಪ್ರಶಸ್ತಿ: ಮುರುಘೇಂದ್ರ ಪಡಸಲಗಿ.

ಒಳಾಂಗಣ ವಿಭಾಗ: ಎಚ್‌.ಎನ್‌. ಅನಿಲ್‌ಕುಮಾರ್‌ (ಪ್ರ), ಎ.ಪಿ. ಜಯಣ್ಣ ಮತ್ತು ಮಲ್ಲೇಶ ಭೀಮಪ್ಪ ತೇಲಿ (ದ್ವಿ), ಜಿ.ಬಿ. ಬಾಬು (ತೃ).

ಹೊರಾಂಗಣ ವಿಭಾಗ: ಮುರುಘೇಂದ್ರ ಪಡಸಲಗಿ (ಪ್ರ), ಮಲ್ಲೇಶ ಭೀಮಪ್ಪ ತೇಲಿ (ದ್ವಿ), ಸಿದ್ದಪಲ್ಲಯ್ಯ (ತೃ).

ರೈಫಲ್‌ ಶೂಟಿಂಗ್‌ ವಿಭಾಗ: ಸಂಗನಗೌಡ ಭೀ. ಪಾಟೀಲ (ಪ್ರ), ಮಾಳಪ್ಪ (ದ್ವಿ), ವಿನೋದಕುಮಾರ, ಬಿ.ಆರ್‌. ಗಿರೀಶ ಮತ್ತು ಕೆ. ಬಸವಶೆಟ್ಟಿ (ತೃ).

ಡಿಜಿಪಿ ತರಬೇತಿ ಪದನಾಮದ ಪುರಸ್ಕಾರ: ಸುರೇಶ್‌ ಐಹೊಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ