ಆ್ಯಪ್ನಗರ

ಸೋಲಿಗೆ ಹತಾಶರಾಗದಿರಿ: ಪೊ›.ಕಾಳೇಗೌಡ

ವಿದ್ಯಾರ್ಥಿಗಳು ಸೋಲು ಎದುರಾದಾಗ ಒತ್ತಡ, ಗೊಂದಲಕ್ಕೆ ಒಳಗಾಗದೇ ಅದನ್ನು ಎದುರಿಸಬೇಕು. ಆ ಮೂಲಕ ಬದುಕನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪ್ರಗತಿಪರ ಚಿಂತಕ ಪೊ›.ಕಾಳೇಗೌಡ ನಾಗವಾರ ತಿಳಿಸಿದರು.

Vijaya Karnataka 2 Jun 2018, 5:00 am
ಮೈಸೂರು : ವಿದ್ಯಾರ್ಥಿಗಳು ಸೋಲು ಎದುರಾದಾಗ ಒತ್ತಡ, ಗೊಂದಲಕ್ಕೆ ಒಳಗಾಗದೇ ಅದನ್ನು ಎದುರಿಸಬೇಕು. ಆ ಮೂಲಕ ಬದುಕನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪ್ರಗತಿಪರ ಚಿಂತಕ ಪೊ
.ಕಾಳೇಗೌಡ ನಾಗವಾರ ತಿಳಿಸಿದರು.
Vijaya Karnataka Web do not be desperate for defeat po kalegauda
ಸೋಲಿಗೆ ಹತಾಶರಾಗದಿರಿ: ಪೊ›.ಕಾಳೇಗೌಡ


ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ವತಿಯಿಂದ ಆಯೋಜಿಸಿದ್ದ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳ ಶುಭಹಾರೈಕೆ ಸಮಾರಂಭದಲ್ಲಿ ಅವರು ಮಾತನಾಡಿದರು.

''ವಿದ್ಯಾರ್ಥಿಗಳು ಗುರಿ ಸಾಧಿಸಲು ಶಿಸ್ತು, ಆತ್ಮವಿಶ್ವಾಸ ಬಹಳ ಮುಖ್ಯ. ಅನುತ್ತೀರ್ಣಗೊಂಡಿದ್ದೇವೆ ಎಂದು ಯಾರೂ ನೊಂದುಕೊಳ್ಳಬಾರದು. ಗೆಲುವಿಗಾಗಿ ಶ್ರಮಿಸಬೇಕಾಗಿದೆ. ತಾಳ್ಮೆ ಕಳೆದುಕೊಳ್ಳಬೇಡಿ. ಎಲ್ಲರಿಗೂ ಸಮಾನ ಹಕ್ಕನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿದ್ದಾರೆ. ಹೆಣ್ಣು ಮಕ್ಕಳೂ ಗಂಡಿನಷ್ಟೆ ಸಮಾನರು. ಹಾಗಾಗಿ ಯಾರು ಧೃತಿಗೆಡಬೇಕಾಗಿಲ್ಲ. ಜ್ಞಾನಕ್ಕಾಗಿ ಎಲ್ಲರೂ ಶ್ರಮ ವಹಿಸಿ,'' ಎಂದು ಸಲಹೆ ನೀಡಿದರು.

ಡಿ.ಬನುಮಯ್ಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪೊ›.ಭದ್ರಪ್ಪ ಹೆನ್ಲಿ ಮಾತನಾಡಿ, ''ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗೂಡಿಸಿಕೊಂಡರೆ ಜಗತ್ತನ್ನು ಗೆಲ್ಲಬಹುದು. ಅನುತ್ತೀರ್ಣವಾದ ಮಾತ್ರಕ್ಕೆ ಎಲ್ಲವೂ ಮುಗಿದ ಹಾಗೇ ಎಂದು ಭಾವಿಸಬಾರದು. ಪ್ರತಿಯೊಬ್ಬರು ಒಂದಲ್ಲ, ಒಂದು ವಿಷಯದಲ್ಲಿ ಪರಿಣಿತರಾಗಿರುತ್ತಾರೆ. ಸಮಯವನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸು ಸಾಧಿಸಬೇಕು,'' ಎಂದು ತಿಳಿಸಿದರು.

ಅಖಿಲ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ ಮಾತನಾಡಿ, ''ಹಣವಿಲ್ಲದ ಬಡ ಮಕ್ಕಳಿಗೆ ಸರಕಾರಿ ಶಾಲೆಗಳು ಎಂಬಂತಹ ಸ್ಥಿತಿ ಬಂದಿದೆ. ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಪಠ್ಯವನ್ನು ಬೋಧಿಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡು ಮಕ್ಕಳಿಗೆ ಅನುತ್ತೀರ್ಣಗೊಂಡ ವಿಷಯಗಳನ್ನು ಬೋಧಿಸಲು ಶುರುಮಾಡಿದೆವು. ಬೇರೆ ಬೇರೆ ಕಾಲೇಜುಗಳ ಮಕ್ಕಳೂ ಹಾಜರಾಗುತ್ತಿದ್ದಾರೆ,'' ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ದಯಾನಂದ್‌, ಕುವೆಂಪುನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಲ್‌.ಚಿದಾನಂದಕುಮಾರ್‌, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧಾಮಣಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ