ಮೈಸೂರು: ನಮಗೆ ಕನಸುಗಳಿವೆ. ಆದರೆ ಗುರಿಗಳಿಲ್ಲ. ಕನಸುಗಳು ಗುರಿಯಾಗಿ ಬದಲಾಗಬೇಕು ಎಂದು ಪರಿವರ್ತನಾ ಶಾಲೆ ಡೀನ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆರ್.ಎ. ಚೇತನ್ ರಾಮ್ ತಿಳಿಸಿದರು.
ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 'ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಮತ್ತು ಕ್ರೀಡಾ ವೇದಿಕೆ' ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
''ಖಚಿತವಾದ ಕನಸುಗಳನ್ನು ಗುರಿ ಎನ್ನುವರು. ಖಚಿತವಲ್ಲದ ಗುರಿಗಳನ್ನು ಕನಸು ಎನ್ನುವರು. ಉತ್ತಮ ಅಂಕ ಪಡೆದುಕೊಳ್ಳದೇ ಇರುವುದಿಲ್ಲ ಎಂಬುದು ಗುರಿ. ಉತ್ತಮ ಅಂಕ ಬಂದರೆ? ಎಂದುಕೊಂಡು ಸುಮ್ಮನಾಗುವುದು ಕನಸು,'' ಎಂದರು.
''ನೀವು ಓದುತ್ತಿರುವ ವಿಷಯಗಳ ಕುರಿತು ಹೆಮ್ಮೆ ಇರಲಿ. ಇಂದು ಪರಿಸ್ಥಿತಿ ಬದಲಾಗುತ್ತಿದೆ. 16 ಲಕ್ಷ ಎಂಜಿನಿಯರಿಂಗ್ ಸೀಟ್ನಲ್ಲಿ ಕೇವಲ 7 ಲಕ್ಷ ಸೀಟುಗಳು ಭರ್ತಿಯಾಗಿವೆ. 926 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಗಿದೆ. ನಾವು ಏನು ಓದುತ್ತಿದ್ದೇವೆ ಎಂಬುದು ಮುಖ್ಯವಲ್ಲ. ಹೇಗೆ ಓದುತ್ತಿದ್ದೇವೆ ಎಂಬುದು ಮುಖ್ಯ. ಜಗತ್ತಿನಲ್ಲಿ ಪ್ರತಿಭಾವಂತರಲ್ಲದವರು ಯಾರು ಇಲ್ಲ. ಒಬ್ಬರಿಗಿಂತ ಒಬ್ಬರು ಭಿನ್ನವಷ್ಟೆ. ಬದುಕು ಬೇಸರವಾಗದಿರಲು ನಿತ್ಯವೂ ಭಿನ್ನ ಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು,'' ಎಂದು ಕಿವಿಮಾತು ಹೇಳಿದರು.
''ಇನ್ನೊಬ್ಬರಿಗೆ ಸಹಾಯಕನಾಗಿ ಹೋಗಿದ್ದ ತೇನ್ಸಿಂಗ್ ತಾನೇ ಮೊದಲು ಮೌಂಟ್ ಎವರೆಸ್ಟ್ ಏರಿದರು. 'ನೀವು ಯಾಕೆ ಎವರೆಸ್ಟ್ ಹತ್ತಿದಿರಿ' ಎಂದು ಆತನನ್ನು ಪ್ರಶ್ನಿಸಿದಾಗ, 'ಎವರೆಸ್ಟ್ ಇತ್ತು. ಅದಕ್ಕೆ ಹತ್ತಿದೆ' ಎಂದಿದ್ದರು. ಅಸಾಧ್ಯವೆಂದರೆ ಎಲ್ಲವೂ ಅಸಾಧ್ಯ. ಸಾಧ್ಯವೆಂದರೆ ಎಲ್ಲವೂ ಸಾಧ್ಯ. ಪರೀಕ್ಷೆಗಳಿಗೆ ಹೆದರಬಾರದು. ಪರೀಕ್ಷೆಯೆಂದರೆ ಹಬ್ಬ. ಯಶಸ್ವಿ ಬದುಕು ರೂಪಿಸಿಕೊಳ್ಳಲು ಜ್ಞಾನ, ಕೌಶಲ, ಆತ್ಮವಿಶ್ವಾಸ ಮುಖ್ಯ. ಹೆಣ್ಣುಮಕ್ಕಳು ಬೇಗ ವಿವಾಹವಾಗಬಾರದು. ಉನ್ನತ ಶಿಕ್ಷಣ ಪಡೆಯಬೇಕು. ಸ್ತ್ರೀ ಸ್ವಾತಂತ್ರ್ಯವೆಂದರೆ ಆರ್ಥಿಕ ಸ್ವಾತಂತ್ರ್ಯ,'' ಎಂದು ತಿಳಿಸಿದರು.
ಮೈಸೂರು ವಿ.ವಿ. ಪ್ರಭಾರ ಕುಲಪತಿ ಪೊ›.ಟಿ.ಕೆ.ಉಮೇಶ್, ನೈರುತ್ಯ ರೈಲ್ವೆ ವಾಣಿಜ್ಯ ಮೇಲ್ವಿಚಾರಕಿ ಹಾಗೂ ಓಟಗಾರ್ತಿ ಸಿ.ಜಿ.ಸರೋಜಾ, ಪ್ರಾಂಶುಪಾಲ ಡಾ.ಕೆ.ವಿ.ಸುರೇಶ್, ಶೈಕ್ಷಣಿಕ ಡೀನ್ ಎಚ್.ಬಿ.ಸುರೇಶ್, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವೇದಿಕೆ ಸಂಚಾಲಕಿ ಬಿ.ಸೌಮ್ಯಾ, ದೈಹಿಕ ಶಿಕ್ಷಕಿ ಎ.ರಶ್ಮಿ ಇತರರು ಉಪಸ್ಥಿತರಿದ್ದರು.
ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 'ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಮತ್ತು ಕ್ರೀಡಾ ವೇದಿಕೆ' ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
''ಖಚಿತವಾದ ಕನಸುಗಳನ್ನು ಗುರಿ ಎನ್ನುವರು. ಖಚಿತವಲ್ಲದ ಗುರಿಗಳನ್ನು ಕನಸು ಎನ್ನುವರು. ಉತ್ತಮ ಅಂಕ ಪಡೆದುಕೊಳ್ಳದೇ ಇರುವುದಿಲ್ಲ ಎಂಬುದು ಗುರಿ. ಉತ್ತಮ ಅಂಕ ಬಂದರೆ? ಎಂದುಕೊಂಡು ಸುಮ್ಮನಾಗುವುದು ಕನಸು,'' ಎಂದರು.
''ನೀವು ಓದುತ್ತಿರುವ ವಿಷಯಗಳ ಕುರಿತು ಹೆಮ್ಮೆ ಇರಲಿ. ಇಂದು ಪರಿಸ್ಥಿತಿ ಬದಲಾಗುತ್ತಿದೆ. 16 ಲಕ್ಷ ಎಂಜಿನಿಯರಿಂಗ್ ಸೀಟ್ನಲ್ಲಿ ಕೇವಲ 7 ಲಕ್ಷ ಸೀಟುಗಳು ಭರ್ತಿಯಾಗಿವೆ. 926 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಗಿದೆ. ನಾವು ಏನು ಓದುತ್ತಿದ್ದೇವೆ ಎಂಬುದು ಮುಖ್ಯವಲ್ಲ. ಹೇಗೆ ಓದುತ್ತಿದ್ದೇವೆ ಎಂಬುದು ಮುಖ್ಯ. ಜಗತ್ತಿನಲ್ಲಿ ಪ್ರತಿಭಾವಂತರಲ್ಲದವರು ಯಾರು ಇಲ್ಲ. ಒಬ್ಬರಿಗಿಂತ ಒಬ್ಬರು ಭಿನ್ನವಷ್ಟೆ. ಬದುಕು ಬೇಸರವಾಗದಿರಲು ನಿತ್ಯವೂ ಭಿನ್ನ ಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು,'' ಎಂದು ಕಿವಿಮಾತು ಹೇಳಿದರು.
''ಇನ್ನೊಬ್ಬರಿಗೆ ಸಹಾಯಕನಾಗಿ ಹೋಗಿದ್ದ ತೇನ್ಸಿಂಗ್ ತಾನೇ ಮೊದಲು ಮೌಂಟ್ ಎವರೆಸ್ಟ್ ಏರಿದರು. 'ನೀವು ಯಾಕೆ ಎವರೆಸ್ಟ್ ಹತ್ತಿದಿರಿ' ಎಂದು ಆತನನ್ನು ಪ್ರಶ್ನಿಸಿದಾಗ, 'ಎವರೆಸ್ಟ್ ಇತ್ತು. ಅದಕ್ಕೆ ಹತ್ತಿದೆ' ಎಂದಿದ್ದರು. ಅಸಾಧ್ಯವೆಂದರೆ ಎಲ್ಲವೂ ಅಸಾಧ್ಯ. ಸಾಧ್ಯವೆಂದರೆ ಎಲ್ಲವೂ ಸಾಧ್ಯ. ಪರೀಕ್ಷೆಗಳಿಗೆ ಹೆದರಬಾರದು. ಪರೀಕ್ಷೆಯೆಂದರೆ ಹಬ್ಬ. ಯಶಸ್ವಿ ಬದುಕು ರೂಪಿಸಿಕೊಳ್ಳಲು ಜ್ಞಾನ, ಕೌಶಲ, ಆತ್ಮವಿಶ್ವಾಸ ಮುಖ್ಯ. ಹೆಣ್ಣುಮಕ್ಕಳು ಬೇಗ ವಿವಾಹವಾಗಬಾರದು. ಉನ್ನತ ಶಿಕ್ಷಣ ಪಡೆಯಬೇಕು. ಸ್ತ್ರೀ ಸ್ವಾತಂತ್ರ್ಯವೆಂದರೆ ಆರ್ಥಿಕ ಸ್ವಾತಂತ್ರ್ಯ,'' ಎಂದು ತಿಳಿಸಿದರು.
ಮೈಸೂರು ವಿ.ವಿ. ಪ್ರಭಾರ ಕುಲಪತಿ ಪೊ›.ಟಿ.ಕೆ.ಉಮೇಶ್, ನೈರುತ್ಯ ರೈಲ್ವೆ ವಾಣಿಜ್ಯ ಮೇಲ್ವಿಚಾರಕಿ ಹಾಗೂ ಓಟಗಾರ್ತಿ ಸಿ.ಜಿ.ಸರೋಜಾ, ಪ್ರಾಂಶುಪಾಲ ಡಾ.ಕೆ.ವಿ.ಸುರೇಶ್, ಶೈಕ್ಷಣಿಕ ಡೀನ್ ಎಚ್.ಬಿ.ಸುರೇಶ್, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವೇದಿಕೆ ಸಂಚಾಲಕಿ ಬಿ.ಸೌಮ್ಯಾ, ದೈಹಿಕ ಶಿಕ್ಷಕಿ ಎ.ರಶ್ಮಿ ಇತರರು ಉಪಸ್ಥಿತರಿದ್ದರು.