ಆ್ಯಪ್ನಗರ

ಡಾ. ಕೆ.ರಾಮೇಶ್ವರಪ್ಪ ಮತ್ತೆ ಮೈಸೂರಿಗೇ ವರ್ಗಾವಣೆ

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ರಾತ್ರೋರಾತ್ರಿ 20 ಸಾವಿರಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ ಗಳನ್ನು ಸೀಮೆಎಣ್ಣೆ ಹಂಚಿಕೆ ವ್ಯಾಪ್ತಿಗೆ ಸೇರಿಸುವ ಮೂಲಕ ಉಪ ಚುನಾವಣೆಯ ನೀತಿಸಂಹಿತೆ ಉಲ್ಲಂಘಿಸಿ ಎತ್ತಂಗಡಿಯಾಗಿದ್ದ ಆಹಾರ ಇಲಾಖೆಯ ಹಿರಿಯ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಅವರನ್ನು ಮತ್ತೆ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ.

ವಿಕ ಸುದ್ದಿಲೋಕ 4 May 2017, 9:00 am
ಬೆಂಗಳೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ರಾತ್ರೋರಾತ್ರಿ 20 ಸಾವಿರಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ ಗಳನ್ನು ಸೀಮೆಎಣ್ಣೆ ಹಂಚಿಕೆ ವ್ಯಾಪ್ತಿಗೆ ಸೇರಿಸುವ ಮೂಲಕ ಉಪ ಚುನಾವಣೆಯ ನೀತಿಸಂಹಿತೆ ಉಲ್ಲಂಘಿಸಿ ಎತ್ತಂಗಡಿಯಾಗಿದ್ದ ಆಹಾರ ಇಲಾಖೆಯ ಹಿರಿಯ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಅವರನ್ನು ಮತ್ತೆ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ.
Vijaya Karnataka Web dr k rameshwarappa again transfer to mysore
ಡಾ. ಕೆ.ರಾಮೇಶ್ವರಪ್ಪ ಮತ್ತೆ ಮೈಸೂರಿಗೇ ವರ್ಗಾವಣೆ


ಪ್ರಭಾವಿ ಸಚಿವರೊಬ್ಬರ ಒತ್ತಡದ ಮೇರೆಗೆ ರಾಮೇಶ್ವರಪ್ಪ ಅವರನ್ನು ಮೈಸೂರಿಗೆ ಮತ್ತೆ ವರ್ಗಾವಣೆ ಮಾಡಲಾಗಿದ್ದು, ಬುಧವಾರವೇ ಅವರು ಅಧಿಕಾರ ಕೂಡ ವಹಿಸಿಕೊಂಡಿದ್ದಾರೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಮೈಸೂರಿಗೆ ಸ್ಥಳ ನಿಯುಕ್ತಿ ಗೊಳಿಸಲಾಗಿದೆ ವರ್ಗಾವಣೆ ಆದೇಶದಲ್ಲಿ ತಿಳಿಸಲಾಗಿದೆ.

ಮಾರ್ಚ್‌ 13ರಂದು ನಂಜನಗೂಡು ತಾಲೂಕಿನಲ್ಲಿ ರಾತ್ರೋರಾತ್ರಿ 20,346 ಪಡಿತರ ಚೀಟಿಗಳನ್ನು ಸೀಮೆಎಣ್ಣೆ ಕಾರ್ಡ್‌ ದಾರರ ಪಟ್ಟಿಗೆ ಸೇರಿಸಲಾಗಿತ್ತು. ಉಪ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸರಕಾರ ವಾಮಮಾರ್ಗ ಅನುಸರಿಸಿದೆ ಎಂಬ ಟೀಕೆಗೂ ಗುರಿಯಾಗಿತ್ತು. ಆದರೆ, ಮೈಸೂರು ಜಿಲ್ಲೆಯ ಹುಣಸೂರು, ಕೃಷ್ಣರಾಜನಗರ, ಮೈಸೂರು, ಪಿರಿಯಾಪಟ್ಟಣ, ಟಿ. ನರಸೀಪುರ ತಾಲೂಕುಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಈ ಕುರಿತು ‘ವಿಜಯ ಕರ್ನಾಟಕ’ ವಿಶೇಷ ವರದಿ ಪ್ರಕಟಿಸಿ ಸರಕಾರದ ಗಮನಸೆಳೆದಿತ್ತು.

ಈ ವರದಿಯಿಂದ ರಾಜ್ಯ ಚುನಾವಣಾ ಆಯೋಗ ಗರಂ ಆಗಿತ್ತು. ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಡಾ.ಕೆ. ರಾಮೇಶ್ವರಪ್ಪ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿತ್ತು. ಕೆಲ ದಿನ ರಜೆ ಮೇಲೆ ತೆರಳಿದ್ದ ಅವರನ್ನು ಇದೀಗ ಮತ್ತೆ ಮೈಸೂರಿಗೆವರ್ಗಾವಣೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ